‘ಕಳ್ಳತನ ಪ್ರಕರಣವೊಂದರಲ್ಲಿ ಪೊಲೀಸರಿಗೆ ಬೇಕಿದ್ದ ಆರೋಪಿಯು ನಮ್ಮ ಠಾಣೆ ವ್ಯಾಪ್ತಿಯ ಭೂಪಸಂದ್ರ–ಹೆಬ್ಬಾಳ ರಸ್ತೆಯಲ್ಲಿರುವ ತೋಟದ ಮನೆಯ ಬಳಿ ಇರುವ ಕುರಿತು ವಿನೋದ್ ಅವರಿಗೆ ಮಾಹಿತಿ ಲಭಿಸಿತ್ತು. ಹೀಗಾಗಿ ಸಿಬ್ಬಂದಿಯೊಂದಿಗೆ ರಾತ್ರಿ 11 ಗಂಟೆ ಸುಮಾರಿಗೆ ಸ್ಥಳಕ್ಕೆ ಹೋಗಿದ್ದರು. ಈ ವೇಳೆ ಪರಾರಿಯಾಗಲು ಯತ್ನಿಸಿದ ಆರೋಪಿ, ಅವರ ಭುಜಕ್ಕೆ ಚುಚ್ಚಿ ಅಲ್ಲಿಂದ ಪಾರಾರಿಯಾದ’ ಎಂದು ಅವರು ಹೇಳಿದ್ದಾರೆ.