ಎರಡು ವರ್ಷಗಳಿಂದ ಬಿಡಿಎಯಲ್ಲಿ ಕೆಲಸ ಮಾಡುತ್ತಿದ್ದ ಮರಿಯಪ್ಪ, ಮಲ್ಲೇಶ್ವರದ ವೆಂಕಟಸ್ವಾಮಿ, ಕಾಮಾಕ್ಷಿಪಾಳ್ಯದ ಸ್ವಾಮಿ, ಟ್ಯಾನರಿ ರಸ್ತೆಯ ಇನಾಯತ್ವುಲ್ಲಾ ಷರೀಫ್ ಹಾಗೂ ಸಾದಿಕ್ ಬಂಧಿತರು. ಇವರ ವಿರುದ್ಧ ವಿ.ವಿ.ಪುರದ ಪ್ರಮೀಳಾ ಚೌಡಯ್ಯ (70) ದೂರು ಕೊಟ್ಟಿದ್ದರು. ಆರೋಪಿಗಳಿಂದ ನಿವೇಶನಕ್ಕೆ ಸಂಬಂಧಿಸಿದ ದಾಖಲೆಗಳನ್ನು ಜಪ್ತಿ ಮಾಡಲಾಗಿದೆ. ಇನ್ನೂ ನಾಲ್ವರು ತಲೆಮರೆಸಿಕೊಂಡಿದ್ದು, ಶೋಧ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.