<p><strong>ಬೆಂಗಳೂರು:</strong> ‘ಉದ್ಯಮ ಪ್ರಾರಂಭಿಸುವವರಿಗೆ ಬೆಂಗಳೂರಿನಲ್ಲಿ ಸಾಕಷ್ಟು ಅವಕಾಶಗಳಿವೆ. ಭವಿಷ್ಯದಲ್ಲಿ ಈ ನಗರವು ಜಾಗತಿಕ ಆವಿಷ್ಕಾರ ಕೇಂದ್ರವಾಗಿ ಹೊರಹೊಮ್ಮಲಿದೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು. </p>.<p>ಐಕ್ಯು ವೆಂಚರ್ಸ್ ವತಿಯಂದ ಹೊಸೂರು ರಸ್ತೆಯಲ್ಲಿ ಮಡಿವಾಳ ಸಂಚಾರ ಪೊಲೀಸ್ ಠಾಣೆ ಎದುರು ನವೋದ್ಯಮಿಗಳಿಗಾಗಿ ನಿರ್ಮಿಸಲಾಗಿರುವ ‘ಸ್ಟಾರ್ಟ್ಅಪ್ ಪಾರ್ಕ್’ ಉದ್ಘಾಟಿಸಿ, ಮಾತನಾಡಿದರು. </p>.<p>‘ಕರ್ನಾಟಕವು ಅವಕಾಶಗಳ ಸಾಗರವಾಗಿದ್ದು, ತಂತ್ರಜ್ಞಾನವಲ್ಲದೆ ಹಲವು ಉದ್ಯಮಗಳಿಗೆ ಸಾಕಷ್ಟು ಅವಕಾಶಗಳು ಇಲ್ಲಿವೆ. ಈ ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡು, ಯಶಸ್ಸು ಸಾಧಿಸಬೇಕು’ ಎಂದರು. </p>.<p>ಐಕ್ಯು ವೆಂಚರ್ಸ್ ಸಂಸ್ಥಾಪಕ ಶಫಿ ಶೌಕತ್, ‘ಬೆಂಗಳೂರು ನವೋದ್ಯಮಗಳಿಗೆ ಉತ್ತಮ ತಾಣ. ಈ ಸ್ಟಾರ್ಟ್ ಅಪ್ ಪಾರ್ಕ್ ಕರ್ನಾಟಕದ ಬೆಳವಣಿಗೆಗೆ ಎಂಜಿನ್ ಆಗಲಿದೆ. ಉದ್ಯೋಗ ಸೃಷ್ಟಿಯ ಜತೆಗೆ ಉದ್ಯಮಿಗಳು ಮತ್ತು ಹೂಡಿಕೆದಾರರು ಒಟ್ಟಿಗೆ ಕೆಲಸ ಮಾಡುವ ವೇದಿಕೆ ಇದಾಗಿದೆ’ ಎಂದು ಅಭಿಪ್ರಾಯಪಟ್ಟರು.</p>.<p>‘ನವೋದ್ಯಮಿಗಳಿಗೆ ಅಗತ್ಯ ಮೂಲಸೌಕರ್ಯದ ಜತೆಗೆ ನವೋದ್ಯಮ ಶಾಲೆ, ಹೂಡಿಕೆದಾರರ ಸ್ಟುಡಿಯೊ, ಮಾರ್ಗದರ್ಶನ ಕೇಂದ್ರ, ಕಾರ್ಯಕ್ರಮಗಳಿಗೆ ಸ್ಥಳಾವಕಾಶ, ಗ್ರಂಥಾಲಯ, ಪ್ರಯೋಗಾಲಯ ಸೇರಿ ಹಲವು ಸೌಲಭ್ಯ ಹೊಂದಿದೆ’ ಎಂದು ಹೇಳಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ‘ಉದ್ಯಮ ಪ್ರಾರಂಭಿಸುವವರಿಗೆ ಬೆಂಗಳೂರಿನಲ್ಲಿ ಸಾಕಷ್ಟು ಅವಕಾಶಗಳಿವೆ. ಭವಿಷ್ಯದಲ್ಲಿ ಈ ನಗರವು ಜಾಗತಿಕ ಆವಿಷ್ಕಾರ ಕೇಂದ್ರವಾಗಿ ಹೊರಹೊಮ್ಮಲಿದೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು. </p>.<p>ಐಕ್ಯು ವೆಂಚರ್ಸ್ ವತಿಯಂದ ಹೊಸೂರು ರಸ್ತೆಯಲ್ಲಿ ಮಡಿವಾಳ ಸಂಚಾರ ಪೊಲೀಸ್ ಠಾಣೆ ಎದುರು ನವೋದ್ಯಮಿಗಳಿಗಾಗಿ ನಿರ್ಮಿಸಲಾಗಿರುವ ‘ಸ್ಟಾರ್ಟ್ಅಪ್ ಪಾರ್ಕ್’ ಉದ್ಘಾಟಿಸಿ, ಮಾತನಾಡಿದರು. </p>.<p>‘ಕರ್ನಾಟಕವು ಅವಕಾಶಗಳ ಸಾಗರವಾಗಿದ್ದು, ತಂತ್ರಜ್ಞಾನವಲ್ಲದೆ ಹಲವು ಉದ್ಯಮಗಳಿಗೆ ಸಾಕಷ್ಟು ಅವಕಾಶಗಳು ಇಲ್ಲಿವೆ. ಈ ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡು, ಯಶಸ್ಸು ಸಾಧಿಸಬೇಕು’ ಎಂದರು. </p>.<p>ಐಕ್ಯು ವೆಂಚರ್ಸ್ ಸಂಸ್ಥಾಪಕ ಶಫಿ ಶೌಕತ್, ‘ಬೆಂಗಳೂರು ನವೋದ್ಯಮಗಳಿಗೆ ಉತ್ತಮ ತಾಣ. ಈ ಸ್ಟಾರ್ಟ್ ಅಪ್ ಪಾರ್ಕ್ ಕರ್ನಾಟಕದ ಬೆಳವಣಿಗೆಗೆ ಎಂಜಿನ್ ಆಗಲಿದೆ. ಉದ್ಯೋಗ ಸೃಷ್ಟಿಯ ಜತೆಗೆ ಉದ್ಯಮಿಗಳು ಮತ್ತು ಹೂಡಿಕೆದಾರರು ಒಟ್ಟಿಗೆ ಕೆಲಸ ಮಾಡುವ ವೇದಿಕೆ ಇದಾಗಿದೆ’ ಎಂದು ಅಭಿಪ್ರಾಯಪಟ್ಟರು.</p>.<p>‘ನವೋದ್ಯಮಿಗಳಿಗೆ ಅಗತ್ಯ ಮೂಲಸೌಕರ್ಯದ ಜತೆಗೆ ನವೋದ್ಯಮ ಶಾಲೆ, ಹೂಡಿಕೆದಾರರ ಸ್ಟುಡಿಯೊ, ಮಾರ್ಗದರ್ಶನ ಕೇಂದ್ರ, ಕಾರ್ಯಕ್ರಮಗಳಿಗೆ ಸ್ಥಳಾವಕಾಶ, ಗ್ರಂಥಾಲಯ, ಪ್ರಯೋಗಾಲಯ ಸೇರಿ ಹಲವು ಸೌಲಭ್ಯ ಹೊಂದಿದೆ’ ಎಂದು ಹೇಳಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>