ಸಂಜೆ 5ರ ಹೊತ್ತಿಗೆ ದೇವಳದಲ್ಲಿನ ಶ್ರೀ ಶಾಕಾಂಬರಿ ದೇವಿಗೆ ಧೂಳೋತ್ಸವ ನಡೆಯಿತು. ನಂತರ ಬನಶಂಕರಿ ಅಮ್ಮ, ಚೌಡೇಶ್ವರಿ ದೇವಿ, ದುರ್ಗಾದೇವಿ, ಪುಟ್ಟೇನಹಳ್ಳಿ ಆಂಜನೇಯ ಸ್ವಾಮಿ, ಮಹಾಗಣಪತಿ, ಸುಬ್ರಹ್ಮಣ್ಯೇಶ್ವರ ಸ್ವಾಮಿ, ರಾಜರಾಜೇಶ್ವರಿ ಹಾಗೂ ಪಾರ್ವತಿ ಪರಮೇಶ್ವರರ ಮುತ್ತಿನ ಪಲ್ಲಕ್ಕಿ ಉತ್ಸವ ಸರಳವಾಗಿ ಜರುಗಿತು. ಈ ಕಾರ್ಯಕ್ರಮದಲ್ಲೂ ಭಕ್ತರು ನೂರಾರು ಸಂಖ್ಯೆಯಲ್ಲಿ ನೆರೆದಿದ್ದರು.