ವಲಸೆ ಕಾರ್ಮಿಕರಿಗೆ ಆಶ್ರಯ: ದಾಸರಹಳ್ಳಿ ವಲಯದ ಬಾಗಲಕುಂಟೆ ವಾರ್ಡ್ನಲ್ಲಿ 3 ಟ್ರ್ಯಾಕ್ಟರ್ಗಳ ಮೂಲಕ ವಲಸೆ ಹೊರಟಿದ್ದಸುಮಾರು 50 ವಲಸೆ ಕಾರ್ಮಿಕರನ್ನು ಪಾಲಿಕೆಯ ವಿಶೇಷ ಆಯುಕ್ತ (ಹಣಕಾಸು) ಲೋಕೇಶ್, ಜಂಟಿ ಆಯುಕ್ತ ನರಸಿಂಹಮೂರ್ತಿ ನೇತೃತ್ವದ ಅಧಿಕಾರಿಗಳ ತಂಡವು ತಡೆದಿದೆ. ಕಾರ್ಮಿಕರು ಉಳಿದುಕೊಳ್ಳುವುದಕ್ಕೆ ಇದೇ ವಾರ್ಡ್ನಲ್ಲಿರುವ ಕಾರ್ಮಿಕ ಇಲಾಖೆಯ ಸಮುದಾಯ ಭವನದಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. ಅವರಿಗೆ ಇಂದಿರಾ ಕ್ಯಾಂಟೀನ್ನಿಂದ ಉಚಿತ ಊಟವನ್ನೂ ಒದಗಿಸಲಾಗುತ್ತಿದೆ.