ದೇಗುಲ ಸುತ್ತಲಿನ ರಸ್ತೆಗಳು ತಳಿರು ತೋರಣಗಳಿಂದ ಅಲಂಕೃತವಾಗಿವೆ. ಗಂಗಮ್ಮ, ನರಸಿಂಹಸ್ವಾಮಿ ದೇವಾಲಯ, ಕಾಡುಮಲ್ಲಿಕಾರ್ಜುನ ದೇವಸ್ಥಾನಗಳನ್ನು ಕಡಲೆಕಾಯಿಗಳಿಂದಲೇ ಅಲಂಕಾರ ಮಾಡಲಾಗಿದೆ. 20 ಅಡಿ ಉದ್ದ ಮತ್ತು 20 ಅಡಿ ಅಗಲದ ನಂದಿಯ ಪ್ರತಿಕೃತಿಯನ್ನು 800 ಕೆ.ಜಿ ಕಡಲೆಕಾಯಿಗಳಿಂದ ಅಲಂಕರಿಸಲಾಗಿದ್ದು, ಯುವಕರು ಅದರ ಮುಂದೆ ನಿಂತು ಸೆಲ್ಫಿ ತೆಗೆದುಕೊಳ್ಳುತ್ತಿದ್ದರು. ವಿವಿಧ ತಳಿಗಳ ಕಡಲೆಕಾಯಿಗಳ ರಾಶಿಗಳ ಸಾಲು, ಹಲವು ಬಗೆಯ ತಿಂಡಿ–ತಿನಿಸುಗಳು, ಆಟಿಕೆಗಳು, ಆಲಂಕಾರಿಕ ವಸ್ತುಗಳ ಮಾರಾಟ ಮಳಿಗೆಗಳು ಆರಂಭವಾಗಿವೆ.