ಬೆಂಗಳೂರು: ಸಿಗರೇಟ್ ಮತ್ತು ಮಾಸ್ಕ್ ಲಂಚ ಪ್ರಕರಣದಲ್ಲಿ ಆರೋಪಿಯಾಗಿರುವ ಸಿಸಿಬಿಯ ಆರ್ಥಿಕ ಅಪರಾಧಗಳ ತಡೆ ವಿಭಾಗದ ಎಸಿಪಿ ಪ್ರಭುಶಂಕರ್ ಸೋಮವಾರವೂ ಎಸಿಬಿ ತನಿಖಾ ಅಧಿಕಾರಿಗಳ ಮುಂದೆ ಹಾಜರಾದರು.
‘ಪ್ರಭುಶಂಕರ್ ಶುಕ್ರವಾರ ದಿಂದ ವಿಚಾರಣೆಗೆ ಹಾಜರಾಗುತ್ತಿದ್ದರೂ ತನಿಖಾಧಿಕಾರಿಗಳ ಜತೆ ಸರಿಯಾಗಿ ಸಹಕರಿಸುತ್ತಿಲ್ಲ. ಕೋರ್ಟ್ನಿಂದ ಮಧ್ಯಂತರ ಜಾಮೀನು ಪಡೆದಿರುವ ಅವರನ್ನು ನಾವೂ ಒತ್ತಾಯಪೂರ್ವಕವಾಗಿ ಪ್ರಶ್ನಿಸಲು ಆಗುತ್ತಿಲ್ಲ’ ಎಂದು ಎಸಿಬಿ ಮೂಲಗಳು ತಿಳಿಸಿವೆ.
ಲಾಕ್ಡೌನ್ನಲ್ಲಿ ದುಬಾರಿ ಬೆಲೆಗೆ ಸಿಗರೇಟ್ ಮಾರಾಟ ಮಾಡಲು ಅವಕಾಶ ಕೊಡಲು ವಿತರಕರಿಂದ ಲಂಚ ಪಡೆದ ಆರೋಪಕ್ಕೆ ಎಸಿಪಿ ಒಳಗಾಗಿದ್ದಾರೆ. ಎನ್– 95 ನಕಲಿ ಮಾಸ್ಕ್ ತಯಾರಿಸುತ್ತಿದ್ದ ಆರೋಪಿಯೊಬ್ಬರಿಗೆ ರಕ್ಷಣೆ ನೀಡಲು ಲಂಚ ಪಡೆದ ಆರೋಪವೂ ಇವರ ಮೇಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.