ಬೆಂಗಳೂರು: ಭಾರತ ಬಂದ್ ಪ್ರಯುಕ್ತ ಬೆಂಗಳೂರು ವಿಶ್ವವಿದ್ಯಾಲಯವು ಬಿ.ಪಿ.ಇಡಿ, ಎಲ್ಎಲ್ಬಿ ಮತ್ತು ಸ್ನಾತಕೋತ್ತರ ಪದವಿಗಳ ಪರೀಕ್ಷೆಗಳನ್ನು ಮುಂದೂಡಿದೆ.
ಫಲಿತಾಂಶ ಸ್ಥಗಿತ?: ಪದವಿ ಕೋರ್ಸ್ಗಳ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನಕ್ಕೆ ನಿಗದಿತ ಪ್ರಾಧ್ಯಾಪಕರನ್ನು ಕಳುಹಿಸದ ಕಾಲೇಜುಗಳ ಫಲಿತಾಂಶವನ್ನು ತಡೆ ಹಿಡಿಯಲು ಬೆಂಗಳೂರು ವಿಶ್ವವಿದ್ಯಾಲಯ ನಿರ್ಧರಿಸಿದೆ.
1, 3, 5 ಮತ್ತು 7ನೇ ಸೆಮಿಸ್ಟರ್ ಪರೀಕ್ಷೆಗಳ ಮೌಲ್ಯಮಾಪನ ಕಾರ್ಯಡಿ.31ರಿಂದ ನಡೆಯುತ್ತಿದೆ. ಕರ್ನಾಟಕ ವಿಶ್ವವಿದ್ಯಾಲಯ ಕಾಯ್ದೆ 2000 ಹಾಗೂ ಬೆಂಗಳೂರು ವಿಶ್ವವಿದ್ಯಾಲಯದ ಆರ್ಡಿನೆನ್ಸ್ ಪ್ರಕಾರ ಅರ್ಹ ಮೌಲ್ಯಮಾಪಕರನ್ನು ಆಯಾ ಕಾಲೇಜುಗಳು ಕಳುಹಿಸಿಕೊಡಬೇಕು.
ಪ್ರಾಧ್ಯಾಪಕರನ್ನು ಕಳುಹಿಸಿಕೊಡದಿದ್ದರೆ ಅಥವಾ ಪ್ರಾಧ್ಯಾಪಕರೇ ಗೈರು ಹಾಜರಾದರೇ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ. ಮಾಹಿತಿಯನ್ನು ಕಾಲೇಜು ಶಿಕ್ಷಣ ಇಲಾಖೆಗೆ ಕಳುಹಿಸಿಕೊಡಲಾಗುತ್ತದೆ ಎಂದು ವಿ.ವಿ. ಪ್ರಕಟಣೆಯಲ್ಲಿ ತಿಳಿಸಿದೆ.