‘ಕಾಮಗಾರಿಗಳ ನೈಜತೆ ಬಗ್ಗೆ ವರದಿ ನೀಡಲು ಸರ್ಕಾರ ನಾಲ್ಕು ಎಸ್ಐಟಿಗಳನ್ನು ರಚನೆ ಮಾಡಿದೆ. ಇವುಗಳು ವರದಿ ನೀಡಿದ ಮೇಲೆ ಹಣ ಬಿಡುಗಡೆ ಮಾಡುವುದಾಗಿ ಹೇಳಲಾಗಿದೆ. ಆದರೆ, 2019ರಲ್ಲಿ ಮಾಡಿರುವ ಕಾಮಗಾರಿಗಳ ನೈಜತೆಯನ್ನು ಈಗ ಹೇಗೆ ಪರಿಶೀಲಿಸಲಾಗುತ್ತದೆ. ಕಾಮಗಾರಿ ಮುಗಿದ ಮೇಲೆ ಒಂದು ವರ್ಷ ಮಾತ್ರ ದೋಷ ಹೊಣೆಗಾರಿಗೆ ಅವಧಿ (ಡಿಎಲ್ಪಿ) ಇರುತ್ತದೆ. ನಂತರ ಗುತ್ತಿಗೆದಾರರಿಗೆ ಅದರ ಹೊಣೆ ಇರುವುದಿಲ್ಲ. ಆದರೂ ಹೇಗೆ ತಪಾಸಣೆ ಮಾಡುತ್ತಾರೆ’ ಎಂದು ಗುತ್ತಿಗೆದಾರರು ಪ್ರಶ್ನಿಸುತ್ತಿದ್ದಾರೆ.