‘ಹೈಕೋರ್ಟ್ ಅವಲೋಕಿಸಿದಂತೆ ಕೆಲವು ವಿಷಯಗಳ ಬಗೆಗಿನ ವರದಿಯನ್ನು ಮರು ವಿಮರ್ಶಿಸಲು ನ್ಯಾಯಮೂರ್ತಿ ಕೆ. ಭಕ್ತವತ್ಸಲ ಆಯೋಗ ಹೆಚ್ಚುವರಿ ಸಮಯವನ್ನು ಕೇಳಿದೆ. ಕೋರ್ಟ್ ಆದೇಶದಂತೆ ಸರ್ಕಾರ ಮಹಿಳಾ ಮೀಸಲಾತಿಯನ್ನು ಮತ್ತೆ ನಿರ್ಧರಿಸಲು ಕೆಲವು ಪ್ರಕ್ರಿಯೆ ನಡೆಸಿದೆ. ಆಯೋಗಕ್ಕೆ ಹೆಚ್ಚಿನ ಸಮಯ ಬೇಕಿರುವುದರಿಂದ ಮೀಸಲಾತಿ ಪ್ರಕಟಿಸಲು ಕಾಲಾವಕಾಶ ಬೇಕು’ ಎಂದು ಮಧ್ಯಂತರ ಅರ್ಜಿಯಲ್ಲಿ ಮನವಿ ಮಾಡಲಾಗಿದೆ.