<p><strong>ಬೆಂಗಳೂರು:</strong> ಎಚ್ಆರ್ಬಿಆರ್ ಲೇಔಟ್ನ ರಸ್ತೆ ಬದಿಯಲ್ಲಿ ಗೃಹಿಣಿಯ ಮಾಂಗಲ್ಯದ ಸರ ಕಸಿದು ಪರಾರಿಯಾಗಿದ್ದ ಮೂವರನ್ನು ಬಾಣಸವಾಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.</p>.<p>ಮಾರತ್ಹಳ್ಳಿ ನಿವಾಸಿಗಳಾದ ಅಲ್ತಾಫ್ (22), ಶ್ರೀವರ್ಧನ್ (22) ಹಾಗೂ ಹರೀಶ್ಕುಮಾರ್ (23) ಬಂಧಿತರು.</p>.<p>ಆರೋಪಿಗಳಿಂದ 57.28 ಗ್ರಾಂ ಚಿನ್ನದ ಮಾಂಗಲ್ಯ ಸರವನ್ನು ಜಪ್ತಿ ಮಾಡಲಾಗಿದೆ. ಚಿನ್ನದ ಸರದ ಮೌಲ್ಯ ₹5.70 ಲಕ್ಷವೆಂದು ಅಂದಾಜಿಸಲಾಗಿದೆ ಎಂದು ಪೊಲೀಸರು ಹೇಳಿದರು.</p>.<p>ಎಚ್ಆರ್ಬಿಆರ್ ಲೇಔಟ್ನ ಎಂಟನೇ ಕ್ರಾಸ್ನಲ್ಲಿ ಜುಲೈ 12ರಂದು ರಾತ್ರಿ ಮಹಿಳೆಯೊಬ್ಬರು ನಡೆದು ತೆರಳುತ್ತಿದ್ದರು. ಆಗ ಬೈಕ್ನಲ್ಲಿ ಬಂದ ಮೂವರು ಚಿನ್ನದ ಸರವನ್ನು ಕಸಿದು ಪರಾರಿ ಆಗಿದ್ದರು. ಮಹಿಳೆ ನೀಡಿದ ದೂರು ಆಧರಿಸಿ ಮೂವರನ್ನು ಬಂಧಿಸಲಾಯಿತು ಎಂದು ಪೊಲೀಸರು ಹೇಳಿದರು.</p>.<p>ಮಾರತ್ಹಳ್ಳಿ ರಾಮಾಂಜನೇಯ ಲೇಔಟ್ ಪೇಯಿಂಗ್ ಗೆಸ್ಟ್ ಎದುರು ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಯಿತು. ವಿಚಾರಣೆ ವೇಳೆ ಸರ ಕಳ್ಳತನ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದರು.</p>.<p>ಕದ್ದ ಚಿನ್ನದ ಸರವನ್ನು ಆರೋಪಿಗಳು ಆಂಧ್ರಪ್ರದೇಶಕ್ಕೆ ಕೊಂಡೊಯ್ದು ಮದನಪಲ್ಲಿಯಲ್ಲಿರುವ ಮುತ್ತೋಟ್ ಫೈನಾನ್ಸ್ನಲ್ಲಿ ಅಡಮಾನ ಇಟ್ಟಿದ್ದರು. ಅದನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.</p>.<p><strong>ಬಾಡಿಗೆ ಬೈಕ್ನಲ್ಲಿ ಬಂದು ಕೃತ್ಯ:</strong> ಸರ ಅಪಹರಣಕ್ಕೆ ಆರೋಪಿಗಳು ಬಾಡಿಗೆಯ ಬೈಕ್ ಹಾಗೂ ಸ್ಕೂಟಿ ಬಳಸಿಕೊಳ್ಳುತ್ತಿದ್ದರು. ಸ್ಕೂಟಿ ಹಾಗೂ ಬೈಕ್ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಎಚ್ಆರ್ಬಿಆರ್ ಲೇಔಟ್ನ ರಸ್ತೆ ಬದಿಯಲ್ಲಿ ಗೃಹಿಣಿಯ ಮಾಂಗಲ್ಯದ ಸರ ಕಸಿದು ಪರಾರಿಯಾಗಿದ್ದ ಮೂವರನ್ನು ಬಾಣಸವಾಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.</p>.<p>ಮಾರತ್ಹಳ್ಳಿ ನಿವಾಸಿಗಳಾದ ಅಲ್ತಾಫ್ (22), ಶ್ರೀವರ್ಧನ್ (22) ಹಾಗೂ ಹರೀಶ್ಕುಮಾರ್ (23) ಬಂಧಿತರು.</p>.<p>ಆರೋಪಿಗಳಿಂದ 57.28 ಗ್ರಾಂ ಚಿನ್ನದ ಮಾಂಗಲ್ಯ ಸರವನ್ನು ಜಪ್ತಿ ಮಾಡಲಾಗಿದೆ. ಚಿನ್ನದ ಸರದ ಮೌಲ್ಯ ₹5.70 ಲಕ್ಷವೆಂದು ಅಂದಾಜಿಸಲಾಗಿದೆ ಎಂದು ಪೊಲೀಸರು ಹೇಳಿದರು.</p>.<p>ಎಚ್ಆರ್ಬಿಆರ್ ಲೇಔಟ್ನ ಎಂಟನೇ ಕ್ರಾಸ್ನಲ್ಲಿ ಜುಲೈ 12ರಂದು ರಾತ್ರಿ ಮಹಿಳೆಯೊಬ್ಬರು ನಡೆದು ತೆರಳುತ್ತಿದ್ದರು. ಆಗ ಬೈಕ್ನಲ್ಲಿ ಬಂದ ಮೂವರು ಚಿನ್ನದ ಸರವನ್ನು ಕಸಿದು ಪರಾರಿ ಆಗಿದ್ದರು. ಮಹಿಳೆ ನೀಡಿದ ದೂರು ಆಧರಿಸಿ ಮೂವರನ್ನು ಬಂಧಿಸಲಾಯಿತು ಎಂದು ಪೊಲೀಸರು ಹೇಳಿದರು.</p>.<p>ಮಾರತ್ಹಳ್ಳಿ ರಾಮಾಂಜನೇಯ ಲೇಔಟ್ ಪೇಯಿಂಗ್ ಗೆಸ್ಟ್ ಎದುರು ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಯಿತು. ವಿಚಾರಣೆ ವೇಳೆ ಸರ ಕಳ್ಳತನ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದರು.</p>.<p>ಕದ್ದ ಚಿನ್ನದ ಸರವನ್ನು ಆರೋಪಿಗಳು ಆಂಧ್ರಪ್ರದೇಶಕ್ಕೆ ಕೊಂಡೊಯ್ದು ಮದನಪಲ್ಲಿಯಲ್ಲಿರುವ ಮುತ್ತೋಟ್ ಫೈನಾನ್ಸ್ನಲ್ಲಿ ಅಡಮಾನ ಇಟ್ಟಿದ್ದರು. ಅದನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.</p>.<p><strong>ಬಾಡಿಗೆ ಬೈಕ್ನಲ್ಲಿ ಬಂದು ಕೃತ್ಯ:</strong> ಸರ ಅಪಹರಣಕ್ಕೆ ಆರೋಪಿಗಳು ಬಾಡಿಗೆಯ ಬೈಕ್ ಹಾಗೂ ಸ್ಕೂಟಿ ಬಳಸಿಕೊಳ್ಳುತ್ತಿದ್ದರು. ಸ್ಕೂಟಿ ಹಾಗೂ ಬೈಕ್ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>