ಪಕ್ಷದ ರಾಜ್ಯ ಜಂಟಿ ಕಾರ್ಯದರ್ಶಿ ದರ್ಶನ್ ಜೈನ್, ‘ವಸಿಷ್ಠ ಸಹಕಾರ ಸೊಸೈಟಿಯ ಪ್ರಮುಖ ನಿರ್ದೇಶಕ ಕೆ.ಎನ್.ವೇಂಕಟನಾರಾಯಣ, ಬಿಜೆಪಿ ನಾಯಕರ ಜೊತೆ ಒಡನಾಟ ಹೊಂದಿದ್ದಾರೆ. ಶಾಸಕ ರವಿ ಸುಬ್ರಹ್ಮಣ್ಯ ಸೇರಿದಂತೆ ಅನೇಕರಿಗೆ ಆಪ್ತರಾಗಿದ್ದಾರೆ. ಅವರೆಲ್ಲರ ಶ್ರೀ ರಕ್ಷೆಯೂ ಅವರ ಮೇಲಿದೆ. ಹೀಗಿರುವಾಗ ಪಾರದರ್ಶಕ ತನಿಖೆ ನಡೆಯುವುದು ಅಸಾಧ್ಯ’ ಎಂದು ತಿಳಿಸಿದರು.