ಬೆಂಗಳೂರು: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಹುಣಸಮಾರನಹಳ್ಳಿ ಬಳಿ ಕಾರು ಮಾರಾಟ ಮಳಿಗೆ ಶೆಡ್ ಕುಸಿದಿದ್ದು, ಕಾರ್ಮಿಕರೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೃತ ಕಾರ್ಮಿಕನ ಹೆಸರು ಗೊತ್ತಾಗಿಲ್ಲ.
ಕಾರುಗಳನ್ನು ನಿಲ್ಲಿಸಲು ಶೆಡ್ ನಿರ್ಮಿಸಲಾಗಿತ್ತು. ಅದರ ಪಕ್ಕವೇ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಮಧ್ಯಾಹ್ನ 12.30ರ ಸುಮಾರಿಗೆ ಶೆಡ್ ಕುಸಿದು ಬಿದ್ದಿದೆ. ಸ್ಥಳ ಪರಿಶೀಲನೆ ನಡೆಸಲಾಗುತ್ತಿದೆ' ಎಂದು ಚಿಕ್ಕಜಾಲ ಪೊಲೀಸರು ಹೇಳಿದರು.
ಎಂವಿಐಟಿ ಕ್ರಾಸ್ ಬಳಿ ಕಬ್ಬಿಣದ ರಾಡು ಹಾಗೂ ತಗಡಿನಿಂದ ದೊಡ್ಡ ಗಾತ್ರದ ಶೆಡ್ ನಿರ್ಮಿಸಲಾಗಿತ್ತು. ಶೆಡ್ ಏಕಾಏಕಿ ಕುಸಿದಿದೆ. ಘಟನೆಯಲ್ಲಿ ಐವರು ತೀವ್ರವಾಗಿ ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.