<p><strong>ಬೆಂಗಳೂರು</strong>: ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿಯು 2022, 2023 ಹಾಗೂ 2024ನೇ ಸಾಲುಗಳ ಪುಸ್ತಕ ಬಹುಮಾನ ಪ್ರಕಟಿಸಿದ್ದು, ಒಂಬತ್ತು ಮಂದಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. </p>.<p>ಅಕಾಡೆಮಿ ಅಧ್ಯಕ್ಷ ಎ.ಆರ್. ಗೋವಿಂದಸ್ವಾಮಿ ನೇತೃತ್ವದ ಆಯ್ಕೆ ಸಮಿತಿ ಪುರಸ್ಕೃತರನ್ನು ಆಯ್ಕೆ ಮಾಡಿದೆ.</p>.<p>2022ನೇ ಸಾಲಿಗೆ ‘ಕಲಬುರಗಿ ಜಿಲ್ಲೆಯ ಬಂಜಾರ ಮಹಿಳೆಯರ ಸ್ಥಿತಿ ಗತಿ’ ಸಂಶೋಧನಾ ಕೃತಿಗೆ ಶ್ರೀದೇವಿ ಎಲ್., ‘ಜಾಗೋ ಬಂಜಾರ’ ಕವನಸಂಕಲನಕ್ಕೆ ರಾಮು ಎನ್.ರಾಠೋಡ್ ಮಸ್ಕಿ, ‘ಶ್ರೀ ಪ್ರೋಮಾಸಾಧ’ ಜೀವನ ಚರಿತ್ರೆಗೆ ಕಾಂತ ರಾಮಪ್ಪ ಜಾಧವ ಆಯ್ಕೆಯಾಗಿದ್ದಾರೆ.</p>.<p>2023ನೇ ಸಾಲಿಗೆ ‘ಮಹಾ ಚಲನೆ’ ಕೃತಿಗೆ ಡಿ. ರಾಮಾನಾಯಕ್, ‘ಮಠ’ ಕಾದಂಬರಿಗೆ ಇಂದುಮತಿ ಲಮಾಣಿ, ‘ಗೋರ್ಬೋಲಿಯ ವೊಜಾಳೊ’ ವಿಮರ್ಶಾ ಕೃತಿಗೆ ಉಮೇಶ್ ನಾಯ್ಕ್ ಎನ್. ಹುಳಿಯಾರ್ ಅವರನ್ನು ಆಯ್ಕೆ ಮಾಡಲಾಗಿದೆ.</p>.<p>2024ನೇ ಸಾಲಿಗೆ ‘ವಲಸೆ ಹಕ್ಕಿಯ ಹಾಡು’ ಆತ್ಮಕತೆಗೆ ಪ್ರೊ. ಕೃಷ್ಣನಾಯಕ್, ‘ಸೋಶಿಯೊ ಎಕನಾಮಿಕ್ಸ್ ಕಲ್ಚರಲ್ ಆ್ಯಂಡ್ ಪೊಲಿಟಿಕಲ್’ ಸಂಶೋಧನಾ ಕೃತಿಗೆ ಪರಮೇಶ್ ನಾಯಕ್, ‘ಘಣ್ ಊಪರ್’ ಕೃತಿಗೆ ಸಥೀಶಾ ಗಟ್ಟಿ ಮಂಡೆಲಾ ಭಾಜನರಾಗಿದ್ದಾರೆ.</p>.<p>ಬಹುಮಾನವು ತಲಾ ₹ 25 ಸಾವಿರ ನಗದು ಒಳಗೊಂಡಿದೆ. ಮಾರ್ಚ್ ತಿಂಗಳಲ್ಲಿ ಬಹುಮಾನ ವಿತರಣಾ ಸಮಾರಂಭವನ್ನು ಏರ್ಪಡಿಸಲಾಗುವುದು ಎಂದು ಎ.ಆರ್. ಗೋವಿಂದಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿಯು 2022, 2023 ಹಾಗೂ 2024ನೇ ಸಾಲುಗಳ ಪುಸ್ತಕ ಬಹುಮಾನ ಪ್ರಕಟಿಸಿದ್ದು, ಒಂಬತ್ತು ಮಂದಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. </p>.<p>ಅಕಾಡೆಮಿ ಅಧ್ಯಕ್ಷ ಎ.ಆರ್. ಗೋವಿಂದಸ್ವಾಮಿ ನೇತೃತ್ವದ ಆಯ್ಕೆ ಸಮಿತಿ ಪುರಸ್ಕೃತರನ್ನು ಆಯ್ಕೆ ಮಾಡಿದೆ.</p>.<p>2022ನೇ ಸಾಲಿಗೆ ‘ಕಲಬುರಗಿ ಜಿಲ್ಲೆಯ ಬಂಜಾರ ಮಹಿಳೆಯರ ಸ್ಥಿತಿ ಗತಿ’ ಸಂಶೋಧನಾ ಕೃತಿಗೆ ಶ್ರೀದೇವಿ ಎಲ್., ‘ಜಾಗೋ ಬಂಜಾರ’ ಕವನಸಂಕಲನಕ್ಕೆ ರಾಮು ಎನ್.ರಾಠೋಡ್ ಮಸ್ಕಿ, ‘ಶ್ರೀ ಪ್ರೋಮಾಸಾಧ’ ಜೀವನ ಚರಿತ್ರೆಗೆ ಕಾಂತ ರಾಮಪ್ಪ ಜಾಧವ ಆಯ್ಕೆಯಾಗಿದ್ದಾರೆ.</p>.<p>2023ನೇ ಸಾಲಿಗೆ ‘ಮಹಾ ಚಲನೆ’ ಕೃತಿಗೆ ಡಿ. ರಾಮಾನಾಯಕ್, ‘ಮಠ’ ಕಾದಂಬರಿಗೆ ಇಂದುಮತಿ ಲಮಾಣಿ, ‘ಗೋರ್ಬೋಲಿಯ ವೊಜಾಳೊ’ ವಿಮರ್ಶಾ ಕೃತಿಗೆ ಉಮೇಶ್ ನಾಯ್ಕ್ ಎನ್. ಹುಳಿಯಾರ್ ಅವರನ್ನು ಆಯ್ಕೆ ಮಾಡಲಾಗಿದೆ.</p>.<p>2024ನೇ ಸಾಲಿಗೆ ‘ವಲಸೆ ಹಕ್ಕಿಯ ಹಾಡು’ ಆತ್ಮಕತೆಗೆ ಪ್ರೊ. ಕೃಷ್ಣನಾಯಕ್, ‘ಸೋಶಿಯೊ ಎಕನಾಮಿಕ್ಸ್ ಕಲ್ಚರಲ್ ಆ್ಯಂಡ್ ಪೊಲಿಟಿಕಲ್’ ಸಂಶೋಧನಾ ಕೃತಿಗೆ ಪರಮೇಶ್ ನಾಯಕ್, ‘ಘಣ್ ಊಪರ್’ ಕೃತಿಗೆ ಸಥೀಶಾ ಗಟ್ಟಿ ಮಂಡೆಲಾ ಭಾಜನರಾಗಿದ್ದಾರೆ.</p>.<p>ಬಹುಮಾನವು ತಲಾ ₹ 25 ಸಾವಿರ ನಗದು ಒಳಗೊಂಡಿದೆ. ಮಾರ್ಚ್ ತಿಂಗಳಲ್ಲಿ ಬಹುಮಾನ ವಿತರಣಾ ಸಮಾರಂಭವನ್ನು ಏರ್ಪಡಿಸಲಾಗುವುದು ಎಂದು ಎ.ಆರ್. ಗೋವಿಂದಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>