ನಶಿಸುತ್ತಿರುವ ಕೆರೆಗಳ ರಕ್ಷಣೆಗೆ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ನೇತೃತ್ವದಲ್ಲಿ ಪ್ರತಿಷ್ಠಾನವು 2017ರಿಂದ ಹೋರಾಟ ನಡೆಸುತ್ತಿದೆ. ಅಬ್ಬಿಗೆರೆ, ಸಿಂಗಪುರ, ಕಗ್ಗದಾಸಪುರ ಮತ್ತು ಗುಬ್ಬಾಲಾಲ ಕೆರೆಗಳು ಸೇರಿದಂತೆ ಒಟ್ಟು 23 ಕೆರೆಗಳಿಗೆ ಸಂಬಂಧಿಸಿದಂತೆ ‘ನಮ್ಮ ಬೆಂಗಳೂರು’ ಪ್ರತಿಷ್ಠಾನ ಮತ್ತು ‘ಯುನೈಟೆಡ್ ಬೆಂಗಳೂರು’ ತಂಡ ಈಗಾಗಲೇ ಲೋಕಾಯುಕ್ತಕ್ಕೆ ದೂರು ನೀಡಿವೆ.