<p><strong>ಬೆಂಗಳೂರು:</strong> ಚೊಕ್ಕನಹಳ್ಳಿಯ ಆಶ್ರಮವೊಂದರ ಶಾಲೆಯಿಂದ 11 ವರ್ಷದ ಬಾಲಕ ಚೇತನ್ ರೆಡ್ಡಿಯನ್ನು ಅಪಹರಿಸಿ ಕೊಲೆ ಮಾಡಿದ್ದ ಆರೋಪದಡಿ ಜಿ.ಸಂಪತ್ ಕುಮಾರ್ (35) ಎಂಬುವವರನ್ನು ಬಾಗಲೂರು ಪೊಲೀಸರು ಬಂಧಿಸಿದ್ದಾರೆ.</p>.<p>‘ಕೆಜಿಎಫ್ ಕೃಷ್ಣರಾಜಪುರ ನಿವಾಸಿ ಸಂಪತ್ ಕುಮಾರ್, ಫೆ.20ರಂದು ಬಾಲಕನ ಅಪಹರಿಸಿ ಕ್ಯಾಸಂಬಳ್ಳಿ ಬಳಿಯ ಕೆರೆಗೆ ತಳ್ಳಿ ಕೊಲೆ ಮಾಡಿದ್ದ. ಅಪಹರಣ ದೂರಿನ ತನಿಖೆಗೆ ಸಂಬಂಧಿಸಿ ಈತನ ಬಂಧಿಸಲಾಗಿದೆ’ ಎಂದು ಪೊಲೀಸರು ಹೇಳಿದರು.</p>.<p>‘ಬಾಲಕ ಚೇತನ್, ಕೆಜಿಎಫ್ ಐವಾರಹಳ್ಳಿಯ ಪ್ರವೀಣ್ಕುಮಾರ್ – ಪುಷ್ಪಾವತಿ ದಂಪತಿ ಮಗ. ಮೊದಲ ಪತಿಗೆ ವಿಚ್ಛೇದನ ನೀಡಿದ್ದ ಪುಷ್ಪಾವತಿ, ಆರೋಪಿಯನ್ನು 2021ರಲ್ಲಿ ಎರಡನೇ ಮದುವೆಯಾಗಿದ್ದರು. ಸಂಪತ್ಗೂ ಇದು ಎರಡನೇ ಮದುವೆಯಾಗಿತ್ತು.’</p>.<p>‘ಅತ್ತ, ವಿಚ್ಛೇದನದ ನಂತರ ಮಗನ ಪಾಲನೆ ಹೊಣೆ ಹೊತ್ತಿದ್ದ ಪ್ರವೀಣ್ಕುಮಾರ್, ಆತನನ್ನು ಆಶ್ರಮದ ಶಾಲೆಗೆ ಸೇರಿಸಿದ್ದರು. ಪುಷ್ಪಾವತಿ ಹಾಗೂ ಸಂಪತ್ ಪ್ರತ್ಯೇಕವಾಗಿ ಜೀವನ ಸಾಗಿಸುತ್ತಿದ್ದರು’ ಎಂದು ಪೊಲೀಸರು ಹೇಳಿದರು.</p>.<p>ಈ ಮಧ್ಯೆ ‘ಸಂಪತ್ 2ನೇ ಪತ್ನಿ ಪುಷ್ಪಾವತಿ ಶೀಲ ಶಂಕಿಸಿ ಗಲಾಟೆ ಮಾಡುತ್ತಿದ್ದ. ಬೇಸತ್ತ ಪುಷ್ಪಾವತಿ, ಮನೆ ಬಿಟ್ಟು ಹೋಗಿದ್ದು, ಇದರಿಂದ ಸಿಟ್ಟಾಗಿದ್ದ’ ಎಂದರು.</p>.<p>‘ಮನೆ ಬಿಟ್ಟು ಹೋಗಿದ್ದ 2ನೇ ಪತ್ನಿಯನ್ನು ಬೆದರಿಸಿ ವಾಪಸು ಕರೆತರಲು ಬಾಲಕನ ಅಪಹರಿಸಿದ್ದೆ. ಆಕೆ ಮೊಬೈಲ್ಗೆ ಸಂಪರ್ಕಕ್ಕೆ ಸಿಗದಿದ್ದರಿಂದ ಸಿಟ್ಟಾಗಿ ಬಾಲಕನ ಕೆರೆಗೆ ತಳ್ಳಿದೆ’ ಎಂದು ಆರೋಪಿ ಹೇಳಿದ್ದಾನೆ’ ಎಂದು ಪೊಲೀಸರು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಚೊಕ್ಕನಹಳ್ಳಿಯ ಆಶ್ರಮವೊಂದರ ಶಾಲೆಯಿಂದ 11 ವರ್ಷದ ಬಾಲಕ ಚೇತನ್ ರೆಡ್ಡಿಯನ್ನು ಅಪಹರಿಸಿ ಕೊಲೆ ಮಾಡಿದ್ದ ಆರೋಪದಡಿ ಜಿ.ಸಂಪತ್ ಕುಮಾರ್ (35) ಎಂಬುವವರನ್ನು ಬಾಗಲೂರು ಪೊಲೀಸರು ಬಂಧಿಸಿದ್ದಾರೆ.</p>.<p>‘ಕೆಜಿಎಫ್ ಕೃಷ್ಣರಾಜಪುರ ನಿವಾಸಿ ಸಂಪತ್ ಕುಮಾರ್, ಫೆ.20ರಂದು ಬಾಲಕನ ಅಪಹರಿಸಿ ಕ್ಯಾಸಂಬಳ್ಳಿ ಬಳಿಯ ಕೆರೆಗೆ ತಳ್ಳಿ ಕೊಲೆ ಮಾಡಿದ್ದ. ಅಪಹರಣ ದೂರಿನ ತನಿಖೆಗೆ ಸಂಬಂಧಿಸಿ ಈತನ ಬಂಧಿಸಲಾಗಿದೆ’ ಎಂದು ಪೊಲೀಸರು ಹೇಳಿದರು.</p>.<p>‘ಬಾಲಕ ಚೇತನ್, ಕೆಜಿಎಫ್ ಐವಾರಹಳ್ಳಿಯ ಪ್ರವೀಣ್ಕುಮಾರ್ – ಪುಷ್ಪಾವತಿ ದಂಪತಿ ಮಗ. ಮೊದಲ ಪತಿಗೆ ವಿಚ್ಛೇದನ ನೀಡಿದ್ದ ಪುಷ್ಪಾವತಿ, ಆರೋಪಿಯನ್ನು 2021ರಲ್ಲಿ ಎರಡನೇ ಮದುವೆಯಾಗಿದ್ದರು. ಸಂಪತ್ಗೂ ಇದು ಎರಡನೇ ಮದುವೆಯಾಗಿತ್ತು.’</p>.<p>‘ಅತ್ತ, ವಿಚ್ಛೇದನದ ನಂತರ ಮಗನ ಪಾಲನೆ ಹೊಣೆ ಹೊತ್ತಿದ್ದ ಪ್ರವೀಣ್ಕುಮಾರ್, ಆತನನ್ನು ಆಶ್ರಮದ ಶಾಲೆಗೆ ಸೇರಿಸಿದ್ದರು. ಪುಷ್ಪಾವತಿ ಹಾಗೂ ಸಂಪತ್ ಪ್ರತ್ಯೇಕವಾಗಿ ಜೀವನ ಸಾಗಿಸುತ್ತಿದ್ದರು’ ಎಂದು ಪೊಲೀಸರು ಹೇಳಿದರು.</p>.<p>ಈ ಮಧ್ಯೆ ‘ಸಂಪತ್ 2ನೇ ಪತ್ನಿ ಪುಷ್ಪಾವತಿ ಶೀಲ ಶಂಕಿಸಿ ಗಲಾಟೆ ಮಾಡುತ್ತಿದ್ದ. ಬೇಸತ್ತ ಪುಷ್ಪಾವತಿ, ಮನೆ ಬಿಟ್ಟು ಹೋಗಿದ್ದು, ಇದರಿಂದ ಸಿಟ್ಟಾಗಿದ್ದ’ ಎಂದರು.</p>.<p>‘ಮನೆ ಬಿಟ್ಟು ಹೋಗಿದ್ದ 2ನೇ ಪತ್ನಿಯನ್ನು ಬೆದರಿಸಿ ವಾಪಸು ಕರೆತರಲು ಬಾಲಕನ ಅಪಹರಿಸಿದ್ದೆ. ಆಕೆ ಮೊಬೈಲ್ಗೆ ಸಂಪರ್ಕಕ್ಕೆ ಸಿಗದಿದ್ದರಿಂದ ಸಿಟ್ಟಾಗಿ ಬಾಲಕನ ಕೆರೆಗೆ ತಳ್ಳಿದೆ’ ಎಂದು ಆರೋಪಿ ಹೇಳಿದ್ದಾನೆ’ ಎಂದು ಪೊಲೀಸರು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>