ವಿಚಾರಣೆ ವೇಳೆ ಬಿಬಿಎಂಪಿ ಪರ ವಕೀಲ ಕೆ.ಎನ್.ಪುಟ್ಟೇಗೌಡ ಅವರು, ‘35–40 ಲಕ್ಷ ವಾಹನ ಸಂಚಾರದ ನಿರೀಕ್ಷೆ ಈಗ ದುಪ್ಪಟ್ಟಾಗಿದೆ. ಬೆಳಗ್ಗೆ ಭರ್ತಿ ಮಾಡಿದ ಗುಂಡಿಗಳು ರಾತ್ರಿ ವೇಳೆಗೆ ಮಳೆಯಿಂದ ಹಾಳಾಗುತ್ತವೆ’ ಎಂದು ವಿವರಿಸಿದರಲ್ಲದೆ, ರಸ್ತೆ ಗುಂಡಿ ಭರ್ತಿಗೆ ಕೈಗೊಂಡಿರುವ ಕ್ರಮಗಳ ವಿವರವಾದ ವರದಿಯನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು.