ಕೆಂಪೇಗೌಡರು ಬೆಂಗಳೂರಿನ ಗಡಿಗಳ ಗುರುತಿಗಾಗಿ ನಿರ್ಮಿಸಿದ್ದ ಗೋಪುರಗಳ ಮಾದರಿಯಲ್ಲೇ 2006ರಲ್ಲಿ ಇದನ್ನು ನಿರ್ಮಿಸಲಾಗಿತ್ತು. ಇದರ ತಳಭಾಗದಲ್ಲಿ ಕಾರಂಜಿ ಕೊಳವನ್ನೂ ರಚಿಸಲಾಗಿತ್ತು. ಇತ್ತೀಚಿನ ವರ್ಷಗಳಲ್ಲಿ ಈ ಗೋಪುರ ಹಾಗೂ ಕಾರಂಜಿ ಕೊಳದ ನಿರ್ವಹಣೆಯನ್ನೇ ಪಾಲಿಕೆ ಮರೆತುಬಿಟ್ಟಿದೆ. ಕೊಳದ ನೀರು ಪಾಚಿ ಕಟ್ಟಿದ್ದರೆ, ಗೋಪುರದ ಕೆಲವು ಕಲ್ಲುಗಳು ಉದುರಿ ಬಿದ್ದಿವೆ.