ಬೆಂಗಳೂರು: ಪುಸ್ತಕ ಪ್ರಕಾಶನಕ್ಕೆ ಸಂಬಂಧಿಸಿದಂತೆ ಪಬ್ಲಿಷಿಂಗ್ ನೆಕ್ಸ್ಟ್ ಹಮ್ಮಿಕೊಂಡಿದ್ದ ಸ್ಪರ್ಧೆಯಲ್ಲಿ ‘ಬಹುರೂಪಿ’ ಪ್ರಕಾಶನವು ಮುಖಪುಟ ವಿನ್ಯಾಸ ವಿಭಾಗದಲ್ಲಿ ರಾಷ್ಟ್ರೀಯ ಪ್ರಶಸ್ತಿಗೆ ಭಾಜನವಾಗಿದೆ.
ಕಲಾವಿದ ಸುಧಾಕರ ದರ್ಬೆ ಅವರು ಮುಖಪುಟ ವಿನ್ಯಾಸ ಮಾಡಿದ ‘ಕೆರೆ-ದಡ’ ಕೃತಿ ಮೊದಲ ಸ್ಥಾನ ಪಡೆದಿದೆ. ಪತ್ರಿಕಾ ವಿನ್ಯಾಸಕಾರರಾದ ಸುಧಾಕರ ದರ್ಬೆ, ಪುತ್ತೂರಿನ ದರ್ಬೆ ಗ್ರಾಮದವರು.
ಭಾರತದ ಎಲ್ಲ ಭಾಷೆಗಳನ್ನು ಒಳಗೊಂಡು ಜರುಗಿದ ಈ ಮುಖಪುಟ ಸ್ಪರ್ಧೆಯಲ್ಲಿ ವಿವಿಧ ಪ್ರಕಾಶನ ಸಂಸ್ಥೆಗಳು ಭಾಗವಹಿಸಿದ್ದವು.