‘ಅಣ್ಣಮ್ಮ ಅವರು ತನ್ನ ಅಕ್ಕನ ಮಗಳಾದ ಸುಮಿತ್ರಾ ಎಂಬಾಕೆಯನ್ನು ಚಿಕ್ಕಂದಿನಿಂದಲೂ ತಾವೇ ಪೋಷಣೆ ಮಾಡಿದ್ದರು. ಆಕೆಯನ್ನು ಮುನಿರಾಜ್ ಎಂಬಾತನಿಗೆ ಮದುವೆ ಮಾಡಿಕೊಡಲಾಗಿತ್ತು. ಆರ್ಎಂಸಿ ಯಾರ್ಡ್ನಲ್ಲಿ ಮುನಿರಾಜ್ ಕೆಲಸ ಮಾಡಿಕೊಂಡಿದ್ದ. ಮಾಲೀಕರು ಸಂಬಳ ನೀಡುತ್ತಿಲ್ಲವೆಂದು ಅಣ್ಣಮ್ಮನ ಬಳಿ ಹೇಳಿಕೊಂಡಿದ್ದ. ಮಾಲೀಕರಿಂದ ಸಂಬಳ ಕೊಡಿಸುವಂತೆಯೂ ಮನವಿ ಮಾಡಿದ್ದ. ಅಣ್ಣಮ್ಮ ಅವರನ್ನು ಆರ್ಎಂಸಿ ಯಾರ್ಡ್ಗೆ ರಾತ್ರಿ ವೇಳೆ ಕರೆದೊಯ್ದಿದ್ದ ಸಾಕು ಮಗಳು, ಅಲ್ಲೇ ಬಿಟ್ಟು ಹೋಗಿದ್ದಳು. ಅಲ್ಲಿ ಆಕೆಗೆ ಮುನಿರಾಜ್ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ್ದ’ ಎಂದು ಪೊಲೀಸರು.