<p><strong>ಬೆಂಗಳೂರು:</strong> ನಗರದ ಎಚ್.ಎಂ.ಟ್ಯಾಂಬರೀನ್ ಅಪಾರ್ಟ್ಮೆಂಟ್ಸ್ನ ಪರಿಷ್ಕೃತ ಯೋಜನೆಗೆ ಅನುಮೋದನೆ ನೀಡಿರುವುದನ್ನು ಪ್ರಶ್ನಿಸಿದ ತಕರಾರಿಗೆ ಸಂಬಂಧಿಸಿದಂತೆ ಅಪಾರ್ಟ್ಮೆಂಟ್ ಮಾಲೀಕರು, ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (ಬಿಡಿಎ) ಮತ್ತು ಕಟ್ಟಡ ನಿರ್ಮಾಣ ಕಂಪನಿಯ ಪ್ರತಿನಿಧಿಗಳು ಮಾತುಕತೆಯ ಮೂಲಕ ವ್ಯಾಜ್ಯ ಬಗೆಹರಿಸಿಕೊಳ್ಳಲು ಹೈಕೋರ್ಟ್ ಅವಕಾಶ ಕಲ್ಪಿಸಿದೆ.</p>.<p>ಈ ಕುರಿತಂತೆ ಉತ್ತರಹಳ್ಳಿ ಹೋಬಳಿಯ ಜರಗನಹಳ್ಳಿಯ ಕನಕಪುರ ಮುಖ್ಯ ರಸ್ತೆಯಲ್ಲಿರುವ ಎಚ್.ಎಂ.ಟ್ಯಾಂಬರೀನ್ ಅಪಾರ್ಟ್ಮೆಂಟ್ ಮಾಲೀಕರ ಸಂಘದ ಅಧ್ಯಕ್ಷ ಪ್ರದೀಪ್ ರಾವ್ ಮತ್ತು ಕಾರ್ಯದರ್ಶಿ ಎಂ.ಹೇಮೇಂದ್ರ ಸಲ್ಲಿಸಿರುವ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.</p>.<p>ವಿಚಾರಣೆ ವೇಳೆ ಅರ್ಜಿದಾರರೂ ಆದ ಎಚ್.ಎಂ.ಟ್ಯಾಂಬರೀನ್ ಅಪಾರ್ಟ್ಮೆಂಟ್ ಮಾಲೀಕರ ಸಂಘದ ಪರ ವಾದ ಮಂಡಿಸಿದ ಹಿರಿಯ ವಕೀಲ ಪಿ.ಎಸ್.ರಾಜಗೋಪಾಲ್ ಅವರು, ‘ಪರಿಷ್ಕೃತ ಯೋಜನೆಗೆ ಅನುಮೋದನೆ ನೀಡುವ ಅಧಿಕಾರ ಬಿಡಿಎಗೆ ಇಲ್ಲ’ ಎಂದರು.</p>.<p>‘ಈ ಕ್ರಮ ಸಂಪೂರ್ಣ ಕಾನೂನುಬಾಹಿರ. ಒಂದೊಮ್ಮೆ ಮಾಡುವುದಾದರೆ ಅದಕ್ಕೆ ಕಾಮಗಾರಿ ಜಾರಿಯಲ್ಲಿರುವ ಯೋಜನೆಯಲ್ಲಿ ಮಾತ್ರವೇ ಅವಕಾಶವಿದೆ. ಪೂರ್ಣಗೊಂಡ ಯೋಜನೆಗೆ ಈ ರೀತಿಯ ಪರಿಷ್ಕೃತ ಯೋಜನೆಗೆ ಅನುಮೋದನೆ ನೀಡಲು ಬರುವುದಿಲ್ಲ’ ಎಂದು ಪ್ರತಿಪಾದಿಸಿದರು.</p>.<p>‘2003ರಲ್ಲಿ ಮೂಲ ಯೋಜನೆಗೆ ಅನುಮತಿ ನೀಡಲಾಗಿದೆ. ಇದರ ಪರಿವರ್ತನೆಗೆ ಅರ್ಜಿದಾರರು ಅನುಮತಿ ಕೊಟ್ಟಿಲ್ಲ. ಇದು ಬಿಡಿಎ ಮತ್ತು ಡೆವಲಪರ್ಸ್ ನಡುವಿನ ಒಳ ಒಪ್ಪಂದವಾಗಿದೆ’ ಎಂದು ದೂರಿದರು.</p>.<p class="Subhead"><strong>ಪ್ರಕರಣವೇನು?: </strong>ಮೂರು ಎಕರೆ 18 ಗುಂಟೆ ಪ್ರದೇಶದ ಜಮೀನಿನಲ್ಲಿ ಎಚ್.ಎಂ.ಟ್ಯಾಂಬರೀನ್ ಅಪಾರ್ಟ್ಮೆಂಟ್ಸ್ ನಾಲ್ಕು ಅಪಾರ್ಟ್ಮೆಂಟ್ ಬ್ಲಾಕ್ಗಳನ್ನು ಹೊಂದಿದೆ. ಇದರಲ್ಲಿ ಒಟ್ಟು 242 ಅಪಾರ್ಟ್ಮೆಂಟ್ಗಳಿವೆ.</p>.<p>242 ಅಪಾರ್ಟ್ಮೆಂಟ್ ಕಟ್ಟಿದ ನಂತರ ಉಳಿದಿದ್ದ 32 ಗುಂಟೆ ಜಾಗದಲ್ಲಿ ಮತ್ತಷ್ಟು ಅಪಾರ್ಟ್ಮೆಂಟ್ಗಳನ್ನು ನಿರ್ಮಿಸಲು ಡೆವಲಪರ್ಸ್, ಯೋಜನೆಯ ಪರಿಷ್ಕೃತ ಅನುಮೋದನೆಗೆ 2016ರ ಡಿಸೆಂಬರ್ನಲ್ಲಿ ಅನುಮತಿ ಪಡೆದಿರುವುದನ್ನು ಅರ್ಜಿದಾರರು ಪ್ರಶ್ನಿಸಿದ್ದಾರೆ.</p>.<p><strong>ಹೈಕೋರ್ಟ್ ನೀಡಿರುವ ಆದೇಶ ಏನು?</strong></p>.<p>* ಹೈಕೋರ್ಟ್ನಲ್ಲಿರುವ ಹಿರಿಯ ವಕೀಲರ ಸಭಾಂಗಣದಲ್ಲಿ ಪಕ್ಷಗಾರರು ಸೌಹಾರ್ದ ಮಾತುಕತೆಯ ಮೂಲಕ ಇದೇ 29ರ ಒಳಗೆ ಸೂಕ್ತ ಪರಿಹಾರ ಕಂಡುಕೊಳ್ಳಬೇಕು.</p>.<p>* ಅರ್ಜಿದಾರರು ಮತ್ತು ಪ್ರತಿವಾದಿಗಳ ಕಡೆಯಿಂದ ತಲಾ ಐವರಿಗಿಂತ ಹೆಚ್ಚಿನ ಪ್ರತಿನಿಧಿಗಳು ಈ ಮಾತುಕತೆಯಲ್ಲಿ ಇರಬಾರದು.</p>.<p>* ತಂತ್ರಜ್ಞರು, ಎಂಜಿನಿಯರ್ಗಳೂ ಭಾಗವಹಿಸಿಬೇಕು.</p>.<p>* ಮಾತುಕತೆಯ ವಿವರಗಳನ್ನು ಮೊಬೈಲ್ ಫೋನ್ ಅಥವಾ ಯೋಗ್ಯ ಸಾಧನದ ಮೂಲಕ ವಿಡಿಯೊ ಮಾಡಿಕೊಳ್ಳಬೇಕು.</p>.<p>* ಒಂದೊಮ್ಮೆ ಈ ಸಂಧಾನ ಮಾತುಕತೆ ನಡೆಯದೇ ಹೋದಲ್ಲಿ ವಿಚಾರಣೆ ಮುಂದೂಡಿಕೆಗೆ ಅವಕಾಶ ನೀಡುವುದಿಲ್ಲ. ಪ್ರಕರಣದ ಮೆರಿಟ್ ಆಧಾರದಲ್ಲಿ ವಿಚಾರಣೆ ಆಲಿಸಿ ಆದೇಶ ನೀಡಲಾಗುವುದು.</p>.<p><strong>ಅರ್ಜಿದಾರರ ವಾದವೇನು?</strong></p>.<p>* ನಮಗೆ ಈಗಾಗಲೇ ಸ್ವಾಧೀನಾನುಭವ ಪ್ರಮಾಣ ಪತ್ರ (ಅಕ್ಯುಪೆನ್ಸಿ ಸರ್ಟಿಫಿಕೇಟ್) ನೀಡಲಾಗಿದೆ.</p>.<p>* ಪ್ರತಿಯೊಬ್ಬ ಅಪಾರ್ಟ್ಮೆಂಟ್ ಮಾಲೀಕರಿಗೆ ಅವರ ಹೆಸರಿನಲ್ಲಿ ಖಾತೆಯನ್ನೂ ನೀಡಲಾಗಿದೆ.</p>.<p>* ಈ ಅಪಾರ್ಟ್ಮೆಂಟ್ಗಳಲ್ಲಿ ನಾವು ವಾಸ ಮಾಡುತ್ತಿದ್ದು, ಈ ಪ್ರದೇಶದ ಸಂಪೂರ್ಣ ಹಕ್ಕು ನಮ್ಮದೇ.</p>.<p>*ಈ ಕಾರಣಗಳಿಂದಾಗಿ ಪರಿಷ್ಕೃತ ಯೋಜನೆಗೆ ಅನುಮೋದನೆ ನೀಡಿರುವುದನ್ನು ರದ್ದುಪಡಿಸಬೇಕು.</p>.<p><strong>‘ಬಿಲ್ಡರ್ಗಳು ಹೇಗೆ ಎಂಬುದು ಗೊತ್ತಿದೆ...’</strong></p>.<p>ವಿಚಾರಣೆ ವೇಳೆ ಪ್ರತಿವಾದಿಗಳ ಪರ ವಾದ ಮಂಡಿಸಿದ ಹಿರಿಯ ವಕೀಲ ಜಯಕುಮಾರ್ ಎಸ್.ಪಾಟೀಲ ಅವರು, ‘ಸಂಧಾನದ ಮೂಲಕ ವಿವಾದ ಬಗೆಹರಿಸಿಕೊಳ್ಳಲು ನಮ್ಮದೇನೂ ಆಕ್ಷೇಪವಿಲ್ಲ. ಅರ್ಜಿದಾರರು ನಮ್ಮ ಬಳಿ ಬಂದರೆ ಮಾತುಕತೆ ನಡೆಸುತ್ತೇವೆ’ ಎಂದು ನ್ಯಾಯಪೀಠಕ್ಕೆ ತಿಳಿಸಿದರು.</p>.<p>ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ದೀಕ್ಷಿತ್ ಅವರು, ‘ಓಹ್, ಅದು ಸಾಧ್ಯವಿಲ್ಲ. ಬಿಲ್ಡರ್ಗಳು ಹೇಗೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಎಲ್ಲೊ ಒಂದಿಷ್ಟು ಒಳ್ಳೆಯ ಬಿಲ್ಡರ್ಗಳು ಇರಬಹುದು. ಆದರೆ, ಸಾಮಾನ್ಯ ಪ್ರಜೆಯ ಬಗೆಗಿನ ಕಾಳಜಿಯನ್ನು ಕಡೆಗಣಿಸಲು ಸಾಧ್ಯವಿಲ್ಲ’ ಎಂದು ಅವರು ಹೇಳಿದರು.</p>.<p>* ತೋಳದ ಬಳಿಗೆ ಕುರಿಗಳನ್ನು ಕಳುಹಿಸಿ ಎಂದು ನೀವು (ಪ್ರತಿವಾದಿ ಪರ ವಕೀಲರು) ಸಲಹೆ ಕೊಡುತ್ತಿದ್ದೀರಾ, ಅದು ಆಗದು. ಅರ್ಜಿದಾರರು ಪ್ರತಿವಾದಿಗಳ ಬಳಿ ಹೋಗಕೂಡದು</p>.<p>-<strong>ಕೃಷ್ಣ ಎಸ್.ದೀಕ್ಷಿತ್, </strong>ನ್ಯಾಯಮೂರ್ತಿ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ನಗರದ ಎಚ್.ಎಂ.ಟ್ಯಾಂಬರೀನ್ ಅಪಾರ್ಟ್ಮೆಂಟ್ಸ್ನ ಪರಿಷ್ಕೃತ ಯೋಜನೆಗೆ ಅನುಮೋದನೆ ನೀಡಿರುವುದನ್ನು ಪ್ರಶ್ನಿಸಿದ ತಕರಾರಿಗೆ ಸಂಬಂಧಿಸಿದಂತೆ ಅಪಾರ್ಟ್ಮೆಂಟ್ ಮಾಲೀಕರು, ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (ಬಿಡಿಎ) ಮತ್ತು ಕಟ್ಟಡ ನಿರ್ಮಾಣ ಕಂಪನಿಯ ಪ್ರತಿನಿಧಿಗಳು ಮಾತುಕತೆಯ ಮೂಲಕ ವ್ಯಾಜ್ಯ ಬಗೆಹರಿಸಿಕೊಳ್ಳಲು ಹೈಕೋರ್ಟ್ ಅವಕಾಶ ಕಲ್ಪಿಸಿದೆ.</p>.<p>ಈ ಕುರಿತಂತೆ ಉತ್ತರಹಳ್ಳಿ ಹೋಬಳಿಯ ಜರಗನಹಳ್ಳಿಯ ಕನಕಪುರ ಮುಖ್ಯ ರಸ್ತೆಯಲ್ಲಿರುವ ಎಚ್.ಎಂ.ಟ್ಯಾಂಬರೀನ್ ಅಪಾರ್ಟ್ಮೆಂಟ್ ಮಾಲೀಕರ ಸಂಘದ ಅಧ್ಯಕ್ಷ ಪ್ರದೀಪ್ ರಾವ್ ಮತ್ತು ಕಾರ್ಯದರ್ಶಿ ಎಂ.ಹೇಮೇಂದ್ರ ಸಲ್ಲಿಸಿರುವ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.</p>.<p>ವಿಚಾರಣೆ ವೇಳೆ ಅರ್ಜಿದಾರರೂ ಆದ ಎಚ್.ಎಂ.ಟ್ಯಾಂಬರೀನ್ ಅಪಾರ್ಟ್ಮೆಂಟ್ ಮಾಲೀಕರ ಸಂಘದ ಪರ ವಾದ ಮಂಡಿಸಿದ ಹಿರಿಯ ವಕೀಲ ಪಿ.ಎಸ್.ರಾಜಗೋಪಾಲ್ ಅವರು, ‘ಪರಿಷ್ಕೃತ ಯೋಜನೆಗೆ ಅನುಮೋದನೆ ನೀಡುವ ಅಧಿಕಾರ ಬಿಡಿಎಗೆ ಇಲ್ಲ’ ಎಂದರು.</p>.<p>‘ಈ ಕ್ರಮ ಸಂಪೂರ್ಣ ಕಾನೂನುಬಾಹಿರ. ಒಂದೊಮ್ಮೆ ಮಾಡುವುದಾದರೆ ಅದಕ್ಕೆ ಕಾಮಗಾರಿ ಜಾರಿಯಲ್ಲಿರುವ ಯೋಜನೆಯಲ್ಲಿ ಮಾತ್ರವೇ ಅವಕಾಶವಿದೆ. ಪೂರ್ಣಗೊಂಡ ಯೋಜನೆಗೆ ಈ ರೀತಿಯ ಪರಿಷ್ಕೃತ ಯೋಜನೆಗೆ ಅನುಮೋದನೆ ನೀಡಲು ಬರುವುದಿಲ್ಲ’ ಎಂದು ಪ್ರತಿಪಾದಿಸಿದರು.</p>.<p>‘2003ರಲ್ಲಿ ಮೂಲ ಯೋಜನೆಗೆ ಅನುಮತಿ ನೀಡಲಾಗಿದೆ. ಇದರ ಪರಿವರ್ತನೆಗೆ ಅರ್ಜಿದಾರರು ಅನುಮತಿ ಕೊಟ್ಟಿಲ್ಲ. ಇದು ಬಿಡಿಎ ಮತ್ತು ಡೆವಲಪರ್ಸ್ ನಡುವಿನ ಒಳ ಒಪ್ಪಂದವಾಗಿದೆ’ ಎಂದು ದೂರಿದರು.</p>.<p class="Subhead"><strong>ಪ್ರಕರಣವೇನು?: </strong>ಮೂರು ಎಕರೆ 18 ಗುಂಟೆ ಪ್ರದೇಶದ ಜಮೀನಿನಲ್ಲಿ ಎಚ್.ಎಂ.ಟ್ಯಾಂಬರೀನ್ ಅಪಾರ್ಟ್ಮೆಂಟ್ಸ್ ನಾಲ್ಕು ಅಪಾರ್ಟ್ಮೆಂಟ್ ಬ್ಲಾಕ್ಗಳನ್ನು ಹೊಂದಿದೆ. ಇದರಲ್ಲಿ ಒಟ್ಟು 242 ಅಪಾರ್ಟ್ಮೆಂಟ್ಗಳಿವೆ.</p>.<p>242 ಅಪಾರ್ಟ್ಮೆಂಟ್ ಕಟ್ಟಿದ ನಂತರ ಉಳಿದಿದ್ದ 32 ಗುಂಟೆ ಜಾಗದಲ್ಲಿ ಮತ್ತಷ್ಟು ಅಪಾರ್ಟ್ಮೆಂಟ್ಗಳನ್ನು ನಿರ್ಮಿಸಲು ಡೆವಲಪರ್ಸ್, ಯೋಜನೆಯ ಪರಿಷ್ಕೃತ ಅನುಮೋದನೆಗೆ 2016ರ ಡಿಸೆಂಬರ್ನಲ್ಲಿ ಅನುಮತಿ ಪಡೆದಿರುವುದನ್ನು ಅರ್ಜಿದಾರರು ಪ್ರಶ್ನಿಸಿದ್ದಾರೆ.</p>.<p><strong>ಹೈಕೋರ್ಟ್ ನೀಡಿರುವ ಆದೇಶ ಏನು?</strong></p>.<p>* ಹೈಕೋರ್ಟ್ನಲ್ಲಿರುವ ಹಿರಿಯ ವಕೀಲರ ಸಭಾಂಗಣದಲ್ಲಿ ಪಕ್ಷಗಾರರು ಸೌಹಾರ್ದ ಮಾತುಕತೆಯ ಮೂಲಕ ಇದೇ 29ರ ಒಳಗೆ ಸೂಕ್ತ ಪರಿಹಾರ ಕಂಡುಕೊಳ್ಳಬೇಕು.</p>.<p>* ಅರ್ಜಿದಾರರು ಮತ್ತು ಪ್ರತಿವಾದಿಗಳ ಕಡೆಯಿಂದ ತಲಾ ಐವರಿಗಿಂತ ಹೆಚ್ಚಿನ ಪ್ರತಿನಿಧಿಗಳು ಈ ಮಾತುಕತೆಯಲ್ಲಿ ಇರಬಾರದು.</p>.<p>* ತಂತ್ರಜ್ಞರು, ಎಂಜಿನಿಯರ್ಗಳೂ ಭಾಗವಹಿಸಿಬೇಕು.</p>.<p>* ಮಾತುಕತೆಯ ವಿವರಗಳನ್ನು ಮೊಬೈಲ್ ಫೋನ್ ಅಥವಾ ಯೋಗ್ಯ ಸಾಧನದ ಮೂಲಕ ವಿಡಿಯೊ ಮಾಡಿಕೊಳ್ಳಬೇಕು.</p>.<p>* ಒಂದೊಮ್ಮೆ ಈ ಸಂಧಾನ ಮಾತುಕತೆ ನಡೆಯದೇ ಹೋದಲ್ಲಿ ವಿಚಾರಣೆ ಮುಂದೂಡಿಕೆಗೆ ಅವಕಾಶ ನೀಡುವುದಿಲ್ಲ. ಪ್ರಕರಣದ ಮೆರಿಟ್ ಆಧಾರದಲ್ಲಿ ವಿಚಾರಣೆ ಆಲಿಸಿ ಆದೇಶ ನೀಡಲಾಗುವುದು.</p>.<p><strong>ಅರ್ಜಿದಾರರ ವಾದವೇನು?</strong></p>.<p>* ನಮಗೆ ಈಗಾಗಲೇ ಸ್ವಾಧೀನಾನುಭವ ಪ್ರಮಾಣ ಪತ್ರ (ಅಕ್ಯುಪೆನ್ಸಿ ಸರ್ಟಿಫಿಕೇಟ್) ನೀಡಲಾಗಿದೆ.</p>.<p>* ಪ್ರತಿಯೊಬ್ಬ ಅಪಾರ್ಟ್ಮೆಂಟ್ ಮಾಲೀಕರಿಗೆ ಅವರ ಹೆಸರಿನಲ್ಲಿ ಖಾತೆಯನ್ನೂ ನೀಡಲಾಗಿದೆ.</p>.<p>* ಈ ಅಪಾರ್ಟ್ಮೆಂಟ್ಗಳಲ್ಲಿ ನಾವು ವಾಸ ಮಾಡುತ್ತಿದ್ದು, ಈ ಪ್ರದೇಶದ ಸಂಪೂರ್ಣ ಹಕ್ಕು ನಮ್ಮದೇ.</p>.<p>*ಈ ಕಾರಣಗಳಿಂದಾಗಿ ಪರಿಷ್ಕೃತ ಯೋಜನೆಗೆ ಅನುಮೋದನೆ ನೀಡಿರುವುದನ್ನು ರದ್ದುಪಡಿಸಬೇಕು.</p>.<p><strong>‘ಬಿಲ್ಡರ್ಗಳು ಹೇಗೆ ಎಂಬುದು ಗೊತ್ತಿದೆ...’</strong></p>.<p>ವಿಚಾರಣೆ ವೇಳೆ ಪ್ರತಿವಾದಿಗಳ ಪರ ವಾದ ಮಂಡಿಸಿದ ಹಿರಿಯ ವಕೀಲ ಜಯಕುಮಾರ್ ಎಸ್.ಪಾಟೀಲ ಅವರು, ‘ಸಂಧಾನದ ಮೂಲಕ ವಿವಾದ ಬಗೆಹರಿಸಿಕೊಳ್ಳಲು ನಮ್ಮದೇನೂ ಆಕ್ಷೇಪವಿಲ್ಲ. ಅರ್ಜಿದಾರರು ನಮ್ಮ ಬಳಿ ಬಂದರೆ ಮಾತುಕತೆ ನಡೆಸುತ್ತೇವೆ’ ಎಂದು ನ್ಯಾಯಪೀಠಕ್ಕೆ ತಿಳಿಸಿದರು.</p>.<p>ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ದೀಕ್ಷಿತ್ ಅವರು, ‘ಓಹ್, ಅದು ಸಾಧ್ಯವಿಲ್ಲ. ಬಿಲ್ಡರ್ಗಳು ಹೇಗೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಎಲ್ಲೊ ಒಂದಿಷ್ಟು ಒಳ್ಳೆಯ ಬಿಲ್ಡರ್ಗಳು ಇರಬಹುದು. ಆದರೆ, ಸಾಮಾನ್ಯ ಪ್ರಜೆಯ ಬಗೆಗಿನ ಕಾಳಜಿಯನ್ನು ಕಡೆಗಣಿಸಲು ಸಾಧ್ಯವಿಲ್ಲ’ ಎಂದು ಅವರು ಹೇಳಿದರು.</p>.<p>* ತೋಳದ ಬಳಿಗೆ ಕುರಿಗಳನ್ನು ಕಳುಹಿಸಿ ಎಂದು ನೀವು (ಪ್ರತಿವಾದಿ ಪರ ವಕೀಲರು) ಸಲಹೆ ಕೊಡುತ್ತಿದ್ದೀರಾ, ಅದು ಆಗದು. ಅರ್ಜಿದಾರರು ಪ್ರತಿವಾದಿಗಳ ಬಳಿ ಹೋಗಕೂಡದು</p>.<p>-<strong>ಕೃಷ್ಣ ಎಸ್.ದೀಕ್ಷಿತ್, </strong>ನ್ಯಾಯಮೂರ್ತಿ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>