‘ಹುಲಿ ಚರ್ಮ, ಉಗುರು ಮಾರಾಟ ನೆಪದಲ್ಲಿ ರಾಮಾಂಜನಿ ಅವರನ್ನು ವಶಕ್ಕೆ ಪಡೆದಿದ್ದ ಪಿಎಸ್ಐ ಹಾಗೂ ಇತರರು, ಅಕ್ರಮ ಬಂಧನದಲ್ಲಿಟ್ಟು ₹ 40 ಲಕ್ಷಕ್ಕೆ ಬೇಡಿಕೆ ಇರಿಸಿದ್ದರು. ಪ್ರಮುಖ ಆರೋಪಿ ರಂಗೇಶ್ ಹಾಗೂ ಕಾನ್ಸ್ಟೆಬಲ್ಗಳು ತಲೆಮರೆಸಿಕೊಂಡಿದ್ದು, ಅವರಿಗಾಗಿ ಹುಡುಕಾಟ ಮುಂದುವರಿದಿದೆ’ ಎಂದು ಬಾಗಲೂರು ಪೊಲೀಸರು ಹೇಳಿದರು.