‘ವಿಜಯನಗರದ ರಜತ್, ಮನೆಗೆ ಕಾರಿನಲ್ಲಿ ಹೊರಟಿದ್ದಾಗ ಈ ಅವಘಡ ಸಂಭವಿಸಿದೆ. ಮೃತದೇಹವನ್ನು ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಇರಿಸಲಾಗಿದೆ’ ಎಂದು ಪೊಲೀಸರು ಹೇಳಿದರು.
‘ಅತೀ ವೇಗವಾಗಿ ಹೊರಟಿದ್ದ ಮರಕ್ಕೆ ಗುದ್ದಿತ್ತು. ಮುಂಭಾಗ ಜಖಂಗೊಂಡು ಚಾಲಕ ರಜತ್ ತೀವ್ರವಾಗಿ ಗಾಯಗೊಂಡಿದ್ದರು. ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆಯೇ ಅವರು ಮೃತಪಟ್ಟರು’ ಎಂದೂ ತಿಳಿಸಿದರು.