ನ್ಯಾಯಮೂರ್ತಿಗಳು, ನ್ಯಾಯಾಂಗ ಇಲಾಖೆಗೆ ಸಂಬಂಧಿಸಿದ ಅಧಿಕಾರಿಗಳು ವಾಸವಿರುವ ಯಲಹಂಕದ ‘ನ್ಯಾಯಾಂಗ ಬಡಾವಣೆ’ ಮತ್ತು ಹೆಬ್ಬಾಳದ ‘ನ್ಯಾಯ ಗ್ರಾಮ’ಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿದ್ದ ಗುಂಡಿಗಳನ್ನು ಬಿಬಿಎಂಪಿ ಅಧಿಕಾರಿಗಳು ಆದ್ಯತೆಯ ಮೇಲೆ ಮುಚ್ಚಿಸಿದ್ದಾರೆ ಎಂದು ದೂರುತ್ತಾರೆ ಕೋಡಿಗೆಹಳ್ಳಿ, ಸಹಕಾರನಗರ, ಎಇಸಿಎಸ್ ಬಡಾವಣೆ, ಭದ್ರಪ್ಪ ಬಡಾವಣೆ, ಭೂಪಸಂದ್ರ ಬಡಾವಣೆ ನಿವಾಸಿಗಳು. ಜಿ.ಎಂ.ರಾಮಕೃಷ್ಣಪ್ಪ ಬಡಾವಣೆ, ಅಟ್ಟೂರು ಬಡಾವಣೆಗಳ ರಸ್ತೆ ಗುಂಡಿಗಳು ಕೂಡ ಹಾಗೆಯೇ ಇವೆ.