ಲಾರಿ ಹಾಗೂ ದುರ್ಗಾಂಬ, ಶಿವಗಂಗ, ಧ್ಯಾನ್ ಹೆಸರಿನ ಖಾಸಗಿ ಬಸ್ಗಳು ನಡುವೆ ಸರಣಿ ಅಪಘಾತವಾಗಿದೆ. ಮೂರು ಖಾಸಗಿ ಬಸ್ಗಳೂ ತುಮಕೂರು ಕಡೆಯಿಂದ ಬೆಂಗಳೂರಿಗೆ ಬರುತ್ತಿದ್ದವು. ಅಪಘಾತದ ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ತೆರಳಿ ಏಳು ಮಂದಿಯನ್ನು ಆಂಬುಲೆನ್ಸ್ನಲ್ಲಿ ನೆಲಮಂಗಲ ಅಸ್ಪತ್ರೆಗೆ ಕಳುಹಿಸಿ, ಚಿಕಿತ್ಸೆ ಕೊಡಿಸಲಾಯಿತು ಎಂದು ನೆಲಮಂಗಲ ಸಂಚಾರ ಪೊಲೀಸರು ಹೇಳಿದರು.