‘ಬಟ್ಟೆಯೊಳಗೆ ಕಲ್ಲು ಇರಿಸಿ ಅದರ ಮೇಲೆ ಕರ್ಪೂರ ಇರಿಸಿದ್ದರು. ಪೆಟ್ರೋಲ್ ಸಹ ಸುರಿದಿದ್ದರು. ಬೆಂಕಿ ಹಚ್ಚಲು ಯತ್ನಿಸಿದ್ದರು. ಆದರೆ, ಬೆಂಕಿ ಹೊತ್ತಿಕೊಂಡಿರಲಿಲ್ಲ. ಇದುವೇ ಪವಾಡವೆಂದು ಹೇಳಿದ್ದ ಆರೋಪಿಗಳು, ₹ 2 ಕೋಟಿಗೆ ಕಲ್ಲು ಮಾರುವುದಾಗಿ ತಿಳಿಸಿದ್ದರು. ಇದನ್ನು ನಂಬಿದ್ದ ಜನ, ಕಲ್ಲುಗಳ ಖರೀದಿ ಸಂಬಂಧ ಮಾತುಕತೆ ನಡೆಸುತ್ತಿದ್ದರು’ ಎಂದು ಶರಣಪ್ಪ ಹೇಳಿದರು. ‘ವಂಚನೆ ಬಗ್ಗೆ ಮಾಹಿತಿ ಬರುತ್ತಿದ್ದಂತೆ ಗ್ರಾಹಕರ ವೇಷದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಯಿತು. ರಾಸಾಯನಿಕ ಸಿಂಪಡಿಸಿದ್ದ ಬಟ್ಟೆಯೊಳಗೆ ಆರೋಪಿಗಳು ಕಲ್ಲು ಇರಿಸಿದ್ದರು. ಹೀಗಾಗಿ, ಬಟ್ಟೆಗೆ ಬೆಂಕಿ ಹೊತ್ತಿಕೊಂಡಿರಲಿಲ್ಲ. ಇದುವೇ ಪವಾಡವೆಂದು ಹೇಳಿ ಜನರನ್ನು ನಂಬಿಸಿದ್ದರು’ ಎಂದರು.