ಬೆಂಗಳೂರು: ನಗರದಲ್ಲಿ ಸುತ್ತಾಡಿ ಐಷಾರಾಮಿ ಬೈಕ್ಗಳನ್ನು ಕಳವು ಮಾಡುತ್ತಿದ್ದ ಆರೋಪದಡಿ ತಮಿಳುನಾಡಿನ ಇಬ್ಬರು ಯುವಕರನ್ನು ಬೊಮ್ಮನಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಪೆರಿಯಾಸ್ವಾಮಿ ಅಲಿಯಾಸ್ ಬಾಯ್ (20) ಹಾಗೂ ಹರೀಶ್ ಅಲಿಯಾಸ್ ಹರಿ (21) ಬಂಧಿತರು. ಆರೋಪಿಗಳಿಂದ ರಾಯಲ್ ಎನ್ಫೀಲ್ಡ್, ಯಮಹಾ, ಕೆಟಿಎಂ ಡ್ಯೂಕ್ ಸೇರಿ ಒಟ್ಟು ₹ 8 ಲಕ್ಷ ಮೌಲ್ಯದ 5 ಬೈಕ್ಗಳನ್ನು ವಶಪಡಿಸಿಕೊಳ್ಳಲಾಗಿದೆ.