<p><strong>ಬೆಂಗಳೂರು</strong>: ‘ಬೀದಿಬದಿ ವ್ಯಾಪಾರಿಗಳ ಕೈ ಭೂಮಿಯನ್ನೇ ನೋಡಬೇಕು, ಆಕಾಶ ನೋಡಬಾರದು. ಇದೇ ನಮ್ಮ ಆಶಯ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.</p>.<p>‘ಎಲ್ಲಿ ಆರ್ಥಿಕ ಸ್ವಾವಲಂಬನೆ ಇರುತ್ತದೆಯೋ ಅಲ್ಲಿ ಸ್ವಾಭಿಮಾನ ಇರುತ್ತದೆ. ಮೀಟರ್ ಬಡ್ಡಿ ತೆಗೆದುಕೊಳ್ಳದೆ ನೇರವಾಗಿ ಸರ್ಕಾರ ನೆರವು ನೀಡಿ, ಅವರು ಆರ್ಥಿಕ<br />ಸ್ವಾವಲಂಬಿಗಳಾಗುವಂತೆ ಮಾಡಲು ಪ್ರಧಾನಮಂತ್ರಿ ನರೇಂದ್ರ ಮೋದಿ ಸ್ವನಿಧಿ ಯೋಜನೆ ಜಾರಿಗೆ ತಂದಿದ್ದಾರೆ’ ಎಂದರು.</p>.<p>ಬೀದಿಬದಿ ವ್ಯಾಪಾರಿಗಳಿಗೆ ಬಿಬಿಎಂಪಿ ಆಯೋಜಿಸಿದ್ದ ಸ್ವ–ನಿಧಿ ಮಹೋತ್ಸವ ಸಮಾರೋಪದಲ್ಲಿ ಸೋಮವಾರ ಮಾತನಾಡಿದ ಅವರು, ‘ಯುವಕರಿಗಾಗಿ ಮುದ್ರಾ, ಸ್ತ್ರೀಶಕ್ತಿ ಸಂಘಗಳಿಗೆ ನೇರವಾಗಿ ಹಣಕಾಸು ನೆರವನ್ನು ಕೇಂದ್ರ ಸರ್ಕಾರ ನೀಡುತ್ತಿದೆ. ಅದೇ ರೀತಿ ಬೀದಿಬದಿ ವ್ಯಾಪಾರಿಗಳಿಗೆ ನೆರವು ನೀಡಲು ಸ್ವನಿಧಿ ಜಾರಿಗೆ ತರಲಾಗಿದೆ’ ಎಂದರು.</p>.<p>‘ಬೀದಿ ವ್ಯಾಪಾರಿಗಳಿಗೆ ಮೂರು ಹಂತದಲ್ಲಿ ಹಣ ನೀಡಲಾಗುತ್ತದೆ. ಅವರಲ್ಲಿ ಸ್ವಾವಲಂಬನೆ ತರಲು ಈ ರೀತಿ ಹಂತವಾಗಿ ಹಣ ನೀಡಲಾಗುತ್ತದೆ. ಸಬ್ಸಿಡಿ ಕೂಡ ಸಿಗುತ್ತದೆ. ಸಾಹುಕಾರರು ಬಂಡವಾಳದಿಂದ ಬ್ಯಾಂಕ್ನಿಂದ ಸಾಲ ಪಡೆದು ಉದ್ದಿಮೆ ಸ್ಥಾಪಿಸುತ್ತಾರೆ. ಆದರೆ ನೀವು ಬಂಡವಾಳ ಇಲ್ಲದಿದ್ದರೂ ಹಗಲು–ರಾತ್ರಿ ದುಡಿದು ಆರ್ಥಿಕವಾಗಿ ಸಬಲರಾಗುತ್ತೀರಿ. ತೆರಿಗೆ ನೀಡುತ್ತೀರಿ. ನಿಮ್ಮಿಂದ ದೇಶ ಆರ್ಥಿಕವಾಗಿ ವೃದ್ಧಿಯಾಗುತ್ತಿದೆ‘ ಎಂದು ಹೊಗಳಿದರು.</p>.<p>‘ರಸ್ತೆ ಅಭಿವೃದ್ಧಿಗೆ ಹೆಚ್ಚು ಹಣ ನೀಡಿದರೆ, ಕೆಳ ಹಂತದಲ್ಲಿ ಡಾಂಬರು ಹಾಕುವವರು ಇರುತ್ತಾರಲ್ಲ ಅವರಿಗೆ ಅನುಕೂಲವಾಗುತ್ತದೆ’ ಎಂದರು.</p>.<p>‘1.86 ಲಕ್ಷ ಜನರಿಗೆ ಸ್ವ–ನಿಧಿ ಯೋಜನೆ ಜಾರಿಗೆಯಾಗಬೇಕು. 70 ಸಾವಿರ ಜನರಿಗೆ ನೀಡಿದ್ದೇವೆ. ಹೀಗಾಗಿ ಎಲ್ಲ ಕಡೆಗೆ ಹೋಗಿ ಅಧಿಕಾರಿಗಳು ಟೆಂಟ್ ಹಾಕಿಕೊಂಡು ಪ್ರಚಾರ<br />ಮಾಡಿ, ಸಾಲ ಕೊಡಿ’ ಎಂದು ಸೂಚಿಸಿದರು.</p>.<p>ಬೀದಿ ಬದಿ ವ್ಯಾಪಾರಿಗಳಿಗೆ ಪಿ.ಎಂ ಸ್ವ-ನಿಧಿ ಯೋಜನೆಯ ಕುರಿತು ಪ್ರಧಾನಿಯೇ ಸಂದೇಶ ಕಳುಹಿಸಿದ್ದರು. ಯೋಜನೆ ಪರಿಚಯಿಸುವ 40 ಬೋರ್ಡ್ಗಳಿದ್ದವು. ಅವುಗಳಲ್ಲಿ ಸಾಂಕೇತಿಕವಾಗಿ 9 ಅನ್ನು ಬೀದಿ ಬದಿ ವ್ಯಾಪಾರಿಗಳಿಗೆ ವಿತರಿಸಲಾಯಿತು.</p>.<p class="Subhead"><strong>ಸಾಲದ ಮೇಳ:</strong> ಸ್ವ-ನಿಧಿ ಮಹೋತ್ಸವದಲ್ಲಿ ಆಯೋಜಿಸಲಾಗಿದ್ದ ಸಾಲ ಮೇಳದಲ್ಲಿ 1,164 ಬೀದಿ ಬದಿ ವ್ಯಾಪಾರಿಗಳಿಂದ ಅರ್ಜಿ ಸ್ವೀಕರಿಸ ಲಾಗಿದ್ದು, ಮೊದಲನೇ ಕಂತಿನಲ್ಲಿ ತಲಾ ₹10 ಸಾವಿರ ಮಂಜೂರು ಮಾಡಲಾಗಿದೆ. ಸಂಸದ ಪಿ.ಸಿ.ಮೋಹನ್, ಆಡಳಿತಾಧಿಕಾರಿ ರಾಕೇಶ್ ಸಿಂಗ್, ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ‘ಬೀದಿಬದಿ ವ್ಯಾಪಾರಿಗಳ ಕೈ ಭೂಮಿಯನ್ನೇ ನೋಡಬೇಕು, ಆಕಾಶ ನೋಡಬಾರದು. ಇದೇ ನಮ್ಮ ಆಶಯ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.</p>.<p>‘ಎಲ್ಲಿ ಆರ್ಥಿಕ ಸ್ವಾವಲಂಬನೆ ಇರುತ್ತದೆಯೋ ಅಲ್ಲಿ ಸ್ವಾಭಿಮಾನ ಇರುತ್ತದೆ. ಮೀಟರ್ ಬಡ್ಡಿ ತೆಗೆದುಕೊಳ್ಳದೆ ನೇರವಾಗಿ ಸರ್ಕಾರ ನೆರವು ನೀಡಿ, ಅವರು ಆರ್ಥಿಕ<br />ಸ್ವಾವಲಂಬಿಗಳಾಗುವಂತೆ ಮಾಡಲು ಪ್ರಧಾನಮಂತ್ರಿ ನರೇಂದ್ರ ಮೋದಿ ಸ್ವನಿಧಿ ಯೋಜನೆ ಜಾರಿಗೆ ತಂದಿದ್ದಾರೆ’ ಎಂದರು.</p>.<p>ಬೀದಿಬದಿ ವ್ಯಾಪಾರಿಗಳಿಗೆ ಬಿಬಿಎಂಪಿ ಆಯೋಜಿಸಿದ್ದ ಸ್ವ–ನಿಧಿ ಮಹೋತ್ಸವ ಸಮಾರೋಪದಲ್ಲಿ ಸೋಮವಾರ ಮಾತನಾಡಿದ ಅವರು, ‘ಯುವಕರಿಗಾಗಿ ಮುದ್ರಾ, ಸ್ತ್ರೀಶಕ್ತಿ ಸಂಘಗಳಿಗೆ ನೇರವಾಗಿ ಹಣಕಾಸು ನೆರವನ್ನು ಕೇಂದ್ರ ಸರ್ಕಾರ ನೀಡುತ್ತಿದೆ. ಅದೇ ರೀತಿ ಬೀದಿಬದಿ ವ್ಯಾಪಾರಿಗಳಿಗೆ ನೆರವು ನೀಡಲು ಸ್ವನಿಧಿ ಜಾರಿಗೆ ತರಲಾಗಿದೆ’ ಎಂದರು.</p>.<p>‘ಬೀದಿ ವ್ಯಾಪಾರಿಗಳಿಗೆ ಮೂರು ಹಂತದಲ್ಲಿ ಹಣ ನೀಡಲಾಗುತ್ತದೆ. ಅವರಲ್ಲಿ ಸ್ವಾವಲಂಬನೆ ತರಲು ಈ ರೀತಿ ಹಂತವಾಗಿ ಹಣ ನೀಡಲಾಗುತ್ತದೆ. ಸಬ್ಸಿಡಿ ಕೂಡ ಸಿಗುತ್ತದೆ. ಸಾಹುಕಾರರು ಬಂಡವಾಳದಿಂದ ಬ್ಯಾಂಕ್ನಿಂದ ಸಾಲ ಪಡೆದು ಉದ್ದಿಮೆ ಸ್ಥಾಪಿಸುತ್ತಾರೆ. ಆದರೆ ನೀವು ಬಂಡವಾಳ ಇಲ್ಲದಿದ್ದರೂ ಹಗಲು–ರಾತ್ರಿ ದುಡಿದು ಆರ್ಥಿಕವಾಗಿ ಸಬಲರಾಗುತ್ತೀರಿ. ತೆರಿಗೆ ನೀಡುತ್ತೀರಿ. ನಿಮ್ಮಿಂದ ದೇಶ ಆರ್ಥಿಕವಾಗಿ ವೃದ್ಧಿಯಾಗುತ್ತಿದೆ‘ ಎಂದು ಹೊಗಳಿದರು.</p>.<p>‘ರಸ್ತೆ ಅಭಿವೃದ್ಧಿಗೆ ಹೆಚ್ಚು ಹಣ ನೀಡಿದರೆ, ಕೆಳ ಹಂತದಲ್ಲಿ ಡಾಂಬರು ಹಾಕುವವರು ಇರುತ್ತಾರಲ್ಲ ಅವರಿಗೆ ಅನುಕೂಲವಾಗುತ್ತದೆ’ ಎಂದರು.</p>.<p>‘1.86 ಲಕ್ಷ ಜನರಿಗೆ ಸ್ವ–ನಿಧಿ ಯೋಜನೆ ಜಾರಿಗೆಯಾಗಬೇಕು. 70 ಸಾವಿರ ಜನರಿಗೆ ನೀಡಿದ್ದೇವೆ. ಹೀಗಾಗಿ ಎಲ್ಲ ಕಡೆಗೆ ಹೋಗಿ ಅಧಿಕಾರಿಗಳು ಟೆಂಟ್ ಹಾಕಿಕೊಂಡು ಪ್ರಚಾರ<br />ಮಾಡಿ, ಸಾಲ ಕೊಡಿ’ ಎಂದು ಸೂಚಿಸಿದರು.</p>.<p>ಬೀದಿ ಬದಿ ವ್ಯಾಪಾರಿಗಳಿಗೆ ಪಿ.ಎಂ ಸ್ವ-ನಿಧಿ ಯೋಜನೆಯ ಕುರಿತು ಪ್ರಧಾನಿಯೇ ಸಂದೇಶ ಕಳುಹಿಸಿದ್ದರು. ಯೋಜನೆ ಪರಿಚಯಿಸುವ 40 ಬೋರ್ಡ್ಗಳಿದ್ದವು. ಅವುಗಳಲ್ಲಿ ಸಾಂಕೇತಿಕವಾಗಿ 9 ಅನ್ನು ಬೀದಿ ಬದಿ ವ್ಯಾಪಾರಿಗಳಿಗೆ ವಿತರಿಸಲಾಯಿತು.</p>.<p class="Subhead"><strong>ಸಾಲದ ಮೇಳ:</strong> ಸ್ವ-ನಿಧಿ ಮಹೋತ್ಸವದಲ್ಲಿ ಆಯೋಜಿಸಲಾಗಿದ್ದ ಸಾಲ ಮೇಳದಲ್ಲಿ 1,164 ಬೀದಿ ಬದಿ ವ್ಯಾಪಾರಿಗಳಿಂದ ಅರ್ಜಿ ಸ್ವೀಕರಿಸ ಲಾಗಿದ್ದು, ಮೊದಲನೇ ಕಂತಿನಲ್ಲಿ ತಲಾ ₹10 ಸಾವಿರ ಮಂಜೂರು ಮಾಡಲಾಗಿದೆ. ಸಂಸದ ಪಿ.ಸಿ.ಮೋಹನ್, ಆಡಳಿತಾಧಿಕಾರಿ ರಾಕೇಶ್ ಸಿಂಗ್, ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>