ಭಾರತೀಯ ಸಮಾಜ ವಿಜ್ಞಾನ ಸಂಸ್ಥೆಯ ನಿರ್ದೇಶಕ ಜಾರ್ಜ್ ಮ್ಯಾಥ್ಯೂ ಮಾತನಾಡಿ, ‘ಸದೃಢ ಸ್ಥಳೀಯ ಸರ್ಕಾರ ರಚನೆಯೇ ಮುಂದಿನ ಭವಿಷ್ಯ. ನವದೆಹಲಿಯಲ್ಲಿ ಸ್ಥಳೀಯ ಸರ್ಕಾರ ಸಚಿವಾಲಯ ಸ್ಥಾಪನೆಗೊಳ್ಳಬೇಕು’ ಎಂದ ಅವರು, ‘ನಗರ ಪ್ರದೇಶಗಳಲ್ಲಿ ಜನಸಾಮಾನ್ಯನ ದ್ವನಿಗೆ ಬೆಲೆ ಇಲ್ಲವಾಗಿದೆ. ಕಂಪೆನಿಗಳು, ಕಾರ್ಪೊರೇಟ್ ಶಕ್ತಿಗಳು ಇಡೀ ವ್ಯವಸ್ಥೆಯನ್ನು ನಿಯಂತ್ರಿಸುತ್ತಿವೆ. ಒಟ್ಟಾರೆ ಮಾಫಿಯಾ ಶಕ್ತಿ ಈ ಎಲ್ಲ ವ್ಯವಸ್ಥೆಯ ಹಿಂದೆ ಇದೆ’ ಎಂದು ಆತಂಕ ವ್ಯಕ್ತಪಡಿಸಿದರು.