<p><strong>ಬೆಂಗಳೂರು:</strong> ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಒತ್ತುವರಿಯಾಗಿದ್ದ ₹13.71 ಕೋಟಿ ಮೌಲ್ಯದ 4.04 ಎಕರೆ ಸರ್ಕಾರಿ ಜಮೀನು ವಶಕ್ಕೆ ಪಡೆಯಲಾಗಿದೆ.</p>.<p>ಜಿಲ್ಲೆಯಾದ್ಯಂತ ವಿವಿಧ ತಾಲ್ಲೂಕು ತಹಶೀಲ್ದಾರರು ತಮ್ಮ ವ್ಯಾಪ್ತಿಯಲ್ಲಿ ಒತ್ತುವರಿಯಾಗಿದ್ದ ಗುಂಡುತೋಪು, ರಾಜಕಾಲುವೆ, ಸ್ಮಶಾನ ಜಾಗಕ್ಕೆ ಭೇಟಿ ನೀಡಿ ತೆರವು ಕಾರ್ಯಾಚರಣೆ ಕೈಗೊಂಡರು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ ತಿಳಿಸಿದ್ದಾರೆ.</p>.<p>ದಾಸನಪುರ ಹೋಬಳಿಯ ಬೈಲುಕೋನೇನಹಳ್ಳಿ ಗ್ರಾಮದಲ್ಲಿ ₹5 ಕೋಟಿ ಮೌಲ್ಯದ 1.04 ಎಕರೆ ಗುಂಡುತೋಪು, ವರ್ತೂರು ಹೋಬಳಿಯ ಹರಳೂರು ಗ್ರಾಮದಲ್ಲಿ ₹4.40 ಕೋಟಿ ಮೌಲ್ಯದ 22 ಗುಂಟೆ ಗುಂಡುತೋಪು, ಬಿದರಹಳ್ಳಿ ಹೋಬಳಿ ದೊಡ್ಡಗುಬ್ಬಿ ಗ್ರಾಮದಲ್ಲಿ ₹1 ಕೋಟಿ ಮೌಲ್ಯದ 2 ಗುಂಟೆ ಗುಂಡುತೋಪು, ಅತ್ತಿಬೆಲೆ ಹೋಬಳಿಯ ವೀರಸಂದ್ರ ಗ್ರಾಮದಲ್ಲಿ ₹18 ಲಕ್ಷ ಮೌಲ್ಯದ 4 ಗುಂಟೆ ರಾಜಕಾಲುವೆ ಒತ್ತುವರಿ ತೆರವು ಮಾಡಲಾಗಿದೆ.</p>.<p>ತಾವರಕೆರೆ ಹೋಬಳಿ ಮಾರೇನಹಳ್ಳಿ ಗ್ರಾಮದಲ್ಲಿ ₹66 ಲಕ್ಷ ಮೌಲ್ಯದ 22 ಗುಂಟೆ ಗುಂಡುತೋಪು, ನಾಗನಹಳ್ಳಿ ಗ್ರಾಮದಲ್ಲಿ ₹ 57 ಲಕ್ಷ ಮೌಲ್ಯದ 19 ಗುಂಟೆ ಗುಂಡುತೋಪು ಹಾಗೂ ₹ 1.38 ಕೋಟಿ ಮೌಲ್ಯದ 1.06 ಗುಂಟೆ, ದಾಸನಪುರ ಹೋಬಳಿಯ ಸೊಂಡೇಕೊಪ್ಪ ಗ್ರಾಮದಲ್ಲಿ ₹52 ಲಕ್ಷ ಮೌಲ್ಯದ 5 ಗುಂಟೆ ಜಾಗವನ್ನು ತೆರವು ಮಾಡಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಒತ್ತುವರಿಯಾಗಿದ್ದ ₹13.71 ಕೋಟಿ ಮೌಲ್ಯದ 4.04 ಎಕರೆ ಸರ್ಕಾರಿ ಜಮೀನು ವಶಕ್ಕೆ ಪಡೆಯಲಾಗಿದೆ.</p>.<p>ಜಿಲ್ಲೆಯಾದ್ಯಂತ ವಿವಿಧ ತಾಲ್ಲೂಕು ತಹಶೀಲ್ದಾರರು ತಮ್ಮ ವ್ಯಾಪ್ತಿಯಲ್ಲಿ ಒತ್ತುವರಿಯಾಗಿದ್ದ ಗುಂಡುತೋಪು, ರಾಜಕಾಲುವೆ, ಸ್ಮಶಾನ ಜಾಗಕ್ಕೆ ಭೇಟಿ ನೀಡಿ ತೆರವು ಕಾರ್ಯಾಚರಣೆ ಕೈಗೊಂಡರು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ ತಿಳಿಸಿದ್ದಾರೆ.</p>.<p>ದಾಸನಪುರ ಹೋಬಳಿಯ ಬೈಲುಕೋನೇನಹಳ್ಳಿ ಗ್ರಾಮದಲ್ಲಿ ₹5 ಕೋಟಿ ಮೌಲ್ಯದ 1.04 ಎಕರೆ ಗುಂಡುತೋಪು, ವರ್ತೂರು ಹೋಬಳಿಯ ಹರಳೂರು ಗ್ರಾಮದಲ್ಲಿ ₹4.40 ಕೋಟಿ ಮೌಲ್ಯದ 22 ಗುಂಟೆ ಗುಂಡುತೋಪು, ಬಿದರಹಳ್ಳಿ ಹೋಬಳಿ ದೊಡ್ಡಗುಬ್ಬಿ ಗ್ರಾಮದಲ್ಲಿ ₹1 ಕೋಟಿ ಮೌಲ್ಯದ 2 ಗುಂಟೆ ಗುಂಡುತೋಪು, ಅತ್ತಿಬೆಲೆ ಹೋಬಳಿಯ ವೀರಸಂದ್ರ ಗ್ರಾಮದಲ್ಲಿ ₹18 ಲಕ್ಷ ಮೌಲ್ಯದ 4 ಗುಂಟೆ ರಾಜಕಾಲುವೆ ಒತ್ತುವರಿ ತೆರವು ಮಾಡಲಾಗಿದೆ.</p>.<p>ತಾವರಕೆರೆ ಹೋಬಳಿ ಮಾರೇನಹಳ್ಳಿ ಗ್ರಾಮದಲ್ಲಿ ₹66 ಲಕ್ಷ ಮೌಲ್ಯದ 22 ಗುಂಟೆ ಗುಂಡುತೋಪು, ನಾಗನಹಳ್ಳಿ ಗ್ರಾಮದಲ್ಲಿ ₹ 57 ಲಕ್ಷ ಮೌಲ್ಯದ 19 ಗುಂಟೆ ಗುಂಡುತೋಪು ಹಾಗೂ ₹ 1.38 ಕೋಟಿ ಮೌಲ್ಯದ 1.06 ಗುಂಟೆ, ದಾಸನಪುರ ಹೋಬಳಿಯ ಸೊಂಡೇಕೊಪ್ಪ ಗ್ರಾಮದಲ್ಲಿ ₹52 ಲಕ್ಷ ಮೌಲ್ಯದ 5 ಗುಂಟೆ ಜಾಗವನ್ನು ತೆರವು ಮಾಡಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>