ಹೊಸೂರು ಮುಖ್ಯರಸ್ತೆಯ ಜಿ.ಬಿ.ಪಾಳ್ಯದಲ್ಲಿರುವ ಅಂಬಾ ಬಜಾಜ್ ಬಳಿ ದಿನಸಿ ಕಿಟ್ ವಿತರಿಸಿ ಮಾತನಾಡಿದ ಸಂಸ್ಥೆಯ ವಿಭಾಗೀಯ ವ್ಯವಸ್ಥಾಪಕ ಎ.ರಾಘವೇಂದ್ರ,‘ಲಾಕ್ಡೌನ್ನಿಂದಾಗಿ ಆಟೊ ಚಾಲಕರ ದುಡಿಮೆಗೆ ಹೊಡೆತ ಬಿದ್ದಿತ್ತು. ಆ ಸಂದರ್ಭದಲ್ಲಿ ಜೀವನ ನಿರ್ವಹಣೆಗೆ ಪರದಾಡಿದ್ದರು. ಇದನ್ನು ಮನಗಂಡ ಬಜಾಜ್, ಆಟೊ ಚಾಲಕರ ನೆರವಿಗೆ ನಿಂತಿದೆ’ ಎಂದರು.