‘2014ರಲ್ಲಿ ಸೆಂಥಿಲ್ ಅವರು ಬೆಂಗಳೂರು ಸಿಟಿ ರೈಲು ನಿಲ್ದಾಣದ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದರು. ಈ ವೇಳೆ ಪರಿಚಯವಾಗಿದ್ದ ಬಾಬು, ನಿವೇಶನ ಕೊಡಿಸುವುದಾಗಿ ನಂಬಿಸಿ, ಎರಡು ಕಂತುಗಳಲ್ಲಿ ₹9 ಲಕ್ಷ ಪಡೆದಿದ್ದ. ಇದಾದ ಕೆಲ ತಿಂಗಳಲ್ಲೇ ಸೆಂಥಿಲ್ ಅವರಿಗೆ ಹುಬ್ಬಳ್ಳಿಗೆ ವರ್ಗಾವಣೆಯಾಗಿತ್ತು. ‘ನಿವೇಶನ ಹಂಚಿಕೆ ಪ್ರಕ್ರಿಯೆಯಲ್ಲಿದೆ. ಇನ್ನೂ 3ರಿಂದ 4 ವರ್ಷ ಆಗಬಹುದು’ ಆರೋಪಿ ಹೇಳಿದ್ದ. ಆತನ ಮೇಲೆ ಅನುಮಾನದಿಂದ ಅಧಿಕಾರಿಗಳನ್ನು ಸಲಹೆ ಕೇಳಿದಾಗ ಹಣ ವಾಪಸ್ ಪಡೆಯಲು ಸೆಂಥಿಲ್ಗೆ ಸೂಚಿಸಿದ್ದರು.’