ಬೆಂಗಳೂರು: ‘ಇತ್ತೀಚಿನ ದಿನಗಳಲ್ಲಿ ಜಾತಿಯ ಗತಿಶೀಲತೆ ಬದಲಾಗುತ್ತಿದೆ. ಮೇಲ್ಜಾತಿಗಳು ಉಪಜಾತಿಗಳನ್ನು ಮರೆತು ಒಂದಾಗುತ್ತಿದ್ದಾರೆ. ಆದರೆ, ಕೆಳವರ್ಗದ ಜಾತಿಗಳಲ್ಲಿ ಉಪಜಾತಿಗಳ ಒಡಕು ಹೆಚ್ಚಾಗುತ್ತಿದೆ. ಈ ವೈರುಧ್ಯ ಜಾತಿ ವಿನಾಶಕ್ಕಿಂತ, ಜಾತಿ ವಿಕಾಸಕ್ಕೆ ಸಾಕ್ಷಿಯಾಗುತ್ತಿದೆ’ ಎಂದು ಸಾಹಿತಿಬರಗೂರು ರಾಮಚಂದ್ರಪ್ಪ ತಿಳಿಸಿದರು.