‘ಸಿಗ್ನಲ್ ಲೈಟ್ ಹಾಕಿರಲಿಲ್ಲ’:
‘ಕೆಟ್ಟುಹೋಗಿದ್ದ ಕ್ಯಾಂಟರ್ ಅನ್ನು ಹೆಣ್ಣೂರು – ನಾಗವಾರ ರಸ್ತೆಬದಿಯಲ್ಲಿ ನಿಲುಗಡೆ ಮಾಡಲಾಗಿತ್ತು. ಚಾಲಕ ವಾಹನದಲ್ಲಿದ್ದ ಯಾವುದೇ ಸಿಗ್ನಲ್ ಲೈಟ್ ಹಾಕಿರಲಿಲ್ಲ. ಅದೇ ಮಾರ್ಗದಲ್ಲಿ ಬುಧವಾರ ಮುಂಜಾನೆ ತಮ್ಮ ಸ್ಪೋರ್ಟ್ಸ್ ಸೈಕಲ್ನಲ್ಲಿ ತೆರಳುತ್ತಿದ್ದ ರಾಮಕೃಷ್ಣನ್ ಅವರು ನಿಂತಿದ್ದ ವಾಹನಕ್ಕೆ ಡಿಕ್ಕಿಯಾಗಿದ್ದರಿಂದ ಗಂಭೀರವಾಗಿ ಗಾಯಗೊಂಡಿದ್ದರು. ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗದಲ್ಲಿ ಅವರು ಮೃತಪಟ್ಟಿದ್ದಾರೆ’ ಎಂದು ಕೆ.ಜಿ ಹಳ್ಳಿ ಪೊಲೀಸರು ತಿಳಿಸಿದರು.