<p><strong>ಬೆಂಗಳೂರು: </strong>ಆಟ–ಗಲಾಟಾ ಸಂಸ್ಥೆಯ ಆಶ್ರಯದಲ್ಲಿ ‘ಬೆಂಗಳೂರು ಕಾವ್ಯ ಉತ್ಸವ’ದ ಮೂರನೇ ಆವೃತ್ತಿ ಆಗಸ್ಟ್ 4 ಮತ್ತು 5ರಂದು ಹಳೆ ವಿಮಾನ ನಿಲ್ದಾಣ ರಸ್ತೆಯ ಲೀಲಾ ಪ್ಯಾಲೇಸ್ನಲ್ಲಿ ನಡೆಯಲಿದೆ.</p>.<p>ಕಾವ್ಯ ವಾಚನದ ಜೊತೆಗೆ ಕಾರ್ಯಾಗಾರವೂ ಇರುತ್ತದೆ. ಇಂಗ್ಲಿಷ್, ಹಿಂದಿ, ಕನ್ನಡ, ಮಲಯಾಳಂ ಬಂಗಾಳಿ ಸೇರಿದಂತೆ ವಿವಿಧ ಪ್ರಾದೇಶಿಕ ಭಾಷೆಗಳ ಕವಿತೆಗಳ ವಾಚನ ನಡೆಯಲಿದೆ.</p>.<p>‘ಕಳೆದ ವರ್ಷ ಉತ್ಸವ ಆಯೋಜಿಸಿದಾಗ ನಿರೀಕ್ಷೆಗೂ ಮೀರಿ ಯಶಸ್ಸು ದೊರೆತಿತ್ತು. ಸುಮಾರು ಐದು ಸಾವಿರ ಜನ ಭಾಗವಹಿಸಿದ್ದರು. ಈ ಬಾರಿ ಅದಕ್ಕಿಂತಲೂ ಹೆಚ್ಚು ಜನರ ನಿರೀಕ್ಷೆ ಇದೆ. ಹೊಸ ಹಾಗೂ ಹಳೆ ತಲೆಮಾರಿನ ಕವಿಗಳು, ಗಾಯಕರು, ಗೀತ ರಚನೆಕಾರರು ಉತ್ಸವದಲ್ಲಿ ಭಾಗವಹಿಸಲಿದ್ದಾರೆ’ ಎಂದು ಆಟ–ಗಲಾಟಾ ಸಂಸ್ಥಾಪಕ ಸುಭೋದ್ ಶಂಕರ್ ತಿಳಿಸಿದರು.</p>.<p>ಶೈನಿ ಆ್ಯಂಟನಿ ಉತ್ಸವದ ನಿರ್ದೇಶಕಿ. ‘ದಿ ಆರ್ಫನೇಜ್ ಫಾರ್ ವುಡ್ಸ್’, ‘ಬೇರ್ಫೀಟ್ ಆ್ಯಂಡ್ ಪ್ರೆಗ್ನೆಂಟ್’, ‘ವೆನ್ ಮೀರಾ ವೆಂಟ್ ಫೋರ್ತ್ ಆ್ಯಂಡ್ ಮಲ್ಟಿಪ್ಲೈಡ್’ ಸೇರಿದಂತೆ ಹಲವು ಸಣ್ಣ ಕಥೆ ಮತ್ತು ಕಾದಂಬರಿಗಳನ್ನು ಇವರು ರಚಿಸಿದ್ದಾರೆ.</p>.<p class="Subhead">ಯಾರು ಭಾಗವಹಿಸಲಿದ್ದಾರೆ?: ಹಿರಿಯ ಸಾಹಿತಿ ಚಂದ್ರಶೇಖರ ಕಂಬಾರ, ಕಥೆಗಾರ ಎಸ್.ದಿವಾಕರ್, ಕವಿಗಳಾದ ಪ್ರತಿಭಾ ನಂದಕುಮಾರ್, ಡಿ.ಸಿ.ರಾಜಪ್ಪ, ಎಂ.ಆರ್.ಕಮಲಾ, ನಂದಿತಾ ಬೋಸ್, ನೀಲಿಂ ಕುಮಾರ್, ರಾಮಚಂದ್ರ ಗುಹಾ, ಅಮೃತಾ ಡೋಂಗ್ರೆ, ಸೌರವ್ ರಾಯ್, ಅನಾಮಿಕಾ, ಅನೀಶ್ ವಿದ್ಯಾಶಂಕರ್, ಉತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ.</p>.<p>‘ಈ ಉತ್ಸವದಲ್ಲಿ ಕವಿತೆ, ಸಂವಾದ, ಕಾರ್ಯಾಗಾರಗಳು ನಡೆಯಲಿವೆ. ಉತ್ಸವದ ಎರಡನೇ ದಿನ ಮಕ್ಕಳಿಗಾಗಿ ನಾನಾ ರೀತಿಯ ಕಾರ್ಯಗಾರಗಳನ್ನು ಹಮ್ಮಿಕೊಂಡಿದ್ದೇವೆ. ವಿವಿಧ ರೀತಿಯ ಕವಿತೆಗಳ ರಚನೆ ಕುರಿತು ಆ ಕ್ಷೇತ್ರದ ಸಾಧಕರು ಮಾತನಾಡುತ್ತಾರೆ. ಕಲಾ ಪ್ರದರ್ಶನದ ಭಾಗವಾಗಿ ಕಲಾವಿದ ಆನಂದ್ ಪರಿಮಾಳ್ ಅವರು ತ್ಯಾಜ್ಯ ವಸ್ತುಗಳಿಗೆ ಕಲಾತ್ಮಕ ಸ್ಪರ್ಶ ನೀಡಲಿದ್ದಾರೆ’ ಎಂದು ವಿವರಿಸಿದರು.</p>.<p>ಹೆಚ್ಚಿನ ಮಾಹಿತಿಗೆ: <a href="http://www.bengalurupoetryfestival.org" target="_blank">http://www.bengalurupoetryfestival.org</a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಆಟ–ಗಲಾಟಾ ಸಂಸ್ಥೆಯ ಆಶ್ರಯದಲ್ಲಿ ‘ಬೆಂಗಳೂರು ಕಾವ್ಯ ಉತ್ಸವ’ದ ಮೂರನೇ ಆವೃತ್ತಿ ಆಗಸ್ಟ್ 4 ಮತ್ತು 5ರಂದು ಹಳೆ ವಿಮಾನ ನಿಲ್ದಾಣ ರಸ್ತೆಯ ಲೀಲಾ ಪ್ಯಾಲೇಸ್ನಲ್ಲಿ ನಡೆಯಲಿದೆ.</p>.<p>ಕಾವ್ಯ ವಾಚನದ ಜೊತೆಗೆ ಕಾರ್ಯಾಗಾರವೂ ಇರುತ್ತದೆ. ಇಂಗ್ಲಿಷ್, ಹಿಂದಿ, ಕನ್ನಡ, ಮಲಯಾಳಂ ಬಂಗಾಳಿ ಸೇರಿದಂತೆ ವಿವಿಧ ಪ್ರಾದೇಶಿಕ ಭಾಷೆಗಳ ಕವಿತೆಗಳ ವಾಚನ ನಡೆಯಲಿದೆ.</p>.<p>‘ಕಳೆದ ವರ್ಷ ಉತ್ಸವ ಆಯೋಜಿಸಿದಾಗ ನಿರೀಕ್ಷೆಗೂ ಮೀರಿ ಯಶಸ್ಸು ದೊರೆತಿತ್ತು. ಸುಮಾರು ಐದು ಸಾವಿರ ಜನ ಭಾಗವಹಿಸಿದ್ದರು. ಈ ಬಾರಿ ಅದಕ್ಕಿಂತಲೂ ಹೆಚ್ಚು ಜನರ ನಿರೀಕ್ಷೆ ಇದೆ. ಹೊಸ ಹಾಗೂ ಹಳೆ ತಲೆಮಾರಿನ ಕವಿಗಳು, ಗಾಯಕರು, ಗೀತ ರಚನೆಕಾರರು ಉತ್ಸವದಲ್ಲಿ ಭಾಗವಹಿಸಲಿದ್ದಾರೆ’ ಎಂದು ಆಟ–ಗಲಾಟಾ ಸಂಸ್ಥಾಪಕ ಸುಭೋದ್ ಶಂಕರ್ ತಿಳಿಸಿದರು.</p>.<p>ಶೈನಿ ಆ್ಯಂಟನಿ ಉತ್ಸವದ ನಿರ್ದೇಶಕಿ. ‘ದಿ ಆರ್ಫನೇಜ್ ಫಾರ್ ವುಡ್ಸ್’, ‘ಬೇರ್ಫೀಟ್ ಆ್ಯಂಡ್ ಪ್ರೆಗ್ನೆಂಟ್’, ‘ವೆನ್ ಮೀರಾ ವೆಂಟ್ ಫೋರ್ತ್ ಆ್ಯಂಡ್ ಮಲ್ಟಿಪ್ಲೈಡ್’ ಸೇರಿದಂತೆ ಹಲವು ಸಣ್ಣ ಕಥೆ ಮತ್ತು ಕಾದಂಬರಿಗಳನ್ನು ಇವರು ರಚಿಸಿದ್ದಾರೆ.</p>.<p class="Subhead">ಯಾರು ಭಾಗವಹಿಸಲಿದ್ದಾರೆ?: ಹಿರಿಯ ಸಾಹಿತಿ ಚಂದ್ರಶೇಖರ ಕಂಬಾರ, ಕಥೆಗಾರ ಎಸ್.ದಿವಾಕರ್, ಕವಿಗಳಾದ ಪ್ರತಿಭಾ ನಂದಕುಮಾರ್, ಡಿ.ಸಿ.ರಾಜಪ್ಪ, ಎಂ.ಆರ್.ಕಮಲಾ, ನಂದಿತಾ ಬೋಸ್, ನೀಲಿಂ ಕುಮಾರ್, ರಾಮಚಂದ್ರ ಗುಹಾ, ಅಮೃತಾ ಡೋಂಗ್ರೆ, ಸೌರವ್ ರಾಯ್, ಅನಾಮಿಕಾ, ಅನೀಶ್ ವಿದ್ಯಾಶಂಕರ್, ಉತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ.</p>.<p>‘ಈ ಉತ್ಸವದಲ್ಲಿ ಕವಿತೆ, ಸಂವಾದ, ಕಾರ್ಯಾಗಾರಗಳು ನಡೆಯಲಿವೆ. ಉತ್ಸವದ ಎರಡನೇ ದಿನ ಮಕ್ಕಳಿಗಾಗಿ ನಾನಾ ರೀತಿಯ ಕಾರ್ಯಗಾರಗಳನ್ನು ಹಮ್ಮಿಕೊಂಡಿದ್ದೇವೆ. ವಿವಿಧ ರೀತಿಯ ಕವಿತೆಗಳ ರಚನೆ ಕುರಿತು ಆ ಕ್ಷೇತ್ರದ ಸಾಧಕರು ಮಾತನಾಡುತ್ತಾರೆ. ಕಲಾ ಪ್ರದರ್ಶನದ ಭಾಗವಾಗಿ ಕಲಾವಿದ ಆನಂದ್ ಪರಿಮಾಳ್ ಅವರು ತ್ಯಾಜ್ಯ ವಸ್ತುಗಳಿಗೆ ಕಲಾತ್ಮಕ ಸ್ಪರ್ಶ ನೀಡಲಿದ್ದಾರೆ’ ಎಂದು ವಿವರಿಸಿದರು.</p>.<p>ಹೆಚ್ಚಿನ ಮಾಹಿತಿಗೆ: <a href="http://www.bengalurupoetryfestival.org" target="_blank">http://www.bengalurupoetryfestival.org</a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>