ಆಟೊದಲ್ಲಿ ಸಿಲುಕಿದ್ದ ಮೃತದೇಹ: ‘ಸಾಫ್ಟ್ವೇರ್ ಕಂಪನಿಯೊಂದರಲ್ಲಿ ಸೇಲ್ಸ್ ಮ್ಯಾನೇಜರ್ ಆಗಿರುವ ಕಿರಣ್ ಬಾಬಿ ಎಂಬುವರ ಮಗನಾದ ಬಾಲಕ, ತಂದೆಯ ಸ್ವಿಫ್ಟ್ ಕಾರು (ಕೆಎ 31 ಎಂ 5617) ಚಲಾಯಿಸಿಕೊಂಡು ಭೂಪ ಸಂದ್ರಕ್ಕೆ ಬಂದಿದ್ದ. ಕಲ್ಪನಾ ಚಾವ್ಲಾ ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ಕಾರು ಚಲಾಯಿಸಿ ಎದುರಿಗಿದ್ದ ಆಟೊಕ್ಕೆ ಡಿಕ್ಕಿ ಹೊಡೆಸಿದ್ದ. ಕಾರು ಆಟೊವನ್ನು ಉಜ್ಜಿಕೊಂಡು ಹೋಗಿತ್ತು’ ಎಂದು ಪೊಲೀಸರು ಹೇಳಿದರು.