<p><strong>ಬೆಂಗಳೂರು: </strong>ಕೇಂದ್ರ ವಲಯ ತಂಡವು 11 ವರ್ಷಗಳ ಬಳಿಕ ದುಲೀಪ್ ಟ್ರೋಫಿ ದೇಶೀಯ ಕ್ರಿಕೆಟ್ ಟೂರ್ನಿ ಗೆದ್ದುಕೊಂಡಿತು. </p><p>ಬೆಂಗಳೂರಿನ ಬಿಸಿಸಿಐ ಶ್ರೇಷ್ಠತಾ ಕೇಂದ್ರದ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ದಕ್ಷಿಣ ವಲಯ ವಿರುದ್ಧ ಕೇಂದ್ರ ವಲಯ ಆರು ವಿಕೆಟ್ ಅಂತರದ ಜಯ ಗಳಿಸಿತು. </p><p>ಗೆಲುವಿನ 65 ರನ್ಗಳ ಅಲ್ಪ ಮೊತ್ತ ಪಡೆದ ರಜತ್ ಪಾಟೀದಾರ್ ನೇತೃತ್ವದ ಕೇಂದ್ರ ವಲಯವು, ಅಂತಿಮ ದಿನದಾಟದಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು. </p><p>ಮೊಹಮ್ಮದ್ ಅಜರುದ್ದೀನ್ ನಾಯಕತ್ವದ ದಕ್ಷಿಣ ವಲಯ ಮೊದಲ ಇನಿಂಗ್ಸ್ನಲ್ಲಿ ಕೇವಲ 149 ರನ್ನಿಗೆ ಆಲೌಟ್ ಆಗಿತ್ತು. ಕೇಂದ್ರ ವಲಯದ ಪರ ಸಾರಾಂಶ್ ಜೈನ್ ಐದು ಹಾಗೂ ಕುಮಾರ್ ಕಾರ್ತಿಕೇಯ ನಾಲ್ಕು ವಿಕೆಟ್ ಗಳಿಸಿದ್ದರು. </p><p>ಯಶ್ ರಾಥೋಡ್ (194) ಹಾಗೂ ರಜತ್ ಪಾಟೀದಾರ್ (101) ಅಮೋಘ ಶತಕಗಳ ಬೆಂಬಲದಿಂದ ಕೇಂದ್ರ ವಲಯವು ಮೊದಲ ಇನಿಂಗ್ಸ್ನಲ್ಲಿ 511 ರನ್ ಪೇರಿಸಿತ್ತು. ಆ ಮೂಲಕ 362 ರನ್ಗಳ ಬೃಹತ್ ಮುನ್ನಡೆ ಗಳಿಸಿತ್ತು. </p><p>ದ್ವಿತೀಯ ಇನಿಂಗ್ಸ್ನಲ್ಲಿ ದಕ್ಷಿಣ ವಲಯ ದಿಟ್ಟ ಹೋರಾಟ ನೀಡಿತ್ತಲ್ಲದೆ 426 ರನ್ ಗಳಿಸಿತ್ತು. ಅಂಕಿತ್ ಶರ್ಮಾ 99, ಆ್ಯಂಡ್ರೆ ಸಿದ್ದಾರ್ಥ್ ಅಜೇಯ 84 ಹಾಗೂ ಸ್ಮರಣ್ ರವಿಚಂದ್ರನ್ 67 ರನ್ ಗಳಿಸಿದರು. </p><p>ಕೇಂದ್ರ ವಲಯದ ಪರ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ ಯಶ್ ರಾಥೋಡ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. </p>.ದುಲೀಪ್ ಟ್ರೋಫಿ: ಕೇಂದ್ರ ವಲಯದ ವಿಜಯಕ್ಕೆ ಅಲ್ಪಮೊತ್ತದ ಗುರಿ!.ದುಲೀಪ್ ಟ್ರೋಫಿ ಫೈನಲ್ | ಗೆಲುವಿನತ್ತ ಕೇಂದ್ರದ ಚಿತ್ತ; ದಕ್ಷಿಣ ಮರುಹೋರಾಟ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಕೇಂದ್ರ ವಲಯ ತಂಡವು 11 ವರ್ಷಗಳ ಬಳಿಕ ದುಲೀಪ್ ಟ್ರೋಫಿ ದೇಶೀಯ ಕ್ರಿಕೆಟ್ ಟೂರ್ನಿ ಗೆದ್ದುಕೊಂಡಿತು. </p><p>ಬೆಂಗಳೂರಿನ ಬಿಸಿಸಿಐ ಶ್ರೇಷ್ಠತಾ ಕೇಂದ್ರದ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ದಕ್ಷಿಣ ವಲಯ ವಿರುದ್ಧ ಕೇಂದ್ರ ವಲಯ ಆರು ವಿಕೆಟ್ ಅಂತರದ ಜಯ ಗಳಿಸಿತು. </p><p>ಗೆಲುವಿನ 65 ರನ್ಗಳ ಅಲ್ಪ ಮೊತ್ತ ಪಡೆದ ರಜತ್ ಪಾಟೀದಾರ್ ನೇತೃತ್ವದ ಕೇಂದ್ರ ವಲಯವು, ಅಂತಿಮ ದಿನದಾಟದಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು. </p><p>ಮೊಹಮ್ಮದ್ ಅಜರುದ್ದೀನ್ ನಾಯಕತ್ವದ ದಕ್ಷಿಣ ವಲಯ ಮೊದಲ ಇನಿಂಗ್ಸ್ನಲ್ಲಿ ಕೇವಲ 149 ರನ್ನಿಗೆ ಆಲೌಟ್ ಆಗಿತ್ತು. ಕೇಂದ್ರ ವಲಯದ ಪರ ಸಾರಾಂಶ್ ಜೈನ್ ಐದು ಹಾಗೂ ಕುಮಾರ್ ಕಾರ್ತಿಕೇಯ ನಾಲ್ಕು ವಿಕೆಟ್ ಗಳಿಸಿದ್ದರು. </p><p>ಯಶ್ ರಾಥೋಡ್ (194) ಹಾಗೂ ರಜತ್ ಪಾಟೀದಾರ್ (101) ಅಮೋಘ ಶತಕಗಳ ಬೆಂಬಲದಿಂದ ಕೇಂದ್ರ ವಲಯವು ಮೊದಲ ಇನಿಂಗ್ಸ್ನಲ್ಲಿ 511 ರನ್ ಪೇರಿಸಿತ್ತು. ಆ ಮೂಲಕ 362 ರನ್ಗಳ ಬೃಹತ್ ಮುನ್ನಡೆ ಗಳಿಸಿತ್ತು. </p><p>ದ್ವಿತೀಯ ಇನಿಂಗ್ಸ್ನಲ್ಲಿ ದಕ್ಷಿಣ ವಲಯ ದಿಟ್ಟ ಹೋರಾಟ ನೀಡಿತ್ತಲ್ಲದೆ 426 ರನ್ ಗಳಿಸಿತ್ತು. ಅಂಕಿತ್ ಶರ್ಮಾ 99, ಆ್ಯಂಡ್ರೆ ಸಿದ್ದಾರ್ಥ್ ಅಜೇಯ 84 ಹಾಗೂ ಸ್ಮರಣ್ ರವಿಚಂದ್ರನ್ 67 ರನ್ ಗಳಿಸಿದರು. </p><p>ಕೇಂದ್ರ ವಲಯದ ಪರ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ ಯಶ್ ರಾಥೋಡ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. </p>.ದುಲೀಪ್ ಟ್ರೋಫಿ: ಕೇಂದ್ರ ವಲಯದ ವಿಜಯಕ್ಕೆ ಅಲ್ಪಮೊತ್ತದ ಗುರಿ!.ದುಲೀಪ್ ಟ್ರೋಫಿ ಫೈನಲ್ | ಗೆಲುವಿನತ್ತ ಕೇಂದ್ರದ ಚಿತ್ತ; ದಕ್ಷಿಣ ಮರುಹೋರಾಟ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>