<p>ಬೆಂಗಳೂರು: ‘ಸಿಲಿಕಾನ್ ಸಿಟಿ’ಯಲ್ಲಿನ ಪ್ರೇಮಿಗಳ ನೆಚ್ಚಿನ ತಾಣ, ವಾಯುವಿಹಾರಿಗಳ ಸ್ವರ್ಗ ಲಾಲ್ಬಾಗ್ ಈ ವರ್ಷದ ಫಲಪುಷ್ಪ ಪ್ರದರ್ಶನಕ್ಕೆ ಅಣಿಯಾಗುತ್ತಿದೆ. ನಾಡಿನ ಪುಷ್ಪಪ್ರಿಯರನ್ನು ಸೆಳೆಯಲು ಕಾರ್ಮಿಕರು<br />ಶ್ರಮಿಸುತ್ತಿದ್ಧಾರೆ.</p>.<p>ಕನ್ನಡ ಚಿತ್ರರಂಗಕ್ಕೆ ಅಮೂಲ್ಯ ಕೊಡುಗೆ ನೀಡಿರುವ ನಟರಾದ ದಿವಂಗತ ಡಾ.ರಾಜ್ಕುಮಾರ್ ಮತ್ತು ಪುನೀತ್ ರಾಜ್ಕುಮಾರ್ ಅವರಿಗೆ ಈ ವರ್ಷ ಪುಷ್ಪ ಗೌರವ ಸಲ್ಲಿಸಲು ತಯಾರಿ ಮಾಡಿಕೊಳ್ಳಲಾಗುತ್ತಿದೆ.</p>.<p>ಮಳೆಯಿಂದ ಲಾಲ್ಬಾಗ್ ಹಸಿರಾಗಿದ್ದು, ಸಹಜವಾಗಿಯೇ ತನ್ನ ಸೌಂದರ್ಯ ಹೆಚ್ಚಿಸಿಕೊಂಡಿದೆ. ಕೋವಿಡ್ ಸಾಂಕ್ರಾಮಿಕದ ಬಳಿಕ ಜನಜೀವನ ಸಹಜ ಸ್ಥಿತಿಗೆ ಮರಳಿರುವ ಈ ಹೊತ್ತಿನಲ್ಲಿ 10 ದಿನಗಳ ಕಾಲ ಪುಷ್ಪರಾಶಿಯ ದರ್ಶನಕ್ಕೆ ಸಿದ್ಧತೆಗಳು ಭರದಿಂದ ಸಾಗುತ್ತಿವೆ. ಇದೇ 5ರಿಂದ 15ರ ತನಕ ಲಾಲ್ಬಾಗ್ನಲ್ಲಿ ಪುಷ್ಪ ವೈಭವ ಮನೆ ಮಾಡಿರಲಿದೆ.</p>.<p>ತೋಟಗಾರಿಕೆ ಇಲಾಖೆ, ಮೈಸೂರು ಉದ್ಯಾನ ಕಲಾ ಸಂಘವು ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಹಮ್ಮಿ<br />ಕೊಂಡಿರುವ 212ನೇ ಫಲಪುಷ್ಪ ಪ್ರದರ್ಶನ ಇದಾಗಿದೆ. ಲಾಲ್ಬಾಗ್ ಉದ್ಯಾನದ ಗಾಜಿನ ಮನೆಯಲ್ಲಿ ರಾಜ್ಕುಮಾರ್ ಹಾಗೂ ಪುನೀತ್ ರಾಜ್ಕುಮಾರ್ರ ಹೂವಿನ ಪ್ರತಿಕೃತಿ ರೂಪಿಸಲಾಗುತ್ತಿದೆ.</p>.<p>ಗಾಜನೂರಿನಲ್ಲಿರುವ ರಾಜ್ಕುಮಾರ್ ಅವರ ಪೂರ್ವಜರ ಮನೆ, ಮೈಸೂರಿನ ಶಕ್ತಿಧಾಮದ ಮಾದರಿಗಳು ಪುಷ್ಪಗಳಲ್ಲಿ ಅರಳಲಿವೆ.ಕಬ್ಬನ್ ಪಾರ್ಕ್, ಊಟಿಯ ಖಾಸಗಿ ಸಸ್ಯತೋಟಗಳು ಸೇರಿ ವಿದೇಶದಿಂದ ಬರುವ ಬಗೆಬಗೆಯ ತರಹೇವಾರಿ ಆಲಂಕಾರಿಕ ಪುಷ್ಪ ಬಳಸಲಾಗುವುದು ಎಂದು ಲಾಲ್ಬಾಗ್ ಉಪನಿರ್ದೇಶಕಿ ಕುಸಮಾ ಮಾಹಿತಿ ನೀಡಿದರು</p>.<p>ಸುಮಾರು ₹ 30 ಲಕ್ಷ ವೆಚ್ಚದಲ್ಲಿ ಬೇಡರ ಕಣ್ಣಪ್ಪ ಪರಿಕಲ್ಪನೆಯ ’ವರ್ಟಿಕಲ್ ವಾಲ್‘ ಮಾಡಿ, ಮೆಗಾ ಕ್ಯಾಮೆರಾ ಸ್ಥಾಪಿಸಲಾಗುತ್ತಿದೆ ಎಂದು ’ಭಾಗ್ಯಲಕ್ಷ್ಮಿ ವರ್ಟಿಕಲ್ ವಾಲ್‘ನ ಟೆಕ್ನಿಕಲ್ ಮುಖ್ಯಸ್ಥ ಶಿವರಾಮ ರೆಡ್ಡಿ ಮಾಹಿತಿ ನೀಡಿದರು.</p>.<p>ಗಾಜಿನ ಮನೆ ಆವರಣದಲ್ಲಿ ಪುನೀತ್ ರಾಜ್ಕುಮಾರ್, ರಾಜ್ ಕುಮಾರ್, ರಾಘವೇಂದ್ರ ಸ್ವಾಮಿ, ಬೇಡರ ಕಣ್ಣಪ್ಪ, ರಣಧೀರ ಕಂಠೀರವ ಎಲ್ಲರ ವಿಶೇಷ ಪ್ರತಿಮೆ ಸ್ಥಾಪಿಸಿ ಪುಷ್ಪಾಲಂಕಾರ ಮಾಡಲು ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗುತ್ತದೆ ಎಂದು ’ಸ್ನೀಲ್ ಫ್ಲವರ್ಸ್‘ನ ವ್ಯವಸ್ಥಾಪಕ ಸತ್ಯ ಅಗರ್ವಾಲ್ ತಿಳಿಸಿದರು.<br /><br /><strong>ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ</strong></p>.<p>ರಜೆ ದಿನಗಳಲ್ಲಿ ₹ 100 ಮತ್ತು ಇತರೆ ದಿನಗಳಲ್ಲಿ ₹80, ಮಕ್ಕಳಿಗೆ ₹ 30 ಪ್ರವೇಶ ಶುಲ್ಕ ನಿಗದಿ ಪಡಿಸಲಾಗಿದೆ. 1–10ನೇ ತರಗತಿ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ ಎಂದು ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಡಾ.ಎಂ ಜಗದೀಶ್ ‘ಪ್ರಜಾವಾಣಿ’ಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರು: ‘ಸಿಲಿಕಾನ್ ಸಿಟಿ’ಯಲ್ಲಿನ ಪ್ರೇಮಿಗಳ ನೆಚ್ಚಿನ ತಾಣ, ವಾಯುವಿಹಾರಿಗಳ ಸ್ವರ್ಗ ಲಾಲ್ಬಾಗ್ ಈ ವರ್ಷದ ಫಲಪುಷ್ಪ ಪ್ರದರ್ಶನಕ್ಕೆ ಅಣಿಯಾಗುತ್ತಿದೆ. ನಾಡಿನ ಪುಷ್ಪಪ್ರಿಯರನ್ನು ಸೆಳೆಯಲು ಕಾರ್ಮಿಕರು<br />ಶ್ರಮಿಸುತ್ತಿದ್ಧಾರೆ.</p>.<p>ಕನ್ನಡ ಚಿತ್ರರಂಗಕ್ಕೆ ಅಮೂಲ್ಯ ಕೊಡುಗೆ ನೀಡಿರುವ ನಟರಾದ ದಿವಂಗತ ಡಾ.ರಾಜ್ಕುಮಾರ್ ಮತ್ತು ಪುನೀತ್ ರಾಜ್ಕುಮಾರ್ ಅವರಿಗೆ ಈ ವರ್ಷ ಪುಷ್ಪ ಗೌರವ ಸಲ್ಲಿಸಲು ತಯಾರಿ ಮಾಡಿಕೊಳ್ಳಲಾಗುತ್ತಿದೆ.</p>.<p>ಮಳೆಯಿಂದ ಲಾಲ್ಬಾಗ್ ಹಸಿರಾಗಿದ್ದು, ಸಹಜವಾಗಿಯೇ ತನ್ನ ಸೌಂದರ್ಯ ಹೆಚ್ಚಿಸಿಕೊಂಡಿದೆ. ಕೋವಿಡ್ ಸಾಂಕ್ರಾಮಿಕದ ಬಳಿಕ ಜನಜೀವನ ಸಹಜ ಸ್ಥಿತಿಗೆ ಮರಳಿರುವ ಈ ಹೊತ್ತಿನಲ್ಲಿ 10 ದಿನಗಳ ಕಾಲ ಪುಷ್ಪರಾಶಿಯ ದರ್ಶನಕ್ಕೆ ಸಿದ್ಧತೆಗಳು ಭರದಿಂದ ಸಾಗುತ್ತಿವೆ. ಇದೇ 5ರಿಂದ 15ರ ತನಕ ಲಾಲ್ಬಾಗ್ನಲ್ಲಿ ಪುಷ್ಪ ವೈಭವ ಮನೆ ಮಾಡಿರಲಿದೆ.</p>.<p>ತೋಟಗಾರಿಕೆ ಇಲಾಖೆ, ಮೈಸೂರು ಉದ್ಯಾನ ಕಲಾ ಸಂಘವು ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಹಮ್ಮಿ<br />ಕೊಂಡಿರುವ 212ನೇ ಫಲಪುಷ್ಪ ಪ್ರದರ್ಶನ ಇದಾಗಿದೆ. ಲಾಲ್ಬಾಗ್ ಉದ್ಯಾನದ ಗಾಜಿನ ಮನೆಯಲ್ಲಿ ರಾಜ್ಕುಮಾರ್ ಹಾಗೂ ಪುನೀತ್ ರಾಜ್ಕುಮಾರ್ರ ಹೂವಿನ ಪ್ರತಿಕೃತಿ ರೂಪಿಸಲಾಗುತ್ತಿದೆ.</p>.<p>ಗಾಜನೂರಿನಲ್ಲಿರುವ ರಾಜ್ಕುಮಾರ್ ಅವರ ಪೂರ್ವಜರ ಮನೆ, ಮೈಸೂರಿನ ಶಕ್ತಿಧಾಮದ ಮಾದರಿಗಳು ಪುಷ್ಪಗಳಲ್ಲಿ ಅರಳಲಿವೆ.ಕಬ್ಬನ್ ಪಾರ್ಕ್, ಊಟಿಯ ಖಾಸಗಿ ಸಸ್ಯತೋಟಗಳು ಸೇರಿ ವಿದೇಶದಿಂದ ಬರುವ ಬಗೆಬಗೆಯ ತರಹೇವಾರಿ ಆಲಂಕಾರಿಕ ಪುಷ್ಪ ಬಳಸಲಾಗುವುದು ಎಂದು ಲಾಲ್ಬಾಗ್ ಉಪನಿರ್ದೇಶಕಿ ಕುಸಮಾ ಮಾಹಿತಿ ನೀಡಿದರು</p>.<p>ಸುಮಾರು ₹ 30 ಲಕ್ಷ ವೆಚ್ಚದಲ್ಲಿ ಬೇಡರ ಕಣ್ಣಪ್ಪ ಪರಿಕಲ್ಪನೆಯ ’ವರ್ಟಿಕಲ್ ವಾಲ್‘ ಮಾಡಿ, ಮೆಗಾ ಕ್ಯಾಮೆರಾ ಸ್ಥಾಪಿಸಲಾಗುತ್ತಿದೆ ಎಂದು ’ಭಾಗ್ಯಲಕ್ಷ್ಮಿ ವರ್ಟಿಕಲ್ ವಾಲ್‘ನ ಟೆಕ್ನಿಕಲ್ ಮುಖ್ಯಸ್ಥ ಶಿವರಾಮ ರೆಡ್ಡಿ ಮಾಹಿತಿ ನೀಡಿದರು.</p>.<p>ಗಾಜಿನ ಮನೆ ಆವರಣದಲ್ಲಿ ಪುನೀತ್ ರಾಜ್ಕುಮಾರ್, ರಾಜ್ ಕುಮಾರ್, ರಾಘವೇಂದ್ರ ಸ್ವಾಮಿ, ಬೇಡರ ಕಣ್ಣಪ್ಪ, ರಣಧೀರ ಕಂಠೀರವ ಎಲ್ಲರ ವಿಶೇಷ ಪ್ರತಿಮೆ ಸ್ಥಾಪಿಸಿ ಪುಷ್ಪಾಲಂಕಾರ ಮಾಡಲು ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗುತ್ತದೆ ಎಂದು ’ಸ್ನೀಲ್ ಫ್ಲವರ್ಸ್‘ನ ವ್ಯವಸ್ಥಾಪಕ ಸತ್ಯ ಅಗರ್ವಾಲ್ ತಿಳಿಸಿದರು.<br /><br /><strong>ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ</strong></p>.<p>ರಜೆ ದಿನಗಳಲ್ಲಿ ₹ 100 ಮತ್ತು ಇತರೆ ದಿನಗಳಲ್ಲಿ ₹80, ಮಕ್ಕಳಿಗೆ ₹ 30 ಪ್ರವೇಶ ಶುಲ್ಕ ನಿಗದಿ ಪಡಿಸಲಾಗಿದೆ. 1–10ನೇ ತರಗತಿ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ ಎಂದು ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಡಾ.ಎಂ ಜಗದೀಶ್ ‘ಪ್ರಜಾವಾಣಿ’ಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>