<p><strong>ಬೆಂಗಳೂರು</strong>: ಹೆಣ್ಣುಮಗುವಿಗೆ ಸೀಳುತುಟಿ ಇದೆಯೆಂಬ ಕಾರಣಕ್ಕೆ ಆಟೊದಲ್ಲಿ ಮಲಗಿಸಿ ಪರಾರಿಯಾಗಿದ್ದ ಜೋಡಿಯನ್ನು ಬ್ಯಾಟರಾಯನಪುರ ಠಾಣೆ ಪೊಲೀಸರು ಪತ್ತೆಹಚ್ಚಿದ್ದಾರೆ.</p>.<p>ಏಪ್ರಿಲ್ 24ರಂದು ಠಾಣಾ ವ್ಯಾಪ್ತಿಯಲ್ಲಿ ಮಗುವನ್ನು ಆಟೊದಲ್ಲಿ ಬಿಟ್ಟು ಆರೋಪಿ ಅಪ್ಪಣ್ಣ ಹಾಗೂ 30 ವರ್ಷದ ಮಹಿಳೆ ಪರಾರಿಯಾಗಿದ್ದರು.</p>.<p>‘ಕೊಡಗಿನ ವಿರಾಜಪೇಟೆಯ ಅಪ್ಪಣ್ಣ ಎಂಬಾತ ಮಹಿಳೆಯ ಜತೆ ಸಲುಗೆ ಹೊಂದಿದ್ದ. ಮಹಿಳೆಗೆ ಈಗಾಗಲೇ ಒಂದು ಮಗುವಿದ್ದು, ಪತಿಯ ಸಾವಿನ ನಂತರ ಅಪ್ಪಣ್ಣನೊಂದಿಗೆ ಸಂಬಂಧ ಹೊಂದಿದ್ದಳು. ಈ ಇಬ್ಬರ ಸಂಬಂಧಕ್ಕೆ ಜನಿಸಿದ್ದ ಹೆಣ್ಣುಮಗು ಸೀಳು ತುಟಿ ಹೊಂದಿತ್ತು. ಹಾಗಾಗಿ ಈ ಮಗುವನ್ನು ಸಾಕಲು ಇಚ್ಛಿಸದ ಜೋಡಿ, ಠಾಣಾ ವ್ಯಾಪ್ತಿಯಲ್ಲಿ ರಾತ್ರಿ ನಿಲುಗಡೆ ಮಾಡಿದ್ದ ಆಟೊವೊಂದರಲ್ಲಿ ಮಲಗಿಸಿ ಕೆಎಸ್ಆರ್ಟಿಸಿ ಬಸ್ ಮೂಲಕ ವಿರಾಜಪೇಟೆಗೆ ಹೋಗಿತ್ತು. ಬೆಳಿಗ್ಗೆ ಮಗು ಅಳುತ್ತಿರುವ ಶಬ್ದ ಕೇಳಿದ ಸ್ಥಳೀಯರು ಮಾಹಿತಿ ನೀಡಿದ್ದರು’ ಎಂದು ಪೊಲೀಸರು ತಿಳಿಸಿದ್ದಾರೆ.</p>.<p>ಪ್ರಕರಣ ದಾಖಲಿಸಿಕೊಂಡು ಘಟನಾ ಸ್ಥಳದ ಸುತ್ತಲಿನ ಸಿ.ಸಿ.ಟಿ.ವಿ ಕ್ಯಾಮೆರಾಗಳ ದೃಶ್ಯಗಳನ್ನು ಪರಿಶೀಲಿಸಲಾಯಿತು. ನಂತರ ವಿರಾಜಪೇಟೆಯಲ್ಲಿದ್ದ ಅಪ್ಪಣ್ಣನನ್ನು ಬಂಧಿಸಲಾಗಿದೆ. ಇಪ್ಪತ್ತು ದಿನದ ಮಗುವನ್ನು ಮಹಿಳೆಗೆ ಹಸ್ತಾಂತರಿಸಿ, ಎಚ್ಚರಿಕೆ ನೀಡಲಾಗಿದೆ ಎಂದು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಹೆಣ್ಣುಮಗುವಿಗೆ ಸೀಳುತುಟಿ ಇದೆಯೆಂಬ ಕಾರಣಕ್ಕೆ ಆಟೊದಲ್ಲಿ ಮಲಗಿಸಿ ಪರಾರಿಯಾಗಿದ್ದ ಜೋಡಿಯನ್ನು ಬ್ಯಾಟರಾಯನಪುರ ಠಾಣೆ ಪೊಲೀಸರು ಪತ್ತೆಹಚ್ಚಿದ್ದಾರೆ.</p>.<p>ಏಪ್ರಿಲ್ 24ರಂದು ಠಾಣಾ ವ್ಯಾಪ್ತಿಯಲ್ಲಿ ಮಗುವನ್ನು ಆಟೊದಲ್ಲಿ ಬಿಟ್ಟು ಆರೋಪಿ ಅಪ್ಪಣ್ಣ ಹಾಗೂ 30 ವರ್ಷದ ಮಹಿಳೆ ಪರಾರಿಯಾಗಿದ್ದರು.</p>.<p>‘ಕೊಡಗಿನ ವಿರಾಜಪೇಟೆಯ ಅಪ್ಪಣ್ಣ ಎಂಬಾತ ಮಹಿಳೆಯ ಜತೆ ಸಲುಗೆ ಹೊಂದಿದ್ದ. ಮಹಿಳೆಗೆ ಈಗಾಗಲೇ ಒಂದು ಮಗುವಿದ್ದು, ಪತಿಯ ಸಾವಿನ ನಂತರ ಅಪ್ಪಣ್ಣನೊಂದಿಗೆ ಸಂಬಂಧ ಹೊಂದಿದ್ದಳು. ಈ ಇಬ್ಬರ ಸಂಬಂಧಕ್ಕೆ ಜನಿಸಿದ್ದ ಹೆಣ್ಣುಮಗು ಸೀಳು ತುಟಿ ಹೊಂದಿತ್ತು. ಹಾಗಾಗಿ ಈ ಮಗುವನ್ನು ಸಾಕಲು ಇಚ್ಛಿಸದ ಜೋಡಿ, ಠಾಣಾ ವ್ಯಾಪ್ತಿಯಲ್ಲಿ ರಾತ್ರಿ ನಿಲುಗಡೆ ಮಾಡಿದ್ದ ಆಟೊವೊಂದರಲ್ಲಿ ಮಲಗಿಸಿ ಕೆಎಸ್ಆರ್ಟಿಸಿ ಬಸ್ ಮೂಲಕ ವಿರಾಜಪೇಟೆಗೆ ಹೋಗಿತ್ತು. ಬೆಳಿಗ್ಗೆ ಮಗು ಅಳುತ್ತಿರುವ ಶಬ್ದ ಕೇಳಿದ ಸ್ಥಳೀಯರು ಮಾಹಿತಿ ನೀಡಿದ್ದರು’ ಎಂದು ಪೊಲೀಸರು ತಿಳಿಸಿದ್ದಾರೆ.</p>.<p>ಪ್ರಕರಣ ದಾಖಲಿಸಿಕೊಂಡು ಘಟನಾ ಸ್ಥಳದ ಸುತ್ತಲಿನ ಸಿ.ಸಿ.ಟಿ.ವಿ ಕ್ಯಾಮೆರಾಗಳ ದೃಶ್ಯಗಳನ್ನು ಪರಿಶೀಲಿಸಲಾಯಿತು. ನಂತರ ವಿರಾಜಪೇಟೆಯಲ್ಲಿದ್ದ ಅಪ್ಪಣ್ಣನನ್ನು ಬಂಧಿಸಲಾಗಿದೆ. ಇಪ್ಪತ್ತು ದಿನದ ಮಗುವನ್ನು ಮಹಿಳೆಗೆ ಹಸ್ತಾಂತರಿಸಿ, ಎಚ್ಚರಿಕೆ ನೀಡಲಾಗಿದೆ ಎಂದು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>