ಇದರ ಮಧ್ಯೆಯೇ ಹಿರಿಯ ಅಧಿಕಾರಿಯನ್ನು ಸಂಪರ್ಕಿಸಿದ್ದ ದರ್ಶನ್ ಅವರ ವ್ಯವಸ್ಥಾಪಕ, ಚಿಕಿತ್ಸಾ ವೆಚ್ಚಕ್ಕಾಗಿ ₹2 ಲಕ್ಷ ನೀಡುವುದಾಗಿ ಹೇಳಿದ್ದರು. ಆತನನ್ನು ತರಾಟೆಗೆ ತೆಗೆದುಕೊಂಡ ಅಧಿಕಾರಿ, ‘ನಿಮ್ಮ ಬೇಜವಾಬ್ದಾರಿಯಿಂದಲೇ ನಮ್ಮ ಕುಟುಂಬದ ಸದಸ್ಯ ಆಸ್ಪತ್ರೆ ಸೇರಿದ್ದಾನೆ. ಹಣ ನೀಡಿದ ಮಾತ್ರಕ್ಕೆ ಕಾನೂನಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ’ ಎಂದು ತಿರುಗೇಟು ನೀಡಿ
ರುವುದಾಗಿ ಮೂಲಗಳು ತಿಳಿಸಿವೆ.