<p><strong>ಬೆಂಗಳೂರು:</strong> ರೈಲ್ವೆ ಕೋ-ಆಪರೇಟಿವ್ ಸೊಸೈಟಿಯಿಂದ ನಿವೇಶನ ಕೊಡಿಸುವುದಾಗಿ ರೈಲ್ವೆ ಇಲಾಖೆಯ ನೌಕರ ಬಾಬು ಎಂಬಾತ ₹9 ಲಕ್ಷ ಪಡೆದು ವಂಚಿಸಿದ ಬಗ್ಗೆ ಚೆನ್ನೈ ರೈಲ್ವೆ ನಿಲ್ದಾಣದ ಉಪ ವಾಣಿಜ್ಯ ವ್ಯವಸ್ಥಾಪಕ ಸೆಂಥಿಲ್ ಕುಮಾರ್ ಇಲ್ಲಿನ ಸಿಟಿ ರೈಲ್ವೆ ಠಾಣೆಗೆ ದೂರು ನೀಡಿದ್ದಾರೆ</p>.<p>‘2014ರಲ್ಲಿ ಸೆಂಥಿಲ್ ಅವರು ಬೆಂಗಳೂರು ಸಿಟಿ ರೈಲು ನಿಲ್ದಾಣದ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದರು. ಈ ವೇಳೆ ಪರಿಚಯವಾಗಿದ್ದ ಬಾಬು, ನಿವೇಶನ ಕೊಡಿಸುವುದಾಗಿ ನಂಬಿಸಿ, ಎರಡು ಕಂತುಗಳಲ್ಲಿ ₹9 ಲಕ್ಷ ಪಡೆದಿದ್ದ. ಇದಾದ ಕೆಲ ತಿಂಗಳಲ್ಲೇ ಸೆಂಥಿಲ್ ಅವರಿಗೆ ಹುಬ್ಬಳ್ಳಿಗೆ ವರ್ಗಾವಣೆಯಾಗಿತ್ತು. ‘ನಿವೇಶನ ಹಂಚಿಕೆ ಪ್ರಕ್ರಿಯೆಯಲ್ಲಿದೆ. ಇನ್ನೂ 3ರಿಂದ 4 ವರ್ಷ ಆಗಬಹುದು’ ಆರೋಪಿ ಹೇಳಿದ್ದ. ಆತನ ಮೇಲೆ ಅನುಮಾನದಿಂದ ಅಧಿಕಾರಿಗಳನ್ನು ಸಲಹೆ ಕೇಳಿದಾಗ ಹಣ ವಾಪಸ್ ಪಡೆಯಲು ಸೆಂಥಿಲ್ಗೆ ಸೂಚಿಸಿದ್ದರು.’</p>.<p>‘ಇದೇ ವೇಳೆ ಸೇಂಥಿಲ್ ಅವರಿಗೆ ಚೆನ್ನೈಗೆ ವರ್ಗಾವಣೆಯಾಗಿದ್ದರಿಂದ ಅಲ್ಲಿಗೇ ಬಂದು ದಾಖಲೆಗಳನ್ನು ನೀಡುವುದಾಗಿಬಾಬು ಹೇಳಿದ್ದ. ಬಳಿಕ ಆತನ ಸುಳಿವೇ ಇರಲಿಲ್ಲ. ಹಾಗಾಗಿ, ತಲೆಮರೆಸಿಕೊಂಡಿರುವ ಆರೋಪಿ ಬಾಬು ವಿರುದ್ಧಸೆಂಥಿಲ್ ದೂರು ದಾಖಲಿಸಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.</p>.<p><strong>ವಿಮೆ ಹೆಸರಿನಲ್ಲಿ ವೃದ್ಧನಿಗೆ ₹2 ಲಕ್ಷ ವಂಚನೆ</strong></p>.<p><strong>ಬೆಂಗಳೂರು:</strong> ಜೀವ ವಿಮಾ ಕಂಪನಿಯೊಂದರ ಹೆಸರಿನಲ್ಲಿ ವೃದ್ಧರೊಬ್ಬರಿಗೆ ₹2 ಲಕ್ಷ ವಂಚಿಸಿರುವ ಘಟನೆ ನಡೆದಿದ್ದು, ವಂಚನೆಗೊಳಗಾದ ವ್ಯಕ್ತಿ ವಿಜಯನಗರ ಠಾಣೆಗೆ ದೂರು ನೀಡಿದ್ದಾರೆ</p>.<p>ಆದಿತ್ಯ ಎಂಬಾತ ಪ್ರತಿಷ್ಠಿತ ವಿಮಾ ಕಂಪನಿಯ ಪ್ರತಿನಿಧಿ ಎಂದು ವಿಜಯನಗರ ನಿವಾಸಿ ನಾಗೇಂದ್ರ ಎಂಬ ವೃದ್ಧನನ್ನು ಪರಿಚಯ ಮಾಡಿಕೊಂಡಿದ್ದ.</p>.<p>ಹಿರಿಯ ನಾಗರಿಕರು ಹಣ ಹೂಡಿಕೆ ಮಾಡಿದರೆ ಶೇ 12.5ರಂತೆ ಬಡ್ಡಿ ಹಾಗೂ ಆಸ್ಪತ್ರೆಯ ಚಿಕಿತ್ಸಾ ವೆಚ್ಚ ಪಾವತಿಸುವುದಾಗಿ ಆಮಿಷವೊಡ್ಡಿ, ವೃದ್ಧನಿಂದ ₹2 ಲಕ್ಷ ಪಡೆದು ವಂಚಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.</p>.<p>ವೃದ್ಧನಿಂದ ₹2 ಲಕ್ಷದ ಚೆಕ್ ಪಡೆದಿದ್ದ ಆದಿತ್ಯ, ಹಣ ಡ್ರಾ ಮಾಡಿಕೊಂಡು ಬಳಿಕ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಈ ಕುರಿತು ಮಾಹಿತಿ ಪಡೆಯಲು ಸದರಿ ವಿಮಾ ಕಂಪನಿಗೆ ಭೇಟಿ ನೀಡಿದಾಗ ಆ ರೀತಿಯ ಯಾವುದೇ ಯೋಜನೆಗಳಿಲ್ಲ. ಅಂತಹ ವ್ಯಕ್ತಿಯೂ ಕಾರ್ಯನಿರ್ವಹಿಸುತ್ತಿಲ್ಲ ಎಂದು ಸಿಬ್ಬಂದಿ ತಿಳಿಸಿದ್ದಾರೆ. ವಂಚನೆಯಾಗಿರುವುದು ತಿಳಿದು ವೃದ್ಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ರೈಲ್ವೆ ಕೋ-ಆಪರೇಟಿವ್ ಸೊಸೈಟಿಯಿಂದ ನಿವೇಶನ ಕೊಡಿಸುವುದಾಗಿ ರೈಲ್ವೆ ಇಲಾಖೆಯ ನೌಕರ ಬಾಬು ಎಂಬಾತ ₹9 ಲಕ್ಷ ಪಡೆದು ವಂಚಿಸಿದ ಬಗ್ಗೆ ಚೆನ್ನೈ ರೈಲ್ವೆ ನಿಲ್ದಾಣದ ಉಪ ವಾಣಿಜ್ಯ ವ್ಯವಸ್ಥಾಪಕ ಸೆಂಥಿಲ್ ಕುಮಾರ್ ಇಲ್ಲಿನ ಸಿಟಿ ರೈಲ್ವೆ ಠಾಣೆಗೆ ದೂರು ನೀಡಿದ್ದಾರೆ</p>.<p>‘2014ರಲ್ಲಿ ಸೆಂಥಿಲ್ ಅವರು ಬೆಂಗಳೂರು ಸಿಟಿ ರೈಲು ನಿಲ್ದಾಣದ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದರು. ಈ ವೇಳೆ ಪರಿಚಯವಾಗಿದ್ದ ಬಾಬು, ನಿವೇಶನ ಕೊಡಿಸುವುದಾಗಿ ನಂಬಿಸಿ, ಎರಡು ಕಂತುಗಳಲ್ಲಿ ₹9 ಲಕ್ಷ ಪಡೆದಿದ್ದ. ಇದಾದ ಕೆಲ ತಿಂಗಳಲ್ಲೇ ಸೆಂಥಿಲ್ ಅವರಿಗೆ ಹುಬ್ಬಳ್ಳಿಗೆ ವರ್ಗಾವಣೆಯಾಗಿತ್ತು. ‘ನಿವೇಶನ ಹಂಚಿಕೆ ಪ್ರಕ್ರಿಯೆಯಲ್ಲಿದೆ. ಇನ್ನೂ 3ರಿಂದ 4 ವರ್ಷ ಆಗಬಹುದು’ ಆರೋಪಿ ಹೇಳಿದ್ದ. ಆತನ ಮೇಲೆ ಅನುಮಾನದಿಂದ ಅಧಿಕಾರಿಗಳನ್ನು ಸಲಹೆ ಕೇಳಿದಾಗ ಹಣ ವಾಪಸ್ ಪಡೆಯಲು ಸೆಂಥಿಲ್ಗೆ ಸೂಚಿಸಿದ್ದರು.’</p>.<p>‘ಇದೇ ವೇಳೆ ಸೇಂಥಿಲ್ ಅವರಿಗೆ ಚೆನ್ನೈಗೆ ವರ್ಗಾವಣೆಯಾಗಿದ್ದರಿಂದ ಅಲ್ಲಿಗೇ ಬಂದು ದಾಖಲೆಗಳನ್ನು ನೀಡುವುದಾಗಿಬಾಬು ಹೇಳಿದ್ದ. ಬಳಿಕ ಆತನ ಸುಳಿವೇ ಇರಲಿಲ್ಲ. ಹಾಗಾಗಿ, ತಲೆಮರೆಸಿಕೊಂಡಿರುವ ಆರೋಪಿ ಬಾಬು ವಿರುದ್ಧಸೆಂಥಿಲ್ ದೂರು ದಾಖಲಿಸಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.</p>.<p><strong>ವಿಮೆ ಹೆಸರಿನಲ್ಲಿ ವೃದ್ಧನಿಗೆ ₹2 ಲಕ್ಷ ವಂಚನೆ</strong></p>.<p><strong>ಬೆಂಗಳೂರು:</strong> ಜೀವ ವಿಮಾ ಕಂಪನಿಯೊಂದರ ಹೆಸರಿನಲ್ಲಿ ವೃದ್ಧರೊಬ್ಬರಿಗೆ ₹2 ಲಕ್ಷ ವಂಚಿಸಿರುವ ಘಟನೆ ನಡೆದಿದ್ದು, ವಂಚನೆಗೊಳಗಾದ ವ್ಯಕ್ತಿ ವಿಜಯನಗರ ಠಾಣೆಗೆ ದೂರು ನೀಡಿದ್ದಾರೆ</p>.<p>ಆದಿತ್ಯ ಎಂಬಾತ ಪ್ರತಿಷ್ಠಿತ ವಿಮಾ ಕಂಪನಿಯ ಪ್ರತಿನಿಧಿ ಎಂದು ವಿಜಯನಗರ ನಿವಾಸಿ ನಾಗೇಂದ್ರ ಎಂಬ ವೃದ್ಧನನ್ನು ಪರಿಚಯ ಮಾಡಿಕೊಂಡಿದ್ದ.</p>.<p>ಹಿರಿಯ ನಾಗರಿಕರು ಹಣ ಹೂಡಿಕೆ ಮಾಡಿದರೆ ಶೇ 12.5ರಂತೆ ಬಡ್ಡಿ ಹಾಗೂ ಆಸ್ಪತ್ರೆಯ ಚಿಕಿತ್ಸಾ ವೆಚ್ಚ ಪಾವತಿಸುವುದಾಗಿ ಆಮಿಷವೊಡ್ಡಿ, ವೃದ್ಧನಿಂದ ₹2 ಲಕ್ಷ ಪಡೆದು ವಂಚಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.</p>.<p>ವೃದ್ಧನಿಂದ ₹2 ಲಕ್ಷದ ಚೆಕ್ ಪಡೆದಿದ್ದ ಆದಿತ್ಯ, ಹಣ ಡ್ರಾ ಮಾಡಿಕೊಂಡು ಬಳಿಕ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಈ ಕುರಿತು ಮಾಹಿತಿ ಪಡೆಯಲು ಸದರಿ ವಿಮಾ ಕಂಪನಿಗೆ ಭೇಟಿ ನೀಡಿದಾಗ ಆ ರೀತಿಯ ಯಾವುದೇ ಯೋಜನೆಗಳಿಲ್ಲ. ಅಂತಹ ವ್ಯಕ್ತಿಯೂ ಕಾರ್ಯನಿರ್ವಹಿಸುತ್ತಿಲ್ಲ ಎಂದು ಸಿಬ್ಬಂದಿ ತಿಳಿಸಿದ್ದಾರೆ. ವಂಚನೆಯಾಗಿರುವುದು ತಿಳಿದು ವೃದ್ಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>