ಕಂದಾಯ ಸಚಿವ ಆರ್. ಅಶೋಕ ಅವರಿಗೆ ಈ ಪತ್ರ ಬರೆದಿರುವ ಸೋಮಶೇಖರ್, ‘ರಾಷ್ಟ್ರದಲ್ಲೇ ಉತ್ತಮ ಗುಣಮಟ್ಟದ ವಿವಿಧ ಹೂವುಗಳ ಪೈಕಿ ಶೇ 80ರಷ್ಟನ್ನು ನಗರದ ಹೊರವಲಯದಲ್ಲಿ ಬೆಳೆಯಲಾಗುತ್ತದೆ. ಈ ಬೆಳೆಗಾರರಿಗೆ ಮತ್ತು ಗ್ರಾಹಕರಿಗೆ ಉತ್ತಮ ಸೇವೆ ಒದಗಿಸಲು ಹೂವಿನ ಮಾರುಕಟ್ಟೆಯ ಅವಶ್ಯಕತೆ ಇದೆ’ ಎಂದು ಅವರು ಹೇಳಿದ್ದಾರೆ.