<p><strong>ಬೆಂಗಳೂರು:</strong> ‘ಬಿಡಿಎ ರಚಿಸುವ ಪರಿಷ್ಕೃತ ಮಹಾ ಯೋಜನೆ–2031ರ ಕರಡ (ಸಿಡಿಪಿ) ವರದಿ, ಸಮರ್ಪಕವಾಗಿಲ್ಲ. ಅವ್ಯವಹಾರಕ್ಕೆ ದಾರಿಮಾಡಿಕೊಡುವಂತಿದೆ’ ಎಂದು ಶಾಸಕ ಅರವಿಂದ ಲಿಂಬಾವಳಿ ಆರೋಪಿಸಿದರು.</p>.<p>ಮಹದೇವಪುರ ಕ್ಷೇತ್ರದ ದೊಡ್ಡನೆಕುಂದಿ ವಾರ್ಡ್ನ ಕುಂದಲಹಳ್ಳಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಾರ್ಡ್ ಅಭಿವೃದ್ಧಿಗೆ ಅಗತ್ಯವಾದ ಆ್ಯಪ್ ಬಿಡುಗಡಗೊಳಿಸಿ ಅವರು ಮಾತನಾಡಿದರು.</p>.<p>‘ವರದಿಯಲ್ಲಿ ಕಟ್ಟಡ ಇರುವ ಕರೆ ರಸ್ತೆ ತೋರಿಸಿದ್ದಾರೆ. ಇದು ಕಟ್ಟಡ ಮಾಲೀಕರಲ್ಲಿ ಬೆದರಿಕೆ ಹುಟ್ಟಿಸಲು ಮಾಡಿರುವ ತಂತ್ರ. ನಂತರ ಮಾಲೀಕರಿಂದ ದುಡ್ಡು ವಸೂಲಿ ಮಾಡಿ ರಸ್ತೆ ಬದಲಿಸುತ್ತಾರೆ. ನಗರಕ್ಕೆ ದೊಡ್ಡ ಸಮಸ್ಯೆಯಾಗಿರುವ ಸಂಚಾರ ದಟ್ಟಣೆಗೆ ಶಾಶ್ವತ ಪರಿಹಾರವಿಲ್ಲ’ ಎಂದು ಹೇಳಿದರು.</p>.<p>‘ಚಲ್ಲಘಟ್ಟ ಬಳಿಯಿರುವ ಗಾಲ್ಫ್ ಕೋರ್ಟ್ ಹಿಂದೆ ಕೆರೆಯಾಗಿತ್ತು. ಗ್ರಾಮ ನಕ್ಷೆಯಲ್ಲಿ ಕೆರೆ ಎಂದು ಹೆಸರಿಸಲಾಗಿದೆ. ಬಿಬಿಎಂಪಿಯಲ್ಲಿ ಕೆರೆ ಕಣ್ಮರೆಯಾಗಿದೆ,. ಸಿಡಿಪಿಯಲ್ಲೂ ಕೆರೆ ಕಾಣುತ್ತಿಲ್ಲ’ ಎಂದರು.</p>.<p>‘ಕಣ್ಮರೆಯಾಗಿರುವ ಕೆರೆಗೂ ಬಫರ್ ಜೋನ್ ತೋರಿಸಿದ್ದಾರೆ. ಕೆಲವೆಡೆ ಕೆರೆಗಳು ಡಿ–ನೋಟಿಫೈ ಆಗಿವೆ. ಈಗಿರುವ ಕೆರೆಗಳನ್ನು ಉಳಿಸಿಕೊಳ್ಳುವುದು ಬಿಟ್ಟು ಇಲ್ಲದ ಕೆರೆಗಳತ್ತ ಮುಖ ಮಾಡಿದ್ದಾರೆ. ನಮ್ಮ ಸರ್ಕಾರ ಬಂದರೆ ಈ ಯೋಜನೆ ಮರು ಪರಿಶೀಲಿಸಿ ಸೂಕ್ತ ಯೋಜನೆ ರೂಪಿಸುತ್ತೇವೆ’ ಎಂದರು.</p>.<p>‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜನರ ತೆರಿಗೆಯಲ್ಲಿ ತಮ್ಮ ಪಕ್ಷದ ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ. ಈ ಬಗ್ಗೆ ಪಿಐಎಲ್ ಅರ್ಜಿ ಸಲ್ಲಿಸಲಾಗಿದೆ’ ಎಂದರು.</p>.<p>ದೊಡ್ಡನಕುಂದಿ ವಾರ್ಡ್ನ ಪಾಲಿಕೆ ಸದಸ್ಯೆ ಶ್ವೇತಾ ವಿಜಯ್ ಕುಮಾರ್, ‘3 ವರ್ಷಗಳಲ್ಲಿ ಸಮಗ್ರ ಅಭಿವೃದ್ಧಿ ಮಾಡಿದ್ದೇವೆ. ವಾರ್ಡ್ನಲ್ಲಿ ಆಗಬೇಕಾದ ಅಭಿವೃದ್ಧಿ ಕೆಲಸಗಳ ಬಗ್ಗೆ ದೂರು ಅಥವಾ ಸಲಹೆಗಳನ್ನು ತಿಳಿಸಲು ಆ್ಯಪ್ ಬಿಡುಗಡೆ ಮಾಡಲಾಗಿದೆ’ ಎಂದು ತಿಳಿಸಿದರು.</p>.<p>ಪಾಲಿಕೆ ಸದಸ್ಯೆ ಶ್ವೇತಾ ವಿಜಯ್ ಕುಮಾರ್, ‘ಜನರು ತಮ್ಮ ಗಮನಕ್ಕೆ ಬರುವ ಕುಂದುಕೊರತೆಗಳು, ತಾವು ಎದುರಿಸುವ ಸಮಸ್ಯೆಗಳು ಮತ್ತು ಸಲಹೆಗಳನ್ನು ಆಪ್ ಮೂಲಕ ತಿಳಿಸಬಹುದು ಹಾಗೂ ವಾರ್ಡ್ನ ಚಟುವಟಿಕೆಗಳನ್ನು ಅರಿಯುವ ಮೂಲಕ ಆಡಳಿತದಲ್ಲಿ ಪ್ರತ್ಯಕ್ಷವಾಗಿ ಪಾಲ್ಗೊಳ್ಳಬಹುದು’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ‘ಬಿಡಿಎ ರಚಿಸುವ ಪರಿಷ್ಕೃತ ಮಹಾ ಯೋಜನೆ–2031ರ ಕರಡ (ಸಿಡಿಪಿ) ವರದಿ, ಸಮರ್ಪಕವಾಗಿಲ್ಲ. ಅವ್ಯವಹಾರಕ್ಕೆ ದಾರಿಮಾಡಿಕೊಡುವಂತಿದೆ’ ಎಂದು ಶಾಸಕ ಅರವಿಂದ ಲಿಂಬಾವಳಿ ಆರೋಪಿಸಿದರು.</p>.<p>ಮಹದೇವಪುರ ಕ್ಷೇತ್ರದ ದೊಡ್ಡನೆಕುಂದಿ ವಾರ್ಡ್ನ ಕುಂದಲಹಳ್ಳಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಾರ್ಡ್ ಅಭಿವೃದ್ಧಿಗೆ ಅಗತ್ಯವಾದ ಆ್ಯಪ್ ಬಿಡುಗಡಗೊಳಿಸಿ ಅವರು ಮಾತನಾಡಿದರು.</p>.<p>‘ವರದಿಯಲ್ಲಿ ಕಟ್ಟಡ ಇರುವ ಕರೆ ರಸ್ತೆ ತೋರಿಸಿದ್ದಾರೆ. ಇದು ಕಟ್ಟಡ ಮಾಲೀಕರಲ್ಲಿ ಬೆದರಿಕೆ ಹುಟ್ಟಿಸಲು ಮಾಡಿರುವ ತಂತ್ರ. ನಂತರ ಮಾಲೀಕರಿಂದ ದುಡ್ಡು ವಸೂಲಿ ಮಾಡಿ ರಸ್ತೆ ಬದಲಿಸುತ್ತಾರೆ. ನಗರಕ್ಕೆ ದೊಡ್ಡ ಸಮಸ್ಯೆಯಾಗಿರುವ ಸಂಚಾರ ದಟ್ಟಣೆಗೆ ಶಾಶ್ವತ ಪರಿಹಾರವಿಲ್ಲ’ ಎಂದು ಹೇಳಿದರು.</p>.<p>‘ಚಲ್ಲಘಟ್ಟ ಬಳಿಯಿರುವ ಗಾಲ್ಫ್ ಕೋರ್ಟ್ ಹಿಂದೆ ಕೆರೆಯಾಗಿತ್ತು. ಗ್ರಾಮ ನಕ್ಷೆಯಲ್ಲಿ ಕೆರೆ ಎಂದು ಹೆಸರಿಸಲಾಗಿದೆ. ಬಿಬಿಎಂಪಿಯಲ್ಲಿ ಕೆರೆ ಕಣ್ಮರೆಯಾಗಿದೆ,. ಸಿಡಿಪಿಯಲ್ಲೂ ಕೆರೆ ಕಾಣುತ್ತಿಲ್ಲ’ ಎಂದರು.</p>.<p>‘ಕಣ್ಮರೆಯಾಗಿರುವ ಕೆರೆಗೂ ಬಫರ್ ಜೋನ್ ತೋರಿಸಿದ್ದಾರೆ. ಕೆಲವೆಡೆ ಕೆರೆಗಳು ಡಿ–ನೋಟಿಫೈ ಆಗಿವೆ. ಈಗಿರುವ ಕೆರೆಗಳನ್ನು ಉಳಿಸಿಕೊಳ್ಳುವುದು ಬಿಟ್ಟು ಇಲ್ಲದ ಕೆರೆಗಳತ್ತ ಮುಖ ಮಾಡಿದ್ದಾರೆ. ನಮ್ಮ ಸರ್ಕಾರ ಬಂದರೆ ಈ ಯೋಜನೆ ಮರು ಪರಿಶೀಲಿಸಿ ಸೂಕ್ತ ಯೋಜನೆ ರೂಪಿಸುತ್ತೇವೆ’ ಎಂದರು.</p>.<p>‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜನರ ತೆರಿಗೆಯಲ್ಲಿ ತಮ್ಮ ಪಕ್ಷದ ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ. ಈ ಬಗ್ಗೆ ಪಿಐಎಲ್ ಅರ್ಜಿ ಸಲ್ಲಿಸಲಾಗಿದೆ’ ಎಂದರು.</p>.<p>ದೊಡ್ಡನಕುಂದಿ ವಾರ್ಡ್ನ ಪಾಲಿಕೆ ಸದಸ್ಯೆ ಶ್ವೇತಾ ವಿಜಯ್ ಕುಮಾರ್, ‘3 ವರ್ಷಗಳಲ್ಲಿ ಸಮಗ್ರ ಅಭಿವೃದ್ಧಿ ಮಾಡಿದ್ದೇವೆ. ವಾರ್ಡ್ನಲ್ಲಿ ಆಗಬೇಕಾದ ಅಭಿವೃದ್ಧಿ ಕೆಲಸಗಳ ಬಗ್ಗೆ ದೂರು ಅಥವಾ ಸಲಹೆಗಳನ್ನು ತಿಳಿಸಲು ಆ್ಯಪ್ ಬಿಡುಗಡೆ ಮಾಡಲಾಗಿದೆ’ ಎಂದು ತಿಳಿಸಿದರು.</p>.<p>ಪಾಲಿಕೆ ಸದಸ್ಯೆ ಶ್ವೇತಾ ವಿಜಯ್ ಕುಮಾರ್, ‘ಜನರು ತಮ್ಮ ಗಮನಕ್ಕೆ ಬರುವ ಕುಂದುಕೊರತೆಗಳು, ತಾವು ಎದುರಿಸುವ ಸಮಸ್ಯೆಗಳು ಮತ್ತು ಸಲಹೆಗಳನ್ನು ಆಪ್ ಮೂಲಕ ತಿಳಿಸಬಹುದು ಹಾಗೂ ವಾರ್ಡ್ನ ಚಟುವಟಿಕೆಗಳನ್ನು ಅರಿಯುವ ಮೂಲಕ ಆಡಳಿತದಲ್ಲಿ ಪ್ರತ್ಯಕ್ಷವಾಗಿ ಪಾಲ್ಗೊಳ್ಳಬಹುದು’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>