‘ಆರೋಪಿ ಅನುಸೂಯಮ್ಮ ತೆಲುಗು ಭಾಷೆಯಲ್ಲಿ ಮಾತನಾಡಿದ್ದರು. ಅದನ್ನು ಪ್ರಶ್ನಿಸಿದ್ದ ದೂರುದಾರ ಶಿವಕುಮಾರ್, ಕನ್ನಡದಲ್ಲಿ ಮಾತನಾಡಲು ಒತ್ತಾಯಿಸಿದ್ದರು. ಅಷ್ಟಾದರೂ ಅನುಸೂಯಮ್ಮ ತೆಲುಗಿನಲ್ಲಿ ಭಾಷಣ ಮುಂದುವರಿಸಿದ್ದರು. ಆಗ ದೂರುದಾರ, ವೇದಿಕೆ ಏರಿ ಮೈಕ್ ಕಸಿಯಲು ಮುಂದಾಗಿದ್ದರು. ತಡೆದಿದ್ದ ಆರೋಪಿಗಳು, ಕುರ್ಚಿಗಳನ್ನು ಎತ್ತಿ ಹೊಡೆದಿದ್ದರು. ಇದರಿಂದ ಗಾಯಗಳಾಗಿದ್ದವು ಎಂದು ದೂರುದಾರರು ಆರೋಪಿಸಿದ್ದಾರೆ’ ಎಂದು ಮೂಲಗಳು ಹೇಳಿವೆ.