<p><strong>ಬೆಂಗಳೂರು:</strong> ಅನಕ್ಷರಸ್ಥ ಮಹಿಳೆಯರ ಲೋಕಜ್ಞಾನಕ್ಕೂ ಸಮಾಜದಲ್ಲಿ ಮನ್ನಣೆ ಸಿಗಬೇಕಿದೆ ಎಂದು ಸಾಮಾಜಿಕ ಹೋರಾಟಗಾರ್ತಿ ಚಿತ್ರಾ ಸಹಸ್ರಬುದ್ಧೆ ಅಭಿಪ್ರಾಯಪಟ್ಟರು.</p>.<p>ಗ್ರಾಮ ಸೇವಾ ಸಂಘವು ನಗರದಲ್ಲಿ ಭಾನುವಾರ ಆಯೋಜಿಸಿದ್ದ ‘ಲೋಕವಿದ್ಯೆ ಹಾಗೂ ಮಹಿಳೆ’ ವಿಚಾರ ಸಂಕಿರಣದಲ್ಲಿ ಮಾತನಾಡಿದರು.</p>.<p>ಮಹಿಳೆ ಜ್ಞಾನದ ಒಡತಿ. ಅದನ್ನು ಗುರುತಿಸಿ, ಸಮಾಜದಲ್ಲಿ ಮೌಲ್ಯ ಸಿಗುವಂತೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿ. ಸಂಕೋಲೆಗಳಲ್ಲಿ ಬಂದಿಯಾಗಿರುವ ಆಕೆಯ ಜ್ಞಾನಕ್ಕೆ ಈ ಮೂಲಕ ಬಿಡುಗಡೆಯ ಭಾಗ್ಯ ಕಲ್ಪಿಸಬೇಕು ಎಂದು ವಿದ್ಯಾ ಆಶ್ರಮದ ಸಂಸ್ಥಾಪಕ ಸದಸ್ಯೆಯೂ ಆಗಿರುವ ಚಿತ್ರಾ ಒತ್ತಾಯಿಸಿದರು.</p>.<p>‘ವಿಶ್ವವಿದ್ಯಾಲಯಗಳಲ್ಲಿನ ಜ್ಞಾನವೇ ಗುಣಮಟ್ಟದ್ದು ಎಂಬ ಭಾವನೆ ಸಮಾಜದಲ್ಲಿದೆ. ಅನಕ್ಷರಸ್ಥ ಮಹಿಳೆ ಓದಿನ ಮೂಲಕ ಜ್ಞಾನ ಪಡೆದಿಲ್ಲ ಎಂಬ ಕಾರಣಕ್ಕೆ ಅದನ್ನು ಅಲ್ಲಗೆಳೆಯಲಾಗುತ್ತಿದೆ. ಇದರಿಂದ ಸಮಾಜದ ಶೇ 80 ರಷ್ಟು ಮಹಿಳೆಯರ ಜ್ಞಾನ ಗುರುತಿಸಲು ವಿಫಲರಾಗಿದ್ದೇವೆ’ ಎಂದರು.</p>.<p>ಮನೆ ನಿರ್ವಹಣೆಯ ಜವಾಬ್ದಾರಿಯನ್ನು ಪರಿಪಕ್ವತೆಯಿಂದ ನಿರ್ವಹಿಸುತ್ತಿರುವ ಮಹಿಳೆ, ಮನೋವೈದ್ಯೆಯೂ ಹೌದು. ಮಕ್ಕಳಿಗೆ ಲೋಕಸತ್ಯವನ್ನು ತಿಳಿಸಿ, ಸಮಾಜದಲ್ಲಿ ಯಾವ ರೀತಿ ನಡೆದುಕೊಳ್ಳಬೇಕು ಎಂಬ ದಾರಿಯನ್ನು ಮಹಿಳೆಯೇ ತೋರಿಸಿ ಕೊಡುತ್ತಾಳೆ ಎಂದು ವಿಶ್ಲೇಷಿಸಿದರು.</p>.<p>ಇತ್ತೀಚಿನ ದಿನಗಳಲ್ಲಿ ಮಹಿಳೆಯರ ನೇತೃತ್ವದ ಚಳವಳಿಗಳು ವ್ಯಾಪಕಗೊಳ್ಳುತ್ತಿವೆ. ‘ಪಂಜರವನ್ನು ಮುರಿದು ಹಾಕಿ’ ಹಾಗೂ ‘#ಮೀ ಟೂ’ ಜನಾಂದೋಲನಗಳು ಉದಾಹರಣೆ. ಮಾಧ್ಯಮಗಳಿಂದಲೂ ಬೆಂಬಲ ಸಿಗುತ್ತಿದೆ. ಸಮಾನತೆ ಹಾಗೂ ಸ್ವಾಯತ್ತತೆಗಾಗಿ ಅವು ನಡೆಯುತ್ತಿರುವುದು ಆರೋಗ್ಯಕರ ಬೆಳವಣಿಗೆ ಎಂದರು.</p>.<p>ಇಂತಹ ಚಳವಳಿಗಳು ಹಾಗೂ ಜನಾಂದೋಲನಗಳಲ್ಲಿ ರೈತಾಪಿ ವರ್ಗ, ಕುಶಲಕರ್ಮಿಗಳು ಹಾಗೂ ಓದು–ಬರಹದಿಂದ ಆಚೆ ಉಳಿದಿರುವವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಾಗಬೇಕು. ಆಗ ಮಾತ್ರ ಸ್ವಾಯತ್ತತೆ ಹಾಗೂ ಸಮಾನತೆ ಸಿಗಲು ಸಾಧ್ಯ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಅನಕ್ಷರಸ್ಥ ಮಹಿಳೆಯರ ಲೋಕಜ್ಞಾನಕ್ಕೂ ಸಮಾಜದಲ್ಲಿ ಮನ್ನಣೆ ಸಿಗಬೇಕಿದೆ ಎಂದು ಸಾಮಾಜಿಕ ಹೋರಾಟಗಾರ್ತಿ ಚಿತ್ರಾ ಸಹಸ್ರಬುದ್ಧೆ ಅಭಿಪ್ರಾಯಪಟ್ಟರು.</p>.<p>ಗ್ರಾಮ ಸೇವಾ ಸಂಘವು ನಗರದಲ್ಲಿ ಭಾನುವಾರ ಆಯೋಜಿಸಿದ್ದ ‘ಲೋಕವಿದ್ಯೆ ಹಾಗೂ ಮಹಿಳೆ’ ವಿಚಾರ ಸಂಕಿರಣದಲ್ಲಿ ಮಾತನಾಡಿದರು.</p>.<p>ಮಹಿಳೆ ಜ್ಞಾನದ ಒಡತಿ. ಅದನ್ನು ಗುರುತಿಸಿ, ಸಮಾಜದಲ್ಲಿ ಮೌಲ್ಯ ಸಿಗುವಂತೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿ. ಸಂಕೋಲೆಗಳಲ್ಲಿ ಬಂದಿಯಾಗಿರುವ ಆಕೆಯ ಜ್ಞಾನಕ್ಕೆ ಈ ಮೂಲಕ ಬಿಡುಗಡೆಯ ಭಾಗ್ಯ ಕಲ್ಪಿಸಬೇಕು ಎಂದು ವಿದ್ಯಾ ಆಶ್ರಮದ ಸಂಸ್ಥಾಪಕ ಸದಸ್ಯೆಯೂ ಆಗಿರುವ ಚಿತ್ರಾ ಒತ್ತಾಯಿಸಿದರು.</p>.<p>‘ವಿಶ್ವವಿದ್ಯಾಲಯಗಳಲ್ಲಿನ ಜ್ಞಾನವೇ ಗುಣಮಟ್ಟದ್ದು ಎಂಬ ಭಾವನೆ ಸಮಾಜದಲ್ಲಿದೆ. ಅನಕ್ಷರಸ್ಥ ಮಹಿಳೆ ಓದಿನ ಮೂಲಕ ಜ್ಞಾನ ಪಡೆದಿಲ್ಲ ಎಂಬ ಕಾರಣಕ್ಕೆ ಅದನ್ನು ಅಲ್ಲಗೆಳೆಯಲಾಗುತ್ತಿದೆ. ಇದರಿಂದ ಸಮಾಜದ ಶೇ 80 ರಷ್ಟು ಮಹಿಳೆಯರ ಜ್ಞಾನ ಗುರುತಿಸಲು ವಿಫಲರಾಗಿದ್ದೇವೆ’ ಎಂದರು.</p>.<p>ಮನೆ ನಿರ್ವಹಣೆಯ ಜವಾಬ್ದಾರಿಯನ್ನು ಪರಿಪಕ್ವತೆಯಿಂದ ನಿರ್ವಹಿಸುತ್ತಿರುವ ಮಹಿಳೆ, ಮನೋವೈದ್ಯೆಯೂ ಹೌದು. ಮಕ್ಕಳಿಗೆ ಲೋಕಸತ್ಯವನ್ನು ತಿಳಿಸಿ, ಸಮಾಜದಲ್ಲಿ ಯಾವ ರೀತಿ ನಡೆದುಕೊಳ್ಳಬೇಕು ಎಂಬ ದಾರಿಯನ್ನು ಮಹಿಳೆಯೇ ತೋರಿಸಿ ಕೊಡುತ್ತಾಳೆ ಎಂದು ವಿಶ್ಲೇಷಿಸಿದರು.</p>.<p>ಇತ್ತೀಚಿನ ದಿನಗಳಲ್ಲಿ ಮಹಿಳೆಯರ ನೇತೃತ್ವದ ಚಳವಳಿಗಳು ವ್ಯಾಪಕಗೊಳ್ಳುತ್ತಿವೆ. ‘ಪಂಜರವನ್ನು ಮುರಿದು ಹಾಕಿ’ ಹಾಗೂ ‘#ಮೀ ಟೂ’ ಜನಾಂದೋಲನಗಳು ಉದಾಹರಣೆ. ಮಾಧ್ಯಮಗಳಿಂದಲೂ ಬೆಂಬಲ ಸಿಗುತ್ತಿದೆ. ಸಮಾನತೆ ಹಾಗೂ ಸ್ವಾಯತ್ತತೆಗಾಗಿ ಅವು ನಡೆಯುತ್ತಿರುವುದು ಆರೋಗ್ಯಕರ ಬೆಳವಣಿಗೆ ಎಂದರು.</p>.<p>ಇಂತಹ ಚಳವಳಿಗಳು ಹಾಗೂ ಜನಾಂದೋಲನಗಳಲ್ಲಿ ರೈತಾಪಿ ವರ್ಗ, ಕುಶಲಕರ್ಮಿಗಳು ಹಾಗೂ ಓದು–ಬರಹದಿಂದ ಆಚೆ ಉಳಿದಿರುವವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಾಗಬೇಕು. ಆಗ ಮಾತ್ರ ಸ್ವಾಯತ್ತತೆ ಹಾಗೂ ಸಮಾನತೆ ಸಿಗಲು ಸಾಧ್ಯ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>