‘ಎಲ್ಲಾ ಬೇಡಿಕೆಗಳು ಈಡೇರಿವೆ’
‘ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಮಧ್ಯ ಪ್ರವೇಶದಿಂದ ಬಿಬಿಎಂಪಿ ಮುಖ್ಯ ಆಯುಕ್ತರು ನಮ್ಮ ಎಲ್ಲಾ ಬೇಡಿಕೆಗಳನ್ನು ಈಡೇರಿಸಿರುತ್ತಾರೆ. ಆದ್ದರಿಂದ ಜುಲೈ 8ರಿಂದ ಕರೆಯಲಾಗಿದ್ದ ಮುಷ್ಕರವನ್ನು ಹಿಂಪಡೆಯಲಾಗಿದೆ’ ಎಂದು ಬಿಬಿಎಂಪಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಜಿ.ಎಂ.ನಂದಕುಮಾರ್ ತಿಳಿಸಿದರು. ‘ಬಿಬಿಎಂಪಿ ಅನುದಾನದಲ್ಲಿ ಪೂರ್ಣಗೊಳಿಸಲಾಗಿರುವ ಕಾಮಗಾರಿಗಳಿಗೆ 2022ರ ಡಿಸೆಂಬರ್ವರೆಗೆ ಬಿಲ್ ಪಾವತಿಸಲು ಸಮ್ಮತಿಸಲಾಗಿದೆ. ಸೋಮವಾರದಿಂದ ಈ ಬಾಬ್ತಿನ ಹಣ ಬಿಡುಗಡೆಯಾಗಲಿದೆ. ಬಿಲ್ ಪಾವತಿ ಮಾಡಲಾಗಿರುವ ಮೊತ್ತದಲ್ಲಿ ಶೇ 25ರಷ್ಟು ತಡೆಹಿಡಿದಿರುವುದನ್ನು ಬಿಡುಗಡೆ ಮಾಡುವ ವಿಷಯ ಸರ್ಕಾರದ ಅನುಮೋದನೆಯಲ್ಲಿದೆ. ಅಲ್ಲಿಂದ ಸಮ್ಮತಿ ಪಡೆದ ಮೇಲೆ ಅದನ್ನೂ ಪಾವತಿಸುವ ಭರವಸೆ ದೊರೆತಿದೆ’ ಎಂದರು.