ನಿವೃತ್ತ ಐಜಿಪಿ ಗೋಪಾಲ್ ಬಿ. ಹೊಸೂರು, ‘ಪೊಲೀಸ್ ಇಲಾಖೆಯಲ್ಲಿ ನಾಯಕತ್ವ ಗುಣ ಮುಖ್ಯ. ಈ ಗುಣ ಉನ್ನತ ಹುದ್ದೆಯಿಂದ ಮಾತ್ರ ಬರುವುದಿಲ್ಲ. ಬದಲಾಗಿ ವ್ಯಕ್ತಿಗತವಾಗಿ ಬರುತ್ತದೆ. ನಾಯಕತ್ವ ಗುಣದ ಕೊರತೆಯಿಂದ ಪೊಲೀಸ್ ಇಲಾಖೆಗೆ ಸಮರ್ಥವಾಗಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ನೇಮಕಾತಿ ಪ್ರಕ್ರಿಯೆ, ವರ್ಗಾವಣೆ ಸೇರಿ ವಿವಿಧ ಕಾರಣಗಳಿಂದಲೂ ಕೆಲವರು ನಾಯಕತ್ವ ಗುಣವನ್ನು ಕಳೆದುಕೊಳ್ಳುತ್ತಿದ್ದಾರೆ. ಪೊಲೀಸ್ ಅಧಿಕಾರಿಗಳು ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಸಿಬ್ಬಂದಿಯನ್ನು ಪ್ರೀತಿ ಗೌರವದಿಂದ ಕಾಣಬೇಕು’ ಎಂದು ಹೇಳಿದರು.