‘ಗಡ್ಡೆ ಬೆಳೆದಿದ್ದ ಸ್ಥಳದಲ್ಲಿ ಸಣ್ಣ ಮತ್ತು ದೊಡ್ಡದಾದ ರಕ್ತನಾಳಗಳಿದ್ದವು. ಹಾಗಾಗಿ ಸಾಂಪ್ರದಾಯಿಕ ಶಸ್ತ್ರಚಿಕಿತ್ಸೆಯನ್ನು ಕೈಬಿಟ್ಟು,ದಾನಿಗಳ ನೆರವಿಲ್ಲದೆಯೇ ಸ್ವಯಂಚಾಲಿತ ಶಸ್ತ್ರಚಿಕಿತ್ಸೆ ಕಸಿಯನ್ನು ಮಾಡಲು ನಿರ್ಧರಿಸಿದೆವು. ಕ್ಯಾನ್ಸರ್ ಗಡ್ಡೆಯನ್ನು ಹೊರತೆಗೆದು, ಆರೋಗ್ಯಯುತ ಯಕೃತ್ತನ್ನು ಕಸಿ ಮಾಡಿದ್ದೇವೆ. ಯಾವುದೇ ಹೆಚ್ಚುವರಿ ಚಿಕಿತ್ಸೆಯ ಅಗತ್ಯವಿಲ್ಲ’ ಎಂದು ಡಾ. ಸಂಜಯ್ ಗೋವಿಲ್ ತಿಳಿಸಿದರು.