<p><strong>ಹೊಸಪೇಟೆ: ‘</strong>ಈ ಹಿಂದೆ ಯಕ್ಷಗಾನ ಒಂದು ನಿರ್ದಿಷ್ಟವಾದ ವರ್ಗಕ್ಕೆ ಸೀಮಿತವಾಗಿತ್ತು. ಆದರೆ, ಈಗ ಅದು ಬದಲಾಗಿದೆ. ಇಂದು ಯಕ್ಷಗಾನ ಕ್ಷೇತ್ರಕ್ಕೆ ಪ್ರಜ್ಞಾವಂತ ಯುವ ಸಮುದಾಯ ಪ್ರವೇಶ ಪಡೆದು, ಹೊಸ ಮಜಲಿನತ್ತ ಹೆಜ್ಜೆ ಹಾಕುತ್ತಿದೆ’ ಎಂದು ಯಕ್ಷಗಾನ ಕಲಾವಿದ ತಾರಾನಾಥ ಬಲ್ಯಾಯ ಹೇಳಿದರು.</p>.<p>ಇಲ್ಲಿನ ಶಂಕರ್ ಆನಂದ್ ಸಿಂಗ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಕರ್ನಾಟಕ ಕಲಾಭಿಮಾನಿ ಸಂಘದ ಸಹಭಾಗಿತ್ವದಲ್ಲಿ ಬುಧವಾರ ನಗರದಲ್ಲಿ ಹಮ್ಮಿಕೊಂಡಿದ್ದ ‘ಮಾತಿನ ಕಲೆ; ತಾಳಮದ್ದಳೆ’ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>‘ಭಾರತೀಯ ಪರಂಪರೆ, ಸಂಸ್ಕೃತಿಯನ್ನು ಸಮುದಾಯಗಳಿಗೆ ತಲುಪಿಸಲು ಯಕ್ಷಗಾನ ಪ್ರಭಾವಿ ಮಾಧ್ಯಮವಾಗಿದೆ. ಯಕ್ಷಗಾನ ಕಲಾವಿದರಿಗೆ ಪುರಾಣ ಮತ್ತು ವರ್ತಮಾನದ ಅರಿವು ಇದ್ದು ಸಂದರ್ಭಕ್ಕೆ ಅನುಗುಣವಾಗಿ ಭಾಷೆಯನ್ನು ಪಳಗಿಸುವ ವಿವೇಕ ಇರಬೇಕು’ ಎಂದು ತಿಳಿಸಿದರು.</p>.<p>ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಮೋಹನ ಕುಂಟಾರ್ ಮಾತನಾಡಿ, ‘ಕರಾವಳಿ ಪ್ರದೇಶದ ಕಲೆ ಎಂದೇ ಭಾವಿಸಿಕೊಂಡಿರುವ ಯಕ್ಷಗಾನ ಪರಂಪರೆಗೂ ಬಳ್ಳಾರಿ ಜಿಲ್ಲೆಗೂ ಅವಿನಾಭಾವ ಸಂಬಂಧವಿದೆ. ಬಳ್ಳಾರಿ ಸಮೀಪದ ಸೋಮಸಮುದ್ರದ ದೇವಸ್ಥಾನದಲ್ಲಿ ದೊರೆತಿರುವ ಶಾಸನವೊಂದರಲ್ಲಿ ತಾಳಮದ್ದಳೆ ಪದವು ಪ್ರಸ್ತಾಪಗೊಂಡಿರುವುದು ಅದಕ್ಕೆ ಸಾಕ್ಷಿ’ ಎಂದು ಹೇಳಿದರು.</p>.<p>ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಬಿ ಜಿ ಕನಕೇಶಮೂರ್ತಿ ಮಾತನಾಡಿ, ‘ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯ ಸಾಂಗತ್ಯ ನಮ್ಮಲ್ಲಿ ಸೃಜನಶೀಲತೆ ಗುಣವನ್ನು ಬೆಳೆಸುತ್ತದೆ’ ಎಂದರು.</p>.<p>ಕಾಲೇಜಿನ ಪ್ರಾಧ್ಯಾಪಕರಾದ ಕೆ. ವೆಂಕಟೇಶ್, ನಾಗಣ್ಣ ಕಿಲಾರಿ, ಡಿ.ಎಂ. ಮಲ್ಲಿಕಾರ್ಜುನ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊಸಪೇಟೆ: ‘</strong>ಈ ಹಿಂದೆ ಯಕ್ಷಗಾನ ಒಂದು ನಿರ್ದಿಷ್ಟವಾದ ವರ್ಗಕ್ಕೆ ಸೀಮಿತವಾಗಿತ್ತು. ಆದರೆ, ಈಗ ಅದು ಬದಲಾಗಿದೆ. ಇಂದು ಯಕ್ಷಗಾನ ಕ್ಷೇತ್ರಕ್ಕೆ ಪ್ರಜ್ಞಾವಂತ ಯುವ ಸಮುದಾಯ ಪ್ರವೇಶ ಪಡೆದು, ಹೊಸ ಮಜಲಿನತ್ತ ಹೆಜ್ಜೆ ಹಾಕುತ್ತಿದೆ’ ಎಂದು ಯಕ್ಷಗಾನ ಕಲಾವಿದ ತಾರಾನಾಥ ಬಲ್ಯಾಯ ಹೇಳಿದರು.</p>.<p>ಇಲ್ಲಿನ ಶಂಕರ್ ಆನಂದ್ ಸಿಂಗ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಕರ್ನಾಟಕ ಕಲಾಭಿಮಾನಿ ಸಂಘದ ಸಹಭಾಗಿತ್ವದಲ್ಲಿ ಬುಧವಾರ ನಗರದಲ್ಲಿ ಹಮ್ಮಿಕೊಂಡಿದ್ದ ‘ಮಾತಿನ ಕಲೆ; ತಾಳಮದ್ದಳೆ’ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>‘ಭಾರತೀಯ ಪರಂಪರೆ, ಸಂಸ್ಕೃತಿಯನ್ನು ಸಮುದಾಯಗಳಿಗೆ ತಲುಪಿಸಲು ಯಕ್ಷಗಾನ ಪ್ರಭಾವಿ ಮಾಧ್ಯಮವಾಗಿದೆ. ಯಕ್ಷಗಾನ ಕಲಾವಿದರಿಗೆ ಪುರಾಣ ಮತ್ತು ವರ್ತಮಾನದ ಅರಿವು ಇದ್ದು ಸಂದರ್ಭಕ್ಕೆ ಅನುಗುಣವಾಗಿ ಭಾಷೆಯನ್ನು ಪಳಗಿಸುವ ವಿವೇಕ ಇರಬೇಕು’ ಎಂದು ತಿಳಿಸಿದರು.</p>.<p>ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಮೋಹನ ಕುಂಟಾರ್ ಮಾತನಾಡಿ, ‘ಕರಾವಳಿ ಪ್ರದೇಶದ ಕಲೆ ಎಂದೇ ಭಾವಿಸಿಕೊಂಡಿರುವ ಯಕ್ಷಗಾನ ಪರಂಪರೆಗೂ ಬಳ್ಳಾರಿ ಜಿಲ್ಲೆಗೂ ಅವಿನಾಭಾವ ಸಂಬಂಧವಿದೆ. ಬಳ್ಳಾರಿ ಸಮೀಪದ ಸೋಮಸಮುದ್ರದ ದೇವಸ್ಥಾನದಲ್ಲಿ ದೊರೆತಿರುವ ಶಾಸನವೊಂದರಲ್ಲಿ ತಾಳಮದ್ದಳೆ ಪದವು ಪ್ರಸ್ತಾಪಗೊಂಡಿರುವುದು ಅದಕ್ಕೆ ಸಾಕ್ಷಿ’ ಎಂದು ಹೇಳಿದರು.</p>.<p>ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಬಿ ಜಿ ಕನಕೇಶಮೂರ್ತಿ ಮಾತನಾಡಿ, ‘ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯ ಸಾಂಗತ್ಯ ನಮ್ಮಲ್ಲಿ ಸೃಜನಶೀಲತೆ ಗುಣವನ್ನು ಬೆಳೆಸುತ್ತದೆ’ ಎಂದರು.</p>.<p>ಕಾಲೇಜಿನ ಪ್ರಾಧ್ಯಾಪಕರಾದ ಕೆ. ವೆಂಕಟೇಶ್, ನಾಗಣ್ಣ ಕಿಲಾರಿ, ಡಿ.ಎಂ. ಮಲ್ಲಿಕಾರ್ಜುನ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>