<p><strong>ಬೆಂಗಳೂರು:</strong> ಕ್ರಾಂತಿವೀರ ಸಂಗೊಳ್ಳಿರಾಯಣ್ಣ (ಕೆಎಸ್ಆರ್) ನಿಲ್ದಾಣಕ್ಕೆ ಬರುತ್ತಿದ್ದ ಬೆಂಗಳೂರು–ಬಂಗಾರಪೇಟೆ ಮೆಮು ರೈಲು ಇತ್ತೀಚೆಗೆ ವೈಟ್ಫೀಲ್ಡ್ನಿಂದಲೇ ಹಿಂತಿರುಗುತ್ತಿರುವುದರಿಂದ ಬೆಂಗಳೂರಿನ ಪ್ರಯಾಣಿಕರಿಗೆ ಪ್ರಯೋಜನವಿಲ್ಲದಂತಾಗಿದೆ.</p>.<p>2017ರ ಜನವರಿಯಲ್ಲಿ ಬೆಂಗಳೂರು–ವೈಟ್ಫೀಲ್ಡ್ ನಡುವೆ ಮೆಮು ರೈಲು ಸಂಚಾರ ಆರಂಭಿಸಲಾಗಿತ್ತು. ಅದೇ ರೈಲನ್ನು 2019ರ ನವೆಂಬರ್ ನಂತರ ಬಂಗಾರಪೇಟೆಗೆ ವಿಸ್ತರಿಸಲಾಗಿತ್ತು. ಕೋವಿಡ್ ಕಾರಣದಿಂದ 2020ರಲ್ಲಿ ಸ್ಥಗಿತಗೊಂಡಿತ್ತು. ಸುಮಾರು ಎಂಟು ತಿಂಗಳ ಬಳಿಕ 2021 ಫೆ.1ಕ್ಕೆ ಮತ್ತೆ ಆರಂಭಿಸಲಾಗಿತ್ತು.</p>.<p>ಈ ರೈಲು ಬೆಂಗಳೂರು ಕಂಟೋನ್ಮೆಂಟ್, ಬೈಯಪ್ಪನಹಳ್ಳಿ, ಕೃಷ್ಣರಾಜಪುರ, ವೈಟ್ಫೀಲ್ಡ್, ದೇವನಗೊಂದಿ, ಮಾಲೂರು ಮತ್ತು ಟೇಕಲ್ ನಿಲ್ದಾಣಗಳಲ್ಲಿ ನಿಲ್ಲುತ್ತಿತ್ತು. ಕಂಟೋನ್ಮೆಂಟ್ ರೈಲು ನಿಲ್ದಾಣದ ನವೀಕರಣ ಮತ್ತು ಉನ್ನತೀಕರಣ ಕಾಮಗಾರಿ ಹಾಗೂ ಈ ಮಾರ್ಗದಲ್ಲಿ ನಾಲ್ಕು ಪಥದ ಹಳಿ ನಿರ್ಮಿಸುವ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಬೆಂಗಳೂರು–ಬಂಗಾರಪೇಟೆ ರೈಲು ವೈಟ್ಫೀಲ್ಡ್–ಬಂಗಾರಪೇಟೆ ನಡುವೆ ಮಾತ್ರ ಸಂಚರಿಸಲು ರೈಲ್ವೆ ಇಲಾಖೆ ಅಧಿಸೂಚನೆ ಹೊರಡಿಸಿತ್ತು. ಒಂದೂವರೆ ವರ್ಷದಿಂದ ಈ ರೈಲು ಬೆಂಗಳೂರಿಗೆ ಪ್ರವೇಶಿಸುತ್ತಿಲ್ಲ.</p>.<p>‘ರೈಲ್ವೆಯವರು ಯಾವ ಕಾರಣಕ್ಕೆ ಈ ರೈಲನ್ನು ವೈಟ್ಫೀಲ್ಡ್ಗೆ ಸೀಮಿತಗೊಳಿಸಿದರು ಎಂಬುದು ಗೊತ್ತಾಗುತ್ತಿಲ್ಲ. ಕಾಮಗಾರಿ ಕಾರಣಕ್ಕೆ ರೈಲನ್ನು ನಗರಕ್ಕೆ ಬಾರದಂತೆ ತಡೆದಿರುವುದು ನಿಜವಾಗಿದ್ದರೆ ಉಳಿದ ಎಲ್ಲ ರೈಲುಗಳು ಸಂಚರಿಸುತ್ತಿವೆ. ಕಾಮಗಾರಿ ಇದೊಂದೇ ರೈಲಿಗೆ ಅಡ್ಡಿಯಾಗುತ್ತಿದೆಯೇ’ ಎಂದು ಪ್ರಯಾಣಿಕರ ಕರಿಬಸಪ್ಪ ಪ್ರಶ್ನಿಸಿದರು.</p>.<p>ಇದೇ ಮಾರ್ಗದಲ್ಲಿ ಬೆಂಗಳೂರಿನಿಂದ ಚೆನ್ನೈಗೆ ಬೃಂದಾವನ ಎಕ್ಸ್ಪ್ರೆಸ್ ರೈಲು ಸಂಚರಿಸುತ್ತಿದೆ. ಮಧ್ಯಾಹ್ನ 3.15ಕ್ಕೆ ಕೆಎಸ್ಆರ್ನಿಂದ ಹೊರಡುವ ಈ ರೈಲು ಕೆ.ಆರ್. ಪುರದಲ್ಲಿ ನಿಲುಗಡೆ ನೀಡಿ ಆನಂತರ ಬಂಗಾರಪೇಟೆಯಲ್ಲೇ ನಿಲ್ಲುತ್ತಿದೆ. ಮಧ್ಯೆ ಎಲ್ಲಿಯೂ ನಿಲುಗಡೆ ಇಲ್ಲದ ಕಾರಣ ಬೈಯಪ್ಪನಹಳ್ಳಿ, ವೈಟ್ಫೀಲ್ಡ್, ದೇವನಗೊಂದಿ, ಮಾಲೂರಿನಲ್ಲಿ ಇಳಿಯುವ, ಹತ್ತುವ ಪ್ರಯಾಣಿಕರಿಗೆ ಪ್ರಯೋಜನವಿಲ್ಲದಂತಾಗಿದೆ. ಈ ರೈಲನ್ನು ಬೆಂಗಳೂರು ಕೆಎಸ್ಆರ್ನಿಂದಲೇ ಓಡಿಸಬೇಕು ಎಂದು ರೈಲ್ವೆ ಹೋರಾಟಗಾರ ಕೆ.ಎನ್. ಕೃಷ್ಣಪ್ರಸಾದ್ ಒತ್ತಾಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಕ್ರಾಂತಿವೀರ ಸಂಗೊಳ್ಳಿರಾಯಣ್ಣ (ಕೆಎಸ್ಆರ್) ನಿಲ್ದಾಣಕ್ಕೆ ಬರುತ್ತಿದ್ದ ಬೆಂಗಳೂರು–ಬಂಗಾರಪೇಟೆ ಮೆಮು ರೈಲು ಇತ್ತೀಚೆಗೆ ವೈಟ್ಫೀಲ್ಡ್ನಿಂದಲೇ ಹಿಂತಿರುಗುತ್ತಿರುವುದರಿಂದ ಬೆಂಗಳೂರಿನ ಪ್ರಯಾಣಿಕರಿಗೆ ಪ್ರಯೋಜನವಿಲ್ಲದಂತಾಗಿದೆ.</p>.<p>2017ರ ಜನವರಿಯಲ್ಲಿ ಬೆಂಗಳೂರು–ವೈಟ್ಫೀಲ್ಡ್ ನಡುವೆ ಮೆಮು ರೈಲು ಸಂಚಾರ ಆರಂಭಿಸಲಾಗಿತ್ತು. ಅದೇ ರೈಲನ್ನು 2019ರ ನವೆಂಬರ್ ನಂತರ ಬಂಗಾರಪೇಟೆಗೆ ವಿಸ್ತರಿಸಲಾಗಿತ್ತು. ಕೋವಿಡ್ ಕಾರಣದಿಂದ 2020ರಲ್ಲಿ ಸ್ಥಗಿತಗೊಂಡಿತ್ತು. ಸುಮಾರು ಎಂಟು ತಿಂಗಳ ಬಳಿಕ 2021 ಫೆ.1ಕ್ಕೆ ಮತ್ತೆ ಆರಂಭಿಸಲಾಗಿತ್ತು.</p>.<p>ಈ ರೈಲು ಬೆಂಗಳೂರು ಕಂಟೋನ್ಮೆಂಟ್, ಬೈಯಪ್ಪನಹಳ್ಳಿ, ಕೃಷ್ಣರಾಜಪುರ, ವೈಟ್ಫೀಲ್ಡ್, ದೇವನಗೊಂದಿ, ಮಾಲೂರು ಮತ್ತು ಟೇಕಲ್ ನಿಲ್ದಾಣಗಳಲ್ಲಿ ನಿಲ್ಲುತ್ತಿತ್ತು. ಕಂಟೋನ್ಮೆಂಟ್ ರೈಲು ನಿಲ್ದಾಣದ ನವೀಕರಣ ಮತ್ತು ಉನ್ನತೀಕರಣ ಕಾಮಗಾರಿ ಹಾಗೂ ಈ ಮಾರ್ಗದಲ್ಲಿ ನಾಲ್ಕು ಪಥದ ಹಳಿ ನಿರ್ಮಿಸುವ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಬೆಂಗಳೂರು–ಬಂಗಾರಪೇಟೆ ರೈಲು ವೈಟ್ಫೀಲ್ಡ್–ಬಂಗಾರಪೇಟೆ ನಡುವೆ ಮಾತ್ರ ಸಂಚರಿಸಲು ರೈಲ್ವೆ ಇಲಾಖೆ ಅಧಿಸೂಚನೆ ಹೊರಡಿಸಿತ್ತು. ಒಂದೂವರೆ ವರ್ಷದಿಂದ ಈ ರೈಲು ಬೆಂಗಳೂರಿಗೆ ಪ್ರವೇಶಿಸುತ್ತಿಲ್ಲ.</p>.<p>‘ರೈಲ್ವೆಯವರು ಯಾವ ಕಾರಣಕ್ಕೆ ಈ ರೈಲನ್ನು ವೈಟ್ಫೀಲ್ಡ್ಗೆ ಸೀಮಿತಗೊಳಿಸಿದರು ಎಂಬುದು ಗೊತ್ತಾಗುತ್ತಿಲ್ಲ. ಕಾಮಗಾರಿ ಕಾರಣಕ್ಕೆ ರೈಲನ್ನು ನಗರಕ್ಕೆ ಬಾರದಂತೆ ತಡೆದಿರುವುದು ನಿಜವಾಗಿದ್ದರೆ ಉಳಿದ ಎಲ್ಲ ರೈಲುಗಳು ಸಂಚರಿಸುತ್ತಿವೆ. ಕಾಮಗಾರಿ ಇದೊಂದೇ ರೈಲಿಗೆ ಅಡ್ಡಿಯಾಗುತ್ತಿದೆಯೇ’ ಎಂದು ಪ್ರಯಾಣಿಕರ ಕರಿಬಸಪ್ಪ ಪ್ರಶ್ನಿಸಿದರು.</p>.<p>ಇದೇ ಮಾರ್ಗದಲ್ಲಿ ಬೆಂಗಳೂರಿನಿಂದ ಚೆನ್ನೈಗೆ ಬೃಂದಾವನ ಎಕ್ಸ್ಪ್ರೆಸ್ ರೈಲು ಸಂಚರಿಸುತ್ತಿದೆ. ಮಧ್ಯಾಹ್ನ 3.15ಕ್ಕೆ ಕೆಎಸ್ಆರ್ನಿಂದ ಹೊರಡುವ ಈ ರೈಲು ಕೆ.ಆರ್. ಪುರದಲ್ಲಿ ನಿಲುಗಡೆ ನೀಡಿ ಆನಂತರ ಬಂಗಾರಪೇಟೆಯಲ್ಲೇ ನಿಲ್ಲುತ್ತಿದೆ. ಮಧ್ಯೆ ಎಲ್ಲಿಯೂ ನಿಲುಗಡೆ ಇಲ್ಲದ ಕಾರಣ ಬೈಯಪ್ಪನಹಳ್ಳಿ, ವೈಟ್ಫೀಲ್ಡ್, ದೇವನಗೊಂದಿ, ಮಾಲೂರಿನಲ್ಲಿ ಇಳಿಯುವ, ಹತ್ತುವ ಪ್ರಯಾಣಿಕರಿಗೆ ಪ್ರಯೋಜನವಿಲ್ಲದಂತಾಗಿದೆ. ಈ ರೈಲನ್ನು ಬೆಂಗಳೂರು ಕೆಎಸ್ಆರ್ನಿಂದಲೇ ಓಡಿಸಬೇಕು ಎಂದು ರೈಲ್ವೆ ಹೋರಾಟಗಾರ ಕೆ.ಎನ್. ಕೃಷ್ಣಪ್ರಸಾದ್ ಒತ್ತಾಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>