ಪಾಲಿಕೆಯ ಅರಣ್ಯ ವಿಭಾಗ, ತೋಟಗಾರಿಕಾ ಹಾಗೂ ಕೆರೆಗಳ ವಿಭಾಗ ಸೇರಿ ನಗರದಲ್ಲಿರುವ ಉದ್ಯಾನಗಳು, ಕೆರೆಗಳ ಸುತ್ತಮುತ್ತಲಿನ ಖಾಲಿ ಸ್ಥಳದಲ್ಲಿ 75,000 ಸಸಿಗಳನ್ನು ನೆಡಲಿವೆ. ನಾಗರಿಕರು, ಸಂಘ-ಸಂಸ್ಥೆಗಳ ಸಹಯೋಗದಲ್ಲಿಕೈಗೊಂಡಿರುವ ಈ ಅಭಿಯಾನಕ್ಕೆ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಶನಿವಾರ ಚಾಲನೆ ನೀಡಿದರು.